ದೇವಿಪುರ ಗ್ರಾಮದ ರೈತ ಸಣ್ಣಪ್ಪ ಅವರು ಬಂಡೂರು ತಳಿಯ ಟಗರನ್ನು ಮಂಡ್ಯ ತಾಲ್ಲೂಕಿನ ಬಿದರಕೋಟೆಯ ರೈತ ಕೃಷ್ಣೇಗೌಡ ಅವರಿಗೆ ಮಾರಾಟ ಮಾಡಿದ್ದಾರೆ. ಎರಡು ವರ್ಷಗಳ ಹಿಂದೆ ಮದ್ದೂರು ತಾಲ್ಲೂಕಿನ ವಳಗೆರೆಹಳ್ಳಿ ಗ್ರಾಮದ ಸೋಮಣ್ಣ ಅವರ ಬಳಿ ₹1.05ಲಕ್ಷ ನೀಡಿ ಈ ಟಗರನ್ನು ಸಣ್ಣಪ್ಪ ಖರೀದಿಸಿದ್ದರು. ವಿಶೇಷ ಕಾಳಜಿಯಿಂದ ಈ ಟಗರನ್ನು ಸಾಕಿದ್ದ ಅವರು, ಈ ಟಗರನ್ನು ತಳಿ ಅಭಿವೃದ್ಧಿಗೆ ಬಳಸಿದ್ದರು.