<p><span style="font-size: 26px;">ಗಂಗಾವತಿ: ತಾಲ್ಲೂಕಿನ ಮಳೆಯಾಶ್ರಿತ (ಖುಷ್ಕಿ) ಒಣ ಪ್ರದೇಶದ ನಾಲ್ಕು ಹೋಬಳಿಗಳಲ್ಲಿ ಬೆಳೆಯಲಾಗಿರುವ ಮುಂಗಾರು ಹಂಗಾಮಿನ ಹೆಸರು ಬೆಳೆಗೆ ರಸ ಹೀರುವ ಕೆಸರು (ಬಣ್ಣ) ಹುಳುವಿನ ಕಾಟ ಅಧಿಕವಾಗಿದೆ. ಸಾಕಷ್ಟು ಉಪಚಾರದ ಬಳಿಕವೂ ಕೀಟ ಭಾದೆ ನಿಯಂತ್ರಣಕ್ಕೆ ಬಾರದ್ದರಿಂದ ರೈತರು ಸಂಧಿಗ್ಧತೆಗೆ ಸಿಲುಕಿದ್ದಾರೆ.</span><br /> <br /> ಒಣ ಬೇಸಾಯ ಅಥವಾ ಖುಷ್ಕಿ ಪ್ರದೇಶ ಎನಿಸಿಕೊಂಡಿರುವ ಮಳೆಯಾಶ್ರಿತ ತಾಲ್ಲೂಕಿನ ಹುಲಿಹೈದರ, ನವಲಿ, ಕನಕಗಿರಿ ಮತ್ತು ವೆಂಕಟಗಿರಿ ಹೋಬಳಿ ವ್ಯಾಪ್ತಿಯಲ್ಲಿ ರೈತರು ಕೆಲ ಭಾಗದಲ್ಲಿ ಮುಖ್ಯ ಹಾಗೂ ಇತರೆಡೆ ಉಪ ಬೆಳೆಯನ್ನಾಗಿ ಒಟ್ಟು 650 ಹೆಕ್ಟೇರು ಪ್ರದೇಶದಲ್ಲಿ ಹೆಸರು ಬೆಳೆದಿದ್ದಾರೆ.<br /> <br /> ಕಳೆದ ಜೂನ್–ಜುಲೈನಲ್ಲಿ ನಾಟಿ ಮಾಡಿದ ಹೆಸರು ಬೆಳೆ ಇದೀಗ ಕೊಯ್ಲಿಗೆ ಬಂದಿದೆ. ಆದರೆ ತೆನೆಕಟ್ಟಿ ಕಾಳಾಗುವ ಹಂತದಲ್ಲಿ ಅಂಟಿಕೊಂಡಿರುವ ರಸಹೀರುವ ಕೀಟದಿಂದಾಗಿ ರೈತರು ನಿರೀಕ್ಷಿಸಿದ ರೀತಿಯಲ್ಲಿ ಬೆಳೆ ಫಸಲು ಅಥವಾ ಇಳುವರಿ ಬಂದಿಲ್ಲ.<br /> <br /> <strong>ರೋಗ ಲಕ್ಷಣ:</strong> ಹೆಸರು ಬೆಳೆಗೆ ಅಂಟಿಕೊಂಡಿರುವ ರೋಗಕ್ಕೆ ಗ್ರಾಮೀಣ ಭಾಗದಲ್ಲಿ ಮುಟ್ಟಿಗೆ, ಮುದುಡು, ರಸ ಹೀರುವ, ಕೆಸರು ರೋಗ ಹೀಗೆ ಹತ್ತಾರು ವಿಧದಲ್ಲಿ ಕರೆಯುತ್ತಾರೆ. ರೋಗ ಭಾದಿಸಿದ ಗಿಡದ ಎಲೆಗಳು ಕಾಂತಿ ಹೀನವಾಗಿದ್ದು, ಮುದುಡಿ ಸುಕ್ಕುಗಟ್ಟಿರುತ್ತವೆ.<br /> <br /> ಕಾಯಿಯ ಗೊಂಚಲಿನಲ್ಲಿ ಸಣ್ಣ ಪ್ರಮಾಣದ ಹುಳುಗಳ ರಾಶಿ ಕಂಡು ಬರುತ್ತಿದ್ದು, ರಸ ಹೀರುತ್ತವೆ. ಕೆಲ ಬಾರಿ ಹೆಸರು ಕಾಯಿಯೊಳಗೆ ನುಸುಳುತ್ತಿರುವ ಹುಳುಗಳು ಕಾಳನ್ನು ಜೊಳ್ಳಾಗಿಸುವುದು ಇಲ್ಲವೆ ತಿಂದು ಹಾಕುತ್ತಿವೆ ಎಂದು ರೈತರು ತಿಳಿಸಿದ್ದಾರೆ.