<p><strong>ಮಂಡ್ಯ:</strong> ರಾಜ್ಯದ ಕಾರಾಗೃಹಗಳಲ್ಲಿ ಕಳೆದ 10 ವರ್ಷಗಳಲ್ಲಿ 769 ಕೈದಿಗಳು ಮೃತಪಟ್ಟಿದ್ದು, 90 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 79 ಕೈದಿಗಳ ಸಾವಿಗೆ ‘ನಿಖರ ಕಾರಣ’ವೇ ತಿಳಿದುಬಂದಿಲ್ಲ.</p>.<p>ನ್ಯಾಯಾಂಗ ಬಂಧನದಲ್ಲಿದ್ದಾಗ ಘರ್ಷಣೆ, ಆತ್ಮಹತ್ಯೆ, ಅಸಹಜ ಸಾವುಗಳ 47 ಪ್ರಕರಣಗಳಲ್ಲಿ, ಕರ್ತವ್ಯಲೋಪ ಆರೋಪದಡಿ 111 ಮಂದಿ ಅಧಿಕಾರಿ, ಸಿಬ್ಬಂದಿ ವಿರುದ್ಧ ಶಿಸ್ತುಕ್ರಮ ಜರುಗಿಸಲಾಗಿದೆ. </p>.<p>‘597 ಕೈದಿಗಳ ಸಾವನ್ನು ‘ಸ್ವಾಭಾವಿಕ’ ಎಂದು ಗುರುತಿಸಿದ್ದು, ಕೈದಿಗಳೊಂದಿಗೆ ಘರ್ಷಣೆಯಿಂದ ಮೂವರು ಮೃತಪಟ್ಟಿದ್ದಾರೆ’ ಎನ್ನುತ್ತವೆ ಕಾರಾಗೃಹ ಇಲಾಖೆಯ ದಾಖಲೆಗಳು. </p>.<p>ಬೆಂಗಳೂರು ಕೇಂದ್ರ ಕಾರಾಗೃಹದಲ್ಲಿ ಹೆಚ್ಚು (325) ಕೈದಿಗಳು ಸತ್ತಿದ್ದಾರೆ. ಬೆಳಗಾವಿ– 61, ಮೈಸೂರು– 56, ಧಾರವಾಡ– 49, ಕಲಬುರಗಿ,–47, ಬಳ್ಳಾರಿ ಕಾರಾಗೃಹದಲ್ಲಿ 40 ಕೈದಿಗಳು ಅಸುನೀಗಿದ್ದಾರೆ. </p>.<p><strong>ಶಿಸ್ತು ಕ್ರಮ:</strong></p>.<p>‘ಕರ್ತವ್ಯಲೋಪ ಪ್ರಕರಣದಲ್ಲಿ ವಾರ್ಷಿಕ ವೇತನ ಬಡ್ತಿ ಮುಂದೂಡಿಕೆ, ಸೇವೆಯಿಂದ ಅಮಾನತು, ಶೇ 25ರಷ್ಟು ಪಿಂಚಣಿಗೆ ತಡೆ, ಕಡ್ಡಾಯ ನಿವೃತ್ತಿ ಮೊದಲಾದ ಕ್ರಮಗಳನ್ನು ಅಧಿಕಾರಿ, ಸಿಬ್ಬಂದಿ ವಿರುದ್ಧ ಕೈಗೊಳ್ಳಲಾಗಿದೆ’ ಎನ್ನುತ್ತಾರೆ ಇಲಾಖೆಯ ಹಿರಿಯ ಅಧಿಕಾರಿಗಳು. </p>.<p>ಬೆಂಗಳೂರಿನ ಜೀವನ್ಬಿಮಾ ನಗರ ಠಾಣೆಯಲ್ಲಿ 2016ರಲ್ಲಿ ವಿಚಾರಣೆಗೆ ಕರೆತಂದಿದ್ದ ವ್ಯಕ್ತಿಗೆ ಸಾವಿನ ಪ್ರಕರಣದಲ್ಲಿ ನಾಲ್ವರು ಪೊಲೀಸರಿಗೆ ಕೋರ್ಟ್ 7 ವರ್ಷ ಶಿಕ್ಷೆ ವಿಧಿಸಿದೆ. ಕೆಲ ಪ್ರಕರಣಗಳಲ್ಲಿ ಶಿಸ್ತುಕ್ರಮಕ್ಕೆ ಶಿಫಾರಸು ಮಾಡಲಾಗಿದೆ. ಕೆಲ ಪ್ರಕರಣಗಳು ವಿಚಾರಣೆ ಹಂತದಲ್ಲಿವೆ. </p>.<p><strong>₹4.34 ಕೋಟಿ ಪರಿಹಾರ:</strong> </p>.