<p><strong>ಕನಕಗಿರಿ:</strong> ಕೊಪ್ಪಳದ ಬಾಲ ಮಂದಿರದ ಬಾಲಕಿಯರ ವಸತಿ ಶಾಲೆಯಿಂದ ಶನಿವಾರ ಪರಾರಿಯಾದ ಇಬ್ಬರು ಬಾಲಕಿಯರಿಗೆ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಛಾಯದೇವಿ ಕನಕಾಚಲ ಅವರು ಆಶ್ರಯ ನೀಡಿದರು.<br /> <br /> ಬಾಲ ಮಂದಿರದ ಗೀತಾ ಮತ್ತು ಜಯ ಎಂಬ ಬಾಲಕಿಯರೆ ಪರಾರಿಯಾದವರು ಎಂದು ತಿಳಿದು ಬಂದಿದೆ.<br /> <br /> ಕೊಪ್ಪಳದ ವಸತಿ ಶಾಲೆಯಲ್ಲಿ ಕ್ರಮವಾಗಿ 4 ಮತ್ತು 5ನೇ ತರಗತಿಯಲ್ಲಿ ಕಲಿಯುತ್ತಿರುವ ಈ ಬಾಲೆಯರು ದ್ವಂದ್ವ ಹೇಳಿಕೆ ನೀಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.<br /> <br /> ಶನಿವಾರ ಬೆಳಿಗ್ಗೆ ಕೊಪ್ಪಳದಿಂದ ಪರಾರಿಯಾದ ಈ ಬಾಲಕಿಯರು 20 ಕಿ.ಮೀ. ದೂರದ ಕೊಡದಾಳ ಗ್ರಾಮದ ವರೆಗೆ ನಡೆದುಕೊಂಡು ಬಂದಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಖಚಿತ ಪಡಿಸಲು ಅವರಲ್ಲಿ ಬಸ್ ಪ್ರಯಾಣದ ಟಿಕೆಟ್ ಕಂಡು ಬಂತು. <br /> ದಾರಿಹೋಕರೊಬ್ಬರು ಬಾಲೆಯರನ್ನು ಕಂಡು ರೂ. 20 ನೀಡಿದ ಕಾರಣ ಕೊಡದಾಳ ಗ್ರಾಮದಿಂದ ಇಲ್ಲಿಗೆ ಬಸ್ನಲ್ಲಿ ಬಂದಿರುವುದನ್ನು ಅವರು ಖಚಿತ ಪಡಿಸಿದರು.<br /> <br /> ಬಾಲ ಮಂದಿರದ ಹಿರಿಯ ವಿದ್ಯಾರ್ಥಿಗಳು ಹಾಗೂ ಮೇಲ್ವಿಚಾಲಕರು ತಮಗೆ ಕಿರುಕುಳ ನೀಡಿದ ಕಾರಣ ತಾವು ಹಿಂಸೆ ತಾಳದೆ ಓಡಿ ಬಂದಿದ್ದೇವೆ ಎಂದು ಭಾನುವಾರ ದೇವಸ್ಥಾನಕ್ಕೆ ಭೇಟಿ ನೀಡಿದ `ಪ್ರಜಾವಾಣಿ'ಗೆ ತಿಳಿಸಿದರು.<br /> <br /> ತಂದೆ, ತಾಯಿಗಳನ್ನು ನೋಡುವ ಆಸೆಯಾಯಿತು, ಮೇಲ್ವಿಚಾರಕರು ಅವಕಾಶ ನೀಡಲಿಲ್ಲ ಹೀಗಾಗಿ ಇಲ್ಲಿಗೆ ಬಂದಿದ್ದೇವೆ ಎಂದು ಆಶ್ರಯ ನೀಡಿದ ಛಾಯದೇವಿ ಅವರ ಮುಂದೆ ತಮ್ಮ ಅಳಲು ವ್ಯಕ್ತಪಡಿಸಿದ್ದಾರೆ.<br /> <br /> ಕೊಪ್ಪಳದಲ್ಲಿ ಕಲಿಯುವ ಆಸೆ ತಮಗಿಲ್ಲ, ಅಲ್ಲಿಗೆ ಮತ್ತೆ ಹೋಗುವುದಿಲ್ಲ, ದಯವಿಟ್ಟು ಇಲ್ಲಿಯೆ ಆಶ್ರಯ ನೀಡಿ ಎಂದು ವಿನಂತಿಸಿಕೊಂಡಿದ್ದು ಕಂಡು ಬಂತು.<br /> <br /> ಕುಷ್ಟಗಿಯ ಬೋದೂರು ತಾಂಡದ ನಿವಾಸಿಯಾಗಿರುವ ಗೀತಾ ಎಂಬ ವಿದ್ಯಾರ್ಥಿ ಪಾಲಕರು ಆಂಧ್ರದಲ್ಲಿ ನೆಲಸಿದ್ದರೆ, ಗೀತಾ ಅವರ ತಂದೆ ಸರ್ಕಸ್ ಕಂಪೆನಿಯವರು ಎಂದು ತಿಳಿದಿದೆ.<br /> <br /> ಇಬ್ಬರು ಬಾಲಕಿಯರು ಕೂಲಿ ಕೆಲಸದಲ್ಲಿ ತಲ್ಲೆನರಾಗಿದ್ದ ಸಮಯದಲ್ಲಿ ಸೆರೆ ಹಿಡಿದು ಬಾಲ ಮಂದಿರದಲ್ಲಿ ಬಿಟ್ಟಿದ್ದರು ಎಂಬ ಮಾಹಿತಿ ವಿಚಾರಣೆ ಸಮಯದಲ್ಲಿ ತಿಳಿದು ಬಂದಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕನಕಗಿರಿ:</strong> ಕೊಪ್ಪಳದ ಬಾಲ ಮಂದಿರದ ಬಾಲಕಿಯರ ವಸತಿ ಶಾಲೆಯಿಂದ ಶನಿವಾರ ಪರಾರಿಯಾದ ಇಬ್ಬರು ಬಾಲಕಿಯರಿಗೆ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಛಾಯದೇವಿ ಕನಕಾಚಲ ಅವರು ಆಶ್ರಯ ನೀಡಿದರು.