<p><strong>ಗಂಗಾವತಿ</strong>: ಮಕ್ಕಳ ಮೂಲ ಹಕ್ಕುಗಳನ್ನು ಕಾಪಾಡುವ ಉದ್ದೇಶಕ್ಕೆ ಕೇಂದ್ರ ಸರ್ಕಾರ ಜಾರಿಗೆ ತಂದ ‘ಕಡ್ಡಾಯ ಶಿಕ್ಷಣ ಹಕ್ಕು’ ಅನುಷ್ಠಾನದ ಬಳಿಕವೂ ಶಿಕ್ಷಣದ ಮುಖ್ಯವಾಹಿನಿಯಿಂದ ದೂರ ಉಳಿಯುತ್ತಿರುವ ಮಕ್ಕಳ ಸಂಖ್ಯೆ ತಾಲ್ಲೂಕಿನಲ್ಲಿ ಹೆಚ್ಚಾಗುತ್ತಿರುವ ಆತಂಕಕಾರಿ ಅಂಶ ಬೆಳಕಿಗೆ ಬಂದಿದೆ.<br /> <br /> ಸರ್ಕಾರ ಜಾರಿಗೆ ತಂದ ಕ್ಷೀರಭಾಗ್ಯ, ಮಧ್ಯಾಹ್ನದ ಬಿಸಿಯೂಟ, ಸಮವಸ್ತ್ರ, ಸೈಕಲ್, ಪಠ್ಯಪುಸ್ತಕ, ಶೈಕ್ಷಣಿಕ ಪ್ರವಾಸ, ನೋಟ್ಬುಕ್, ಕೈಚೀಲ, ವಿದ್ಯಾರ್ಥಿ ವೇತನ, ದಿನಕ್ಕೆ ₨2 ಪ್ರೋತ್ಸಾಹ ಧನದಂತಹ ಯಾವ ಯೋಜನೆಯೂ ಪಾಲಕರನ್ನು ಮನಮುಟ್ಟುವಲ್ಲಿ ಸಫಲವಾಗಿಲ್ಲ.<br /> <br /> ಪರಿಣಾಮ ತಾಲ್ಲೂಕಿನ 8 ಹೋಬಳಿಯಲ್ಲಿ ತಲಾ 35ರಿಂದ 50ಕ್ಕೂ ಹೆಚ್ಚು 6 ರಿಂದ 14 ವಯೋಮಾನದ ಮಕ್ಕಳು ಶಾಲೆಯಿಂದ ದೂರ ಉಳಿದಿರುವ ಮಾಹಿತಿ ಶಿಕ್ಷಣ ಇಲಾಖೆ ನಡೆಸಿದ 2013–14ನೇ ಶೈಕ್ಷಣಿಕ ಸಾಲಿನ ಸಮೀಕ್ಷೆಯಿಂದ ಬಹಿರಂಗವಾಗಿದೆ.<br /> <br /> ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಮತ್ತೆ ಶಿಕ್ಷಣದ ಮುಖ್ಯವಾಹಿನಿಗೆ ತರುವ ಉದ್ದೇಶಕ್ಕೆ ಇಲಾಖೆ, ಏಪ್ರಿಲ್ 22 ರಿಂದ ತಾಲ್ಲೂಕಿನಲ್ಲಿ ಆರಂಭಿಸಿದ ಪ್ರಸಕ್ತ ಸಾಲಿನ ‘ಸೇತುಬಂಧ–ಚಿಣ್ಣರ ಅಂಗಳ’ಕ್ಕೆ ದಾಖಲಾಗುವ ಮಕ್ಕಳು ನಾಲ್ಕಾರು ದಿನಕ್ಕೇ ನಾಪತ್ತೆಯಾಗುತ್ತಿದ್ದಾರೆ ಎಂದು ಇಲಾಖೆಯ ಮೂಲಗಳು ತಿಳಿಸಿವೆ.<br /> <br /> <strong>ಪತ್ರ ನೀಡಿದ ಪಾಲಕರು: </strong>ಆರ್ಥಿಕ ದುಃಸ್ಥಿತಿ, ಆದಾಯದ ಮೂಲ, ಆಗಾಗ ಗುಳೆ ಹೋಗುವುದು, ಹೆಣ್ಣು ಮಕ್ಕಳ ಸಮಸ್ಯೆ, ವಯಸ್ಸಿನ ಅಂತರ ಹೀಗೆ ನಾನಾ ಕಾರಣಗಳನ್ನು ನಿಡುತ್ತಿರುವ ಪಾಲಕರು ತಮ್ಮ ಮಕ್ಕಳನ್ನು ಶಾಲೆಗೆ ಕಳಿಸುವಲ್ಲಿ ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎನ್ನಲಾಗಿದೆ.