<br /> <br /> <strong>ಸತತ ಯತ್ನ: </strong>‘ರಸ ಹೀರುವ ಕಾಯಿಲೆಯಿಂದ ಇಳುವರಿ ಕಡಿಮೆಯಾಗುತ್ತಿದೆ. ಕೀಟ ನಾಶಕ ಸಿಂಪಡಿಸಿದರೂ ನಿಯಂತ್ರಣಕ್ಕೆ ಬರುತ್ತಿಲ್ಲ. ಆದರೆ ಸಿಂಪಡಣೆಯಿಂದಾಗಿ ಕೀಟ ಭಾದೆ ಇನ್ನೊಂದು ಗಿಡಕ್ಕೆ ವ್ಯಾಪಿಸದಂತೆ ಮಾತ್ರ ತಡೆಯಬಹುದು’ ಎಂದು ವೆಂಕಟಗಿರಿ–ಬಂಡ್ರಾಳದ ರೈತ ನಜೀರಸಾಬ ಕಂಪ್ಲಿ ಹೇಳಿದರು.<br /> <br /> ‘ಕಾಯಿಲೆಗೀಡಾದ ಹೊಲದಲ್ಲಿನ ಹೆಸರು ಗಿಡದ ಎಲೆಗಳು ಮುದುಡಿರುತ್ತವೆ. ಕೆಲ ಬಾರಿ ಮುದುಡಿದ ಎಲೆಯೊಳಗೆ ಕೀಟ ಸಂತಾನೋತ್ಪತ್ತಿ ಮಾಡಿ ಇಡೀ ಗಿಡವನ್ನು ನಾಶ ಮಾಡುತ್ತಿದೆ’ ಎಂದು ಉಡಮಕಲ್ ಗ್ರಾಮದ<br /> ರೈತ ವಿರೇಶಪ್ಪ ಪವಾಡಶೆಟ್ಟಿ ಹೇಳಿದರು.<br /> <br /> <strong>ರೈತ ಕೇಂದ್ರ ಸಂಪರ್ಕಿಸಿ:</strong> ಈಗಾಗಲೆ ಮುಂಗಾರು ಹಂಗಾಮಿಗೆ ತಾಲ್ಲೂಕಿನಾದ್ಯಂತ ನಾಟಿ ಮಾಡಿದ್ದ ಸುಮಾರು 1,625 ಎಕರೆ ಪ್ರದೇಶದ ಪೈಕಿ ಬಹುತೇಕ ಭಾಗದ ಹೆಸರನ್ನು ಕಟಾವು ಮಾಡಲಾಗಿದೆ ಎಂದು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ರಮೇಶ ನಾಯಕ ತಿಳಿಸಿದ್ದಾರೆ.<br /> <br /> ಹೆಸರಿಗೆ ರಸಹೀರುವ, ಎಲೆ ತಿನ್ನುವ ಮತ್ತು ಹೇನು ಭಾದೆ ಸಹಜ. ಹೆಸರಿಗೆ ತಗಲಿರುವ ಕೀಟದಿಂದ ರೈತರು ಆತಂಕ ಪಡುವ ಅಗತ್ಯವಿಲ್ಲ. ಸಮೀಪದ ರೈತ ಸಂಪರ್ಕ ಕೇಂದ್ರಗಳಲ್ಲಿ ಅಧಿಕಾರಿಗಳನ್ನು ಸಂಪರ್ಕಿಸಿದರೆ ಸಾಕಷ್ಟು ಉಪಚಾರದ ಔಷಧಿ ಸಿದ್ದವಿದೆ ಎಂದು ನಾಯಕ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><span