<p><strong>ಶ್ರೀರಂಗಪಟ್ಟಣ: </strong>ತಾಲ್ಲೂಕಿನ ಕೆಆರ್ಎಸ್ ಸಮೀಪದ ನಾರ್ತ್ಬ್ಯಾಂಕ್ ಗ್ರಾಮದ ದೇವಾಲಯಕ್ಕೆ ಗುರುವಾರ ಪೂಜೆಗೆ ಬಂದಿದ್ದ ಇಬ್ಬರು ವಿಶ್ವೇಶ್ವರಯ್ಯ ನಾಲೆಯಲ್ಲಿ ಮುಳುಗಿ ಮೃತಪಟ್ಟಿದ್ದಾರೆ.</p>.<p>ಹುಣಸೂರು ತಾಲ್ಲೂಕು ಬಿಳಿಕೆರೆ ಹೋಬಳಿ ಮಲ್ಲಿನಾಥಪುರ ಗ್ರಾಮದ ಕರೀಗೌಡ ಎಂಬವರ ಮಗ ಬಸವೇಗೌಡ (26) ಮತ್ತು ಜವರೇಗೌಡ ಅವರ ಮಗ ಸಣ್ಣೇಗೌಡ (34) ಮೃತಪಟ್ಟವರು.</p>.<p>ಮುಳುಗಿದ ಸ್ಥಳದಿಂದ ತುಸು ದೂರದಲ್ಲಿ ಶವಗಳು ಪತ್ತೆಯಾಗಿವೆ. ತೆಪ್ಪದ ಸಹಾಯದಿಂದ ಶವಗಳನ್ನು ನಾಲೆಯಿಂದ ಮೇಲೆ ಎತ್ತಲಾಗಿದ್ದು, ವಾರಸು ದಾರರಿಗೆ ಒಪ್ಪಿಸಲಾಗಿದೆ. ಸ್ಥಳದಲ್ಲಿ ಮೃತರ ಬಂಧುಗಳ ರೋದನ ಮುಗಿಲು ಮುಟ್ಟಿತ್ತು.</p>.<p>ಮಲ್ಲಿನಾಥಪುರದ ಕರೀಗೌಡ, ಬಸವೇಗೌಡ ಸೇರಿ ನಾಲ್ವರು ನಾರ್ತ್ ಬ್ಯಾಂಕ್ ಗ್ರಾಮದ ಕಾಳಮ್ಮನ ದೇವಾಲಯಕ್ಕೆ ಬಂದಿದ್ದರು. ದೇವರ ದರ್ಶನಕ್ಕೂ ಮುನ್ನ ಪಕ್ಕದಲ್ಲೇ ಹರಿಯು ತ್ತಿದ್ದ ನಾಲೆಯಲ್ಲಿ ಈಜಲು ಇಳಿದಿ ದ್ದಾರೆ. ವಿಶ್ವೇಶ್ವರಯ್ಯ ನಾಲೆಯಲ್ಲಿ 2,500 ಕ್ಯೂಸೆಕ್ ನೀರು ಹರಿಯುತ್ತಿದ್ದು, ನೀರಿನ ರಭಸಕ್ಕೆ ತುಸು ದೂರ ಕೊಚ್ಚಿ ಹೋಗಿ ದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶ್ರೀರಂಗಪಟ್ಟಣ: </strong>ತಾಲ್ಲೂಕಿನ ಕೆಆರ್ಎಸ್ ಸಮೀಪದ ನಾರ್ತ್ಬ್ಯಾಂಕ್ ಗ್ರಾಮದ ದೇವಾಲಯಕ್ಕೆ ಗುರುವಾರ ಪೂಜೆಗೆ ಬಂದಿದ್ದ ಇಬ್ಬರು ವಿಶ್ವೇಶ್ವರಯ್ಯ ನಾಲೆಯಲ್ಲಿ ಮುಳುಗಿ ಮೃತಪಟ್ಟಿದ್ದಾರೆ.</p>.<p>ಹುಣಸೂರು ತಾಲ್ಲೂಕು ಬಿಳಿಕೆರೆ ಹೋಬಳಿ ಮಲ್ಲಿನಾಥಪುರ ಗ್ರಾಮದ ಕರೀಗೌಡ ಎಂಬವರ ಮಗ ಬಸವೇಗೌಡ (26) ಮತ್ತು ಜವರೇಗೌಡ ಅವರ ಮಗ ಸಣ್ಣೇಗೌಡ (34) ಮೃತಪಟ್ಟವರು.</p>.<p>ಮುಳುಗಿದ ಸ್ಥಳದಿಂದ ತುಸು ದೂರದಲ್ಲಿ ಶವಗಳು ಪತ್ತೆಯಾಗಿವೆ. ತೆಪ್ಪದ ಸಹಾಯದಿಂದ ಶವಗಳನ್ನು ನಾಲೆಯಿಂದ ಮೇಲೆ ಎತ್ತಲಾಗಿದ್ದು, ವಾರಸು ದಾರರಿಗೆ ಒಪ್ಪಿಸಲಾಗಿದೆ. ಸ್ಥಳದಲ್ಲಿ ಮೃತರ ಬಂಧುಗಳ ರೋದನ ಮುಗಿಲು ಮುಟ್ಟಿತ್ತು.</p>.<p>ಮಲ್ಲಿನಾಥಪುರದ ಕರೀಗೌಡ, ಬಸವೇಗೌಡ ಸೇರಿ ನಾಲ್ವರು ನಾರ್ತ್ ಬ್ಯಾಂಕ್ ಗ್ರಾಮದ ಕಾಳಮ್ಮನ ದೇವಾಲಯಕ್ಕೆ ಬಂದಿದ್ದರು. ದೇವರ ದರ್ಶನಕ್ಕೂ ಮುನ್ನ ಪಕ್ಕದಲ್ಲೇ ಹರಿಯು ತ್ತಿದ್ದ ನಾಲೆಯಲ್ಲಿ ಈಜಲು ಇಳಿದಿ ದ್ದಾರೆ. ವಿಶ್ವೇಶ್ವರಯ್ಯ ನಾಲೆಯಲ್ಲಿ 2,500 ಕ್ಯೂಸೆಕ್ ನೀರು ಹರಿಯುತ್ತಿದ್ದು, ನೀರಿನ ರಭಸಕ್ಕೆ ತುಸು ದೂರ ಕೊಚ್ಚಿ ಹೋಗಿ ದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>