<br /> <br /> ಶಿಕ್ಷಣದಿಂದ ವಂಚಿಸುವುದು ಮಕ್ಕಳ ಹಕ್ಕು ಉಲ್ಲಂಘನೆಯಾಗಲಿದ್ದು, ಕಡ್ಡಾಯವಾಗಿ ಶಾಲೆಗೆ ಕಳುಹಿಸಿ ಎಂದು<br /> ಶಿಕ್ಷಕರು ಒತ್ತಾಯ ಮಾಡಿದ್ದಕ್ಕೆ ಹಿರೇಜಂತಕಲ್ ಕ್ಲಸ್ಟರ್ ವ್ಯಾಪ್ತಿಯೊಂದರಲ್ಲೇ 20ಕ್ಕೂ ಹೆಚ್ಚು ಪಾಲಕರು ‘ಮಕ್ಕಳನ್ನು ಶಾಲೆಗೆ ಕಳಿಸಲಾರೆವು’ ಎಂದು ಇಲಾಖೆಗೆ ಪತ್ರ ಬರೆದುಕೊಟ್ಟಿರುವ ಅಂಶ ಬಯಲಿಗೆ ಬಂದಿದೆ.<br /> <br /> ನಾಲ್ವರು ದೇವದಾಸಿಯರು ಶಿಕ್ಷಣ ಇಲಾಖೆಗೆ ಲಿಖಿತ ಪೂರ್ವಕ ನೀಡಿದ ಪತ್ರಗಳು ‘<strong>ಪ್ರಜಾವಾಣಿ’</strong>ಗೆ ಲಭಿಸಿದ್ದು, ಕಾನೂನು ಕ್ರಮ ಎದುರಿಸಲೂ ಸಿದ್ದವಿದ್ದೇವೆ. ಆದರೆ ಯಾವ ಕಾರಣಕ್ಕೂ ನಮ್ಮ ಮಕ್ಕಳನ್ನು ಶಾಲೆಗೆ ಕಳಿಸಲಾರೆವು’ ಎಂದು ಸ್ಪಷ್ಟವಾಗಿ ಹೇಳಿದ್ದಾರೆ.<br /> <br /> <strong>ಪಾಲಕರ ನಿರಾಸಕ್ತಿ</strong><br /> ಶಾಲೆಯಿಂದ ಯಾವ ಮಗುವು ಹೊರಗುಳಿಯದಂತೆ ವಿಶೇಷ ಆಂದೋಲನ ಹಮ್ಮಿಕೊಳ್ಳಲಾಗಿದೆ. ಆದರೆ ಪಾಲಕರ ನಿರಾಸಕ್ತಿಯಿಂದ ಶಿಕ್ಷಣ ವಂಚಿತ ಮಕ್ಕಳ ಸಂಖ್ಯೆ ಹೆಚ್ಚುತ್ತಲಿದೆ. ಕಾನೂನು ಕ್ರಮಕ್ಕೆ ಅವಕಾಶವಿದೆ. ಆದರೆ ಪಾಲಕರ ಆರ್ಥಿಕ ಸ್ಥಿಯ ಬಗ್ಗೆಯೂ ಮಾನವೀಯತೆ ಅನಿವಾರ್ಯ. ಈ ಬಗ್ಗೆ ಸಂಬಂಧಿತ ಇಲಾಖೆಗೆ ವರದಿ ಸಲ್ಲಿಸಿ ಗಮನ ಸೆಳೆಯಲಾಗುವುದು.