<p>ಹನುಮಸಾಗರ: ಸಮೃದ್ಧವಾಗಿ ರೋಹಿಣಿ ಮಳೆ ಸುರಿದ ಪರಿಣಾಮಬಹುತೇಕ ಭಾಗದಲ್ಲಿ ಬಿತ್ತನೆ ಕಾರ್ಯ ಭರದಿಂದ ಸಾಗಿದ್ದು ಭಾನುವಾರ ಕಂಡು ಬಂತು.<br /> <br /> ಕಳೆದ ವಾರದಿಂದಲೇ ಈ ಭಾಗದಲ್ಲಿ ಅಲ್ಪಸ್ವಲ್ಪ ಮಳೆಯಾಗಿದ್ದರಿಂದ ರೈತರು ಮತ್ತೆ ಮಳೆ ಸುರಿಯಬಹುದೆಂದು ಬಿತ್ತನೆ ಆರಂಭಿಸ್ದ್ದಿದರು. ಇದೀಗ ಮತ್ತೆ ಮಳೆಯಾಗಿದ್ದು ಕೆಲ ರೈತರ ಸಂತಸ ಇಮ್ಮಡಿಯಾಗಲು ಕಾರಣವಾಗಿದೆ. ಜೋಳ, ಸಜ್ಜೆ, ಸೂರ್ಯಕಾಂತಿ, ಹೆಸರು ಹಾಗೂ ಕೆಲವೆಡೆ ಹಬ್ಬುಶೇಂಗಾ ಬಿತ್ತನೆ ಮಾಡುತ್ತಿರುವುದು ಕಂಡು ಬಂತು. ಈ ಬಾರಿ ಹೆಚ್ಚಿನ ಪ್ರಮಾಣದಲ್ಲಿ ಜೋಳ ಬಿತ್ತನೆ ನಡೆದಿದ್ದು ವಿಶೇಷವಾಗಿದೆ.<br /> <br /> ಕಳೆದ ಎರಡು ವರ್ಷಗಳಿಂದ ಸರಿಯಾದ ಸಮಯಕ್ಕೆ ಮಳೆಯಾಗದಿರುವುದರಿಂದಾಗಿ ಹೆಸರು, ಮಟಿಗೆ, ತೊಗರೆ, ಎಳ್ಳಿನಂತಹ ಬೀಜಗಳ ಬಿತ್ತನೆ ನಡೆದಿದ್ದಿಲ್ಲ. ಆದರೆ ಈ ಬಾರಿ ಎಲ್ಲ ಬೀಜಗಳ ಭರಪೂರ ಬಿತ್ತನೆ ನಡೆದಿರುವ ಬಗ್ಗೆ ರೈತರು ಹೇಳುತ್ತಾರೆ. ಎತ್ತುಗಳ ಕೊರತೆ ಇರುವುದರಿಂದಾಗಿ ಗಳೆ ಬಾಡಿಗೆ ಗಗನಕ್ಕೇರಿದ್ದು ಒಂದು ಜೊತೆ ಗಳೆಗಳ ಬಾಡಿಗೆ 2,500 ರೂಪಾಯಿಯಾಗಿರುವುದಾಗಿ ರಾಜೇಸಾಬ ಹೇಳುತ್ತಾರೆ.<br /> <br /> ಆದರೂ ಸರಿಯಾದ ಸಮಯಕ್ಕೆ ಗಳೆವುಗಳು ದೊರೆಯದೆ ತಮ್ಮ ಜಮೀನುಗಳಲ್ಲಿ ಬಿತ್ತನೆ ಮುಗಿದ ನಂತರ ಬರುವುದಾಗಿ ಗಳೆವುಗಳ ಮಾಲೀಕರು ಹೇಳುತ್ತಾರೆ ಎಂದು ತಮ್ಮ ಅಳಲು ತೋಡಿಕೊಂಡರು. ಕೆಲ ರೈತರು ಟ್ರ್ಯಾಕ್ಟರ್ ಮೂಲಕ ಬಿತ್ತನೆ ನಡೆಸುತ್ತಿದ್ದಾರೆ. ಈ ಭಾಗದ ರೈತರು ಈ ಬಾರಿ ಸುರಿದ ಮಳೆಯಿಂದ ಸಂತಸಗೊಂಡು ಕೂರಗಿಗಳಿಗೆ ಪೂಜೆ ಮಾಡಿ ಚಕ್ಕಡಿಗಳಿಗೆ ತಳಿರು ತೋರಣಗಳಿಂದ ಶೃಂಗಾರ ಮಾಡಿ ಬಿತ್ತನೆಗೆ ಹೊರಟಿರುವ ದೃಶ್ಯ ಕಂಡು ಬಂದಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಹನುಮಸಾಗರ: ಸಮೃದ್ಧವಾಗಿ ರೋಹಿಣಿ ಮಳೆ ಸುರಿದ ಪರಿಣಾಮಬಹುತೇಕ ಭಾಗದಲ್ಲಿ ಬಿತ್ತನೆ ಕಾರ್ಯ ಭರದಿಂದ ಸಾಗಿದ್ದು ಭಾನುವಾರ ಕಂಡು ಬಂತು.