<br /> <br /> ಬಾಲ ಮಂದಿರದ ಗೀತಾ ಮತ್ತು ಜಯ ಎಂಬ ಬಾಲಕಿಯರೆ ಪರಾರಿಯಾದವರು ಎಂದು ತಿಳಿದು ಬಂದಿದೆ.<br /> <br /> ಕೊಪ್ಪಳದ ವಸತಿ ಶಾಲೆಯಲ್ಲಿ ಕ್ರಮವಾಗಿ 4 ಮತ್ತು 5ನೇ ತರಗತಿಯಲ್ಲಿ ಕಲಿಯುತ್ತಿರುವ ಈ ಬಾಲೆಯರು ದ್ವಂದ್ವ ಹೇಳಿಕೆ ನೀಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.<br /> <br /> ಶನಿವಾರ ಬೆಳಿಗ್ಗೆ ಕೊಪ್ಪಳದಿಂದ ಪರಾರಿಯಾದ ಈ ಬಾಲಕಿಯರು 20 ಕಿ.ಮೀ. ದೂರದ ಕೊಡದಾಳ ಗ್ರಾಮದ ವರೆಗೆ ನಡೆದುಕೊಂಡು ಬಂದಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಖಚಿತ ಪಡಿಸಲು ಅವರಲ್ಲಿ ಬಸ್ ಪ್ರಯಾಣದ ಟಿಕೆಟ್ ಕಂಡು ಬಂತು. <br /> ದಾರಿಹೋಕರೊಬ್ಬರು ಬಾಲೆಯರನ್ನು ಕಂಡು ರೂ. 20 ನೀಡಿದ ಕಾರಣ ಕೊಡದಾಳ ಗ್ರಾಮದಿಂದ ಇಲ್ಲಿಗೆ ಬಸ್ನಲ್ಲಿ ಬಂದಿರುವುದನ್ನು ಅವರು ಖಚಿತ ಪಡಿಸಿದರು.<br /> <br /> ಬಾಲ ಮಂದಿರದ ಹಿರಿಯ ವಿದ್ಯಾರ್ಥಿಗಳು ಹಾಗೂ ಮೇಲ್ವಿಚಾಲಕರು ತಮಗೆ ಕಿರುಕುಳ ನೀಡಿದ ಕಾರಣ ತಾವು ಹಿಂಸೆ ತಾಳದೆ ಓಡಿ ಬಂದಿದ್ದೇವೆ ಎಂದು ಭಾನುವಾರ ದೇವಸ್ಥಾನಕ್ಕೆ ಭೇಟಿ ನೀಡಿದ `ಪ್ರಜಾವಾಣಿ'ಗೆ ತಿಳಿಸಿದರು.<br /> <br /> ತಂದೆ, ತಾಯಿಗಳನ್ನು ನೋಡುವ ಆಸೆಯಾಯಿತು, ಮೇಲ್ವಿಚಾರಕರು ಅವಕಾಶ ನೀಡಲಿಲ್ಲ ಹೀಗಾಗಿ ಇಲ್ಲಿಗೆ ಬಂದಿದ್ದೇವೆ ಎಂದು ಆಶ್ರಯ ನೀಡಿದ ಛಾಯದೇವಿ ಅವರ ಮುಂದೆ ತಮ್ಮ ಅಳಲು ವ್ಯಕ್ತಪಡಿಸಿದ್ದಾರೆ.<br /> <br /> ಕೊಪ್ಪಳದಲ್ಲಿ ಕಲಿಯುವ ಆಸೆ ತಮಗಿಲ್ಲ, ಅಲ್ಲಿಗೆ ಮತ್ತೆ ಹೋಗುವುದಿಲ್ಲ, ದಯವಿಟ್ಟು ಇಲ್ಲಿಯೆ ಆಶ್ರಯ ನೀಡಿ ಎಂದು ವಿನಂತಿಸಿಕೊಂಡಿದ್ದು ಕಂಡು ಬಂತು.<br /> <br /> ಕುಷ್ಟಗಿಯ ಬೋದೂರು ತಾಂಡದ ನಿವಾಸಿಯಾಗಿರುವ ಗೀತಾ ಎಂಬ ವಿದ್ಯಾರ್ಥಿ ಪಾಲಕರು ಆಂಧ್ರದಲ್ಲಿ ನೆಲಸಿದ್ದರೆ, ಗೀತಾ ಅವರ ತಂದೆ ಸರ್ಕಸ್ ಕಂಪೆನಿಯವರು ಎಂದು ತಿಳಿದಿದೆ.<br /> <br /> ಇಬ್ಬರು ಬಾಲಕಿಯರು ಕೂಲಿ ಕೆಲಸದಲ್ಲಿ ತಲ್ಲೆನರಾಗಿದ್ದ ಸಮಯದಲ್ಲಿ ಸೆರೆ ಹಿಡಿದು ಬಾಲ ಮಂದಿರದಲ್ಲಿ ಬಿಟ್ಟಿದ್ದರು ಎಂಬ ಮಾಹಿತಿ ವಿಚಾರಣೆ ಸಮಯದಲ್ಲಿ ತಿಳಿದು ಬಂದಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>