<br /> <strong>–ವಿಜಯಕುಮಾರ ಬಾರಕೇರ, ಕ್ಷೇತ್ರ ಶಿಕ್ಷಣಾಧಿಕಾರಿ, ಗಂಗಾವತಿ</strong><br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗಂಗಾವತಿ</strong>: ಮಕ್ಕಳ ಮೂಲ ಹಕ್ಕುಗಳನ್ನು ಕಾಪಾಡುವ ಉದ್ದೇಶಕ್ಕೆ ಕೇಂದ್ರ ಸರ್ಕಾರ ಜಾರಿಗೆ ತಂದ ‘ಕಡ್ಡಾಯ ಶಿಕ್ಷಣ ಹಕ್ಕು’ ಅನುಷ್ಠಾನದ ಬಳಿಕವೂ ಶಿಕ್ಷಣದ ಮುಖ್ಯವಾಹಿನಿಯಿಂದ ದೂರ ಉಳಿಯುತ್ತಿರುವ ಮಕ್ಕಳ ಸಂಖ್ಯೆ ತಾಲ್ಲೂಕಿನಲ್ಲಿ ಹೆಚ್ಚಾಗುತ್ತಿರುವ ಆತಂಕಕಾರಿ ಅಂಶ ಬೆಳಕಿಗೆ ಬಂದಿದೆ.<br /> <br /> ಸರ್ಕಾರ ಜಾರಿಗೆ ತಂದ ಕ್ಷೀರಭಾಗ್ಯ, ಮಧ್ಯಾಹ್ನದ ಬಿಸಿಯೂಟ, ಸಮವಸ್ತ್ರ, ಸೈಕಲ್, ಪಠ್ಯಪುಸ್ತಕ, ಶೈಕ್ಷಣಿಕ ಪ್ರವಾಸ, ನೋಟ್ಬುಕ್, ಕೈಚೀಲ, ವಿದ್ಯಾರ್ಥಿ ವೇತನ, ದಿನಕ್ಕೆ ₨2 ಪ್ರೋತ್ಸಾಹ ಧನದಂತಹ ಯಾವ ಯೋಜನೆಯೂ ಪಾಲಕರನ್ನು ಮನಮುಟ್ಟುವಲ್ಲಿ ಸಫಲವಾಗಿಲ್ಲ.<br /> <br /> ಪರಿಣಾಮ ತಾಲ್ಲೂಕಿನ 8 ಹೋಬಳಿಯಲ್ಲಿ ತಲಾ 35ರಿಂದ 50ಕ್ಕೂ ಹೆಚ್ಚು 6 ರಿಂದ 14 ವಯೋಮಾನದ ಮಕ್ಕಳು ಶಾಲೆಯಿಂದ ದೂರ ಉಳಿದಿರುವ ಮಾಹಿತಿ ಶಿಕ್ಷಣ ಇಲಾಖೆ ನಡೆಸಿದ 2013–14ನೇ ಶೈಕ್ಷಣಿಕ ಸಾಲಿನ ಸಮೀಕ್ಷೆಯಿಂದ ಬಹಿರಂಗವಾಗಿದೆ.<br /> <br /> ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಮತ್ತೆ ಶಿಕ್ಷಣದ ಮುಖ್ಯವಾಹಿನಿಗೆ ತರುವ ಉದ್ದೇಶಕ್ಕೆ ಇಲಾಖೆ, ಏಪ್ರಿಲ್ 22 ರಿಂದ ತಾಲ್ಲೂಕಿನಲ್ಲಿ ಆರಂಭಿಸಿದ ಪ್ರಸಕ್ತ ಸಾಲಿನ ‘ಸೇತುಬಂಧ–ಚಿಣ್ಣರ ಅಂಗಳ’ಕ್ಕೆ ದಾಖಲಾಗುವ ಮಕ್ಕಳು ನಾಲ್ಕಾರು ದಿನಕ್ಕೇ ನಾಪತ್ತೆಯಾಗುತ್ತಿದ್ದಾರೆ ಎಂದು ಇಲಾಖೆಯ ಮೂಲಗಳು ತಿಳಿಸಿವೆ.<br /> <br /> <strong>ಪತ್ರ ನೀಡಿದ ಪಾಲಕರು: </strong>ಆರ್ಥಿಕ ದುಃಸ್ಥಿತಿ, ಆದಾಯದ ಮೂಲ, ಆಗಾಗ ಗುಳೆ ಹೋಗುವುದು, ಹೆಣ್ಣು ಮಕ್ಕಳ ಸಮಸ್ಯೆ, ವಯಸ್ಸಿನ ಅಂತರ ಹೀಗೆ ನಾನಾ ಕಾರಣಗಳನ್ನು ನಿಡುತ್ತಿರುವ ಪಾಲಕರು ತಮ್ಮ ಮಕ್ಕಳನ್ನು ಶಾಲೆಗೆ ಕಳಿಸುವಲ್ಲಿ ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎನ್ನಲಾಗಿದೆ.