<br /> <br /> ಕಳೆದ ವಾರದಿಂದಲೇ ಈ ಭಾಗದಲ್ಲಿ ಅಲ್ಪಸ್ವಲ್ಪ ಮಳೆಯಾಗಿದ್ದರಿಂದ ರೈತರು ಮತ್ತೆ ಮಳೆ ಸುರಿಯಬಹುದೆಂದು ಬಿತ್ತನೆ ಆರಂಭಿಸ್ದ್ದಿದರು. ಇದೀಗ ಮತ್ತೆ ಮಳೆಯಾಗಿದ್ದು ಕೆಲ ರೈತರ ಸಂತಸ ಇಮ್ಮಡಿಯಾಗಲು ಕಾರಣವಾಗಿದೆ. ಜೋಳ, ಸಜ್ಜೆ, ಸೂರ್ಯಕಾಂತಿ, ಹೆಸರು ಹಾಗೂ ಕೆಲವೆಡೆ ಹಬ್ಬುಶೇಂಗಾ ಬಿತ್ತನೆ ಮಾಡುತ್ತಿರುವುದು ಕಂಡು ಬಂತು. ಈ ಬಾರಿ ಹೆಚ್ಚಿನ ಪ್ರಮಾಣದಲ್ಲಿ ಜೋಳ ಬಿತ್ತನೆ ನಡೆದಿದ್ದು ವಿಶೇಷವಾಗಿದೆ.<br /> <br /> ಕಳೆದ ಎರಡು ವರ್ಷಗಳಿಂದ ಸರಿಯಾದ ಸಮಯಕ್ಕೆ ಮಳೆಯಾಗದಿರುವುದರಿಂದಾಗಿ ಹೆಸರು, ಮಟಿಗೆ, ತೊಗರೆ, ಎಳ್ಳಿನಂತಹ ಬೀಜಗಳ ಬಿತ್ತನೆ ನಡೆದಿದ್ದಿಲ್ಲ. ಆದರೆ ಈ ಬಾರಿ ಎಲ್ಲ ಬೀಜಗಳ ಭರಪೂರ ಬಿತ್ತನೆ ನಡೆದಿರುವ ಬಗ್ಗೆ ರೈತರು ಹೇಳುತ್ತಾರೆ. ಎತ್ತುಗಳ ಕೊರತೆ ಇರುವುದರಿಂದಾಗಿ ಗಳೆ ಬಾಡಿಗೆ ಗಗನಕ್ಕೇರಿದ್ದು ಒಂದು ಜೊತೆ ಗಳೆಗಳ ಬಾಡಿಗೆ 2,500 ರೂಪಾಯಿಯಾಗಿರುವುದಾಗಿ ರಾಜೇಸಾಬ ಹೇಳುತ್ತಾರೆ.<br /> <br /> ಆದರೂ ಸರಿಯಾದ ಸಮಯಕ್ಕೆ ಗಳೆವುಗಳು ದೊರೆಯದೆ ತಮ್ಮ ಜಮೀನುಗಳಲ್ಲಿ ಬಿತ್ತನೆ ಮುಗಿದ ನಂತರ ಬರುವುದಾಗಿ ಗಳೆವುಗಳ ಮಾಲೀಕರು ಹೇಳುತ್ತಾರೆ ಎಂದು ತಮ್ಮ ಅಳಲು ತೋಡಿಕೊಂಡರು. ಕೆಲ ರೈತರು ಟ್ರ್ಯಾಕ್ಟರ್ ಮೂಲಕ ಬಿತ್ತನೆ ನಡೆಸುತ್ತಿದ್ದಾರೆ. ಈ ಭಾಗದ ರೈತರು ಈ ಬಾರಿ ಸುರಿದ ಮಳೆಯಿಂದ ಸಂತಸಗೊಂಡು ಕೂರಗಿಗಳಿಗೆ ಪೂಜೆ ಮಾಡಿ ಚಕ್ಕಡಿಗಳಿಗೆ ತಳಿರು ತೋರಣಗಳಿಂದ ಶೃಂಗಾರ ಮಾಡಿ ಬಿತ್ತನೆಗೆ ಹೊರಟಿರುವ ದೃಶ್ಯ ಕಂಡು ಬಂದಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>