style="font-size: 26px;">ಗಂಗಾವತಿ: ತಾಲ್ಲೂಕಿನ ಮಳೆಯಾಶ್ರಿತ (ಖುಷ್ಕಿ) ಒಣ ಪ್ರದೇಶದ ನಾಲ್ಕು ಹೋಬಳಿಗಳಲ್ಲಿ ಬೆಳೆಯಲಾಗಿರುವ ಮುಂಗಾರು ಹಂಗಾಮಿನ ಹೆಸರು ಬೆಳೆಗೆ ರಸ ಹೀರುವ ಕೆಸರು (ಬಣ್ಣ) ಹುಳುವಿನ ಕಾಟ ಅಧಿಕವಾಗಿದೆ. ಸಾಕಷ್ಟು ಉಪಚಾರದ ಬಳಿಕವೂ ಕೀಟ ಭಾದೆ ನಿಯಂತ್ರಣಕ್ಕೆ ಬಾರದ್ದರಿಂದ ರೈತರು ಸಂಧಿಗ್ಧತೆಗೆ ಸಿಲುಕಿದ್ದಾರೆ.</span><br /> <br /> ಒಣ ಬೇಸಾಯ ಅಥವಾ ಖುಷ್ಕಿ ಪ್ರದೇಶ ಎನಿಸಿಕೊಂಡಿರುವ ಮಳೆಯಾಶ್ರಿತ ತಾಲ್ಲೂಕಿನ ಹುಲಿಹೈದರ, ನವಲಿ, ಕನಕಗಿರಿ ಮತ್ತು ವೆಂಕಟಗಿರಿ ಹೋಬಳಿ ವ್ಯಾಪ್ತಿಯಲ್ಲಿ ರೈತರು ಕೆಲ ಭಾಗದಲ್ಲಿ ಮುಖ್ಯ ಹಾಗೂ ಇತರೆಡೆ ಉಪ ಬೆಳೆಯನ್ನಾಗಿ ಒಟ್ಟು 650 ಹೆಕ್ಟೇರು ಪ್ರದೇಶದಲ್ಲಿ ಹೆಸರು ಬೆಳೆದಿದ್ದಾರೆ.<br /> <br /> ಕಳೆದ ಜೂನ್–ಜುಲೈನಲ್ಲಿ ನಾಟಿ ಮಾಡಿದ ಹೆಸರು ಬೆಳೆ ಇದೀಗ ಕೊಯ್ಲಿಗೆ ಬಂದಿದೆ. ಆದರೆ ತೆನೆಕಟ್ಟಿ ಕಾಳಾಗುವ ಹಂತದಲ್ಲಿ ಅಂಟಿಕೊಂಡಿರುವ ರಸಹೀರುವ ಕೀಟದಿಂದಾಗಿ ರೈತರು ನಿರೀಕ್ಷಿಸಿದ ರೀತಿಯಲ್ಲಿ ಬೆಳೆ ಫಸಲು ಅಥವಾ ಇಳುವರಿ ಬಂದಿಲ್ಲ.<br /> <br /> <strong>ರೋಗ ಲಕ್ಷಣ:</strong> ಹೆಸರು ಬೆಳೆಗೆ ಅಂಟಿಕೊಂಡಿರುವ ರೋಗಕ್ಕೆ ಗ್ರಾಮೀಣ ಭಾಗದಲ್ಲಿ ಮುಟ್ಟಿಗೆ, ಮುದುಡು, ರಸ ಹೀರುವ, ಕೆಸರು ರೋಗ ಹೀಗೆ ಹತ್ತಾರು ವಿಧದಲ್ಲಿ ಕರೆಯುತ್ತಾರೆ. ರೋಗ ಭಾದಿಸಿದ ಗಿಡದ ಎಲೆಗಳು ಕಾಂತಿ ಹೀನವಾಗಿದ್ದು, ಮುದುಡಿ ಸುಕ್ಕುಗಟ್ಟಿರುತ್ತವೆ.<br /> <br /> ಕಾಯಿಯ ಗೊಂಚಲಿನಲ್ಲಿ ಸಣ್ಣ ಪ್ರಮಾಣದ ಹುಳುಗಳ ರಾಶಿ ಕಂಡು ಬರುತ್ತಿದ್ದು, ರಸ ಹೀರುತ್ತವೆ. ಕೆಲ ಬಾರಿ ಹೆಸರು ಕಾಯಿಯೊಳಗೆ ನುಸುಳುತ್ತಿರುವ ಹುಳುಗಳು ಕಾಳನ್ನು ಜೊಳ್ಳಾಗಿಸುವುದು ಇಲ್ಲವೆ ತಿಂದು ಹಾಕುತ್ತಿವೆ ಎಂದು ರೈತರು ತಿಳಿಸಿದ್ದಾರೆ.