<br /> <br /> ಶಿಕ್ಷಣದಿಂದ ವಂಚಿಸುವುದು ಮಕ್ಕಳ ಹಕ್ಕು ಉಲ್ಲಂಘನೆಯಾಗಲಿದ್ದು, ಕಡ್ಡಾಯವಾಗಿ ಶಾಲೆಗೆ ಕಳುಹಿಸಿ ಎಂದು<br /> ಶಿಕ್ಷಕರು ಒತ್ತಾಯ ಮಾಡಿದ್ದಕ್ಕೆ ಹಿರೇಜಂತಕಲ್ ಕ್ಲಸ್ಟರ್ ವ್ಯಾಪ್ತಿಯೊಂದರಲ್ಲೇ 20ಕ್ಕೂ ಹೆಚ್ಚು ಪಾಲಕರು ‘ಮಕ್ಕಳನ್ನು ಶಾಲೆಗೆ ಕಳಿಸಲಾರೆವು’ ಎಂದು ಇಲಾಖೆಗೆ ಪತ್ರ ಬರೆದುಕೊಟ್ಟಿರುವ ಅಂಶ ಬಯಲಿಗೆ ಬಂದಿದೆ.<br /> <br /> ನಾಲ್ವರು ದೇವದಾಸಿಯರು ಶಿಕ್ಷಣ ಇಲಾಖೆಗೆ ಲಿಖಿತ ಪೂರ್ವಕ ನೀಡಿದ ಪತ್ರಗಳು ‘<strong>ಪ್ರಜಾವಾಣಿ’</strong>ಗೆ ಲಭಿಸಿದ್ದು, ಕಾನೂನು ಕ್ರಮ ಎದುರಿಸಲೂ ಸಿದ್ದವಿದ್ದೇವೆ. ಆದರೆ ಯಾವ ಕಾರಣಕ್ಕೂ ನಮ್ಮ ಮಕ್ಕಳನ್ನು ಶಾಲೆಗೆ ಕಳಿಸಲಾರೆವು’ ಎಂದು ಸ್ಪಷ್ಟವಾಗಿ ಹೇಳಿದ್ದಾರೆ.<br /> <br /> <strong>ಪಾಲಕರ ನಿರಾಸಕ್ತಿ</strong><br /> ಶಾಲೆಯಿಂದ ಯಾವ ಮಗುವು ಹೊರಗುಳಿಯದಂತೆ ವಿಶೇಷ ಆಂದೋಲನ ಹಮ್ಮಿಕೊಳ್ಳಲಾಗಿದೆ. ಆದರೆ ಪಾಲಕರ ನಿರಾಸಕ್ತಿಯಿಂದ ಶಿಕ್ಷಣ ವಂಚಿತ ಮಕ್ಕಳ ಸಂಖ್ಯೆ ಹೆಚ್ಚುತ್ತಲಿದೆ. ಕಾನೂನು ಕ್ರಮಕ್ಕೆ ಅವಕಾಶವಿದೆ. ಆದರೆ ಪಾಲಕರ ಆರ್ಥಿಕ ಸ್ಥಿಯ ಬಗ್ಗೆಯೂ ಮಾನವೀಯತೆ ಅನಿವಾರ್ಯ. ಈ ಬಗ್ಗೆ ಸಂಬಂಧಿತ ಇಲಾಖೆಗೆ ವರದಿ ಸಲ್ಲಿಸಿ ಗಮನ ಸೆಳೆಯಲಾಗುವುದು.<br /> <strong>–ವಿಜಯಕುಮಾರ ಬಾರಕೇರ, ಕ್ಷೇತ್ರ ಶಿಕ್ಷಣಾಧಿಕಾರಿ, ಗಂಗಾವತಿ</strong><br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>