<br /> <br /> <strong>ಸತತ ಯತ್ನ: </strong>‘ರಸ ಹೀರುವ ಕಾಯಿಲೆಯಿಂದ ಇಳುವರಿ ಕಡಿಮೆಯಾಗುತ್ತಿದೆ. ಕೀಟ ನಾಶಕ ಸಿಂಪಡಿಸಿದರೂ ನಿಯಂತ್ರಣಕ್ಕೆ ಬರುತ್ತಿಲ್ಲ. ಆದರೆ ಸಿಂಪಡಣೆಯಿಂದಾಗಿ ಕೀಟ ಭಾದೆ ಇನ್ನೊಂದು ಗಿಡಕ್ಕೆ ವ್ಯಾಪಿಸದಂತೆ ಮಾತ್ರ ತಡೆಯಬಹುದು’ ಎಂದು ವೆಂಕಟಗಿರಿ–ಬಂಡ್ರಾಳದ ರೈತ ನಜೀರಸಾಬ ಕಂಪ್ಲಿ ಹೇಳಿದರು.<br /> <br /> ‘ಕಾಯಿಲೆಗೀಡಾದ ಹೊಲದಲ್ಲಿನ ಹೆಸರು ಗಿಡದ ಎಲೆಗಳು ಮುದುಡಿರುತ್ತವೆ. ಕೆಲ ಬಾರಿ ಮುದುಡಿದ ಎಲೆಯೊಳಗೆ ಕೀಟ ಸಂತಾನೋತ್ಪತ್ತಿ ಮಾಡಿ ಇಡೀ ಗಿಡವನ್ನು ನಾಶ ಮಾಡುತ್ತಿದೆ’ ಎಂದು ಉಡಮಕಲ್ ಗ್ರಾಮದ<br /> ರೈತ ವಿರೇಶಪ್ಪ ಪವಾಡಶೆಟ್ಟಿ ಹೇಳಿದರು.<br /> <br /> <strong>ರೈತ ಕೇಂದ್ರ ಸಂಪರ್ಕಿಸಿ:</strong> ಈಗಾಗಲೆ ಮುಂಗಾರು ಹಂಗಾಮಿಗೆ ತಾಲ್ಲೂಕಿನಾದ್ಯಂತ ನಾಟಿ ಮಾಡಿದ್ದ ಸುಮಾರು 1,625 ಎಕರೆ ಪ್ರದೇಶದ ಪೈಕಿ ಬಹುತೇಕ ಭಾಗದ ಹೆಸರನ್ನು ಕಟಾವು ಮಾಡಲಾಗಿದೆ ಎಂದು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ರಮೇಶ ನಾಯಕ ತಿಳಿಸಿದ್ದಾರೆ.<br /> <br /> ಹೆಸರಿಗೆ ರಸಹೀರುವ, ಎಲೆ ತಿನ್ನುವ ಮತ್ತು ಹೇನು ಭಾದೆ ಸಹಜ. ಹೆಸರಿಗೆ ತಗಲಿರುವ ಕೀಟದಿಂದ ರೈತರು ಆತಂಕ ಪಡುವ ಅಗತ್ಯವಿಲ್ಲ. ಸಮೀಪದ ರೈತ ಸಂಪರ್ಕ ಕೇಂದ್ರಗಳಲ್ಲಿ ಅಧಿಕಾರಿಗಳನ್ನು ಸಂಪರ್ಕಿಸಿದರೆ ಸಾಕಷ್ಟು ಉಪಚಾರದ ಔಷಧಿ ಸಿದ್ದವಿದೆ ಎಂದು ನಾಯಕ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>