<p>‘ದಶಕದ ಅವಧಿಯಲ್ಲಿ ಅಸಹಜವಾಗಿ ಸಾವಿಗೀಡಾದ ಕೈದಿ ಅಥವಾ ವಿಚಾರಣಾಧೀನ ಕೈದಿಗಳ ಅವಲಂಬಿತರಿಗೆ ಗೃಹ ಇಲಾಖೆಯಿಂದ ಒಟ್ಟು ₹1.40 ಕೋಟಿ ಹಾಗೂ ಕಾರಾಗೃಹ ಇಲಾಖೆಯಿಂದ ₹2.94 ಕೋಟಿ ಪರಿಹಾರ ನೀಡಲಾಗಿದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ. </p>.<div><blockquote>ಕೈದಿಗಳಲ್ಲಿ ಖಿನ್ನತೆ ನಿವಾರಿಸಲು ಯೋಗ ಧ್ಯಾನ ಸಾಕ್ಷರತೆ ಕೌಶಲ ತರಬೇತಿ ನೀಡುತ್ತಿದ್ದೇವೆ. ಆಪ್ತ ಸಮಾಲೋಚನೆಯನ್ನೂ ನಡೆಸಲಾಗುತ್ತಿದೆ </blockquote><span class="attribution">ಟಿ.ಕೆ. ಲೋಕೇಶ್ ಜಿಲ್ಲಾ ಕಾರಾಗೃಹ ಅಧೀಕ್ಷಕ ಮಂಡ್ಯ</span></div>.<div><blockquote>ವಿಚಾರಣಾಧೀನ ಬಂದಿಗಳನ್ನು ನಡೆಸಿಕೊಳ್ಳುವ ಬಗ್ಗೆ ಸರ್ಕಾರ ನಿಯಮ ರೂಪಿಸಬೇಕು. ಕೈದಿಗಳ ದೈಹಿಕ ಮತ್ತು ಮಾನಸಿಕ ಆರೋಗ್ಯ ಸುಧಾರಣೆಗೆ ಕಾರ್ಯಕ್ರಮ ರೂಪಿಸಬೇಕು </blockquote><span class="attribution">– ಎಚ್.ಸಿ. ಮಂಜುನಾಥ್ ಜಿಲ್ಲಾ ಘಟಕದ ಅಧ್ಯಕ್ಷ ಕನ್ನಡ ಸೇನೆ ಮಂಡ್ಯ</span></div>.<p><strong>ಪೊಲೀಸ್ ವಶದಲ್ಲಿದ್ದ 367 ಆರೋಪಿಗಳ ಸಾವು</strong> </p><p>10 ವರ್ಷಗಳಲ್ಲಿ ಪೊಲೀಸ್ ವಶದಲ್ಲಿದ್ದಾಗ 367 ಆರೋಪಿಗಳು ಮೃತಪಟ್ಟಿದ್ದಾರೆ. ಹುಬ್ಬಳ್ಳಿ–ಧಾರವಾಡ ನಗರದಲ್ಲಿ 59 ಬೆಳಗಾವಿ ನಗರದಲ್ಲಿ 53 ಮೈಸೂರು ನಗರದಲ್ಲಿ 50 ಕಲಬುರಗಿ ನಗರದಲ್ಲಿ 45 ಮಂಗಳೂರು ನಗರದಲ್ಲಿ 24 ಆರೋಪಿಗಳು ಸಾವಿಗೀಡಾಗಿದ್ದಾರೆ ಎಂದು ಇಲಾಖೆ ಅಂಕಿಅಂಶಗಳು ತಿಳಿಸಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಂಡ್ಯ:</strong> ರಾಜ್ಯದ ಕಾರಾಗೃಹಗಳಲ್ಲಿ ಕಳೆದ 10 ವರ್ಷಗಳಲ್ಲಿ 769 ಕೈದಿಗಳು ಮೃತಪಟ್ಟಿದ್ದು, 90 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 79 ಕೈದಿಗಳ ಸಾವಿಗೆ ‘ನಿಖರ ಕಾರಣ’ವೇ ತಿಳಿದುಬಂದಿಲ್ಲ.</p>.<p>ನ್ಯಾಯಾಂಗ ಬಂಧನದಲ್ಲಿದ್ದಾಗ ಘರ್ಷಣೆ, ಆತ್ಮಹತ್ಯೆ, ಅಸಹಜ ಸಾವುಗಳ 47 ಪ್ರಕರಣಗಳಲ್ಲಿ, ಕರ್ತವ್ಯಲೋಪ ಆರೋಪದಡಿ 111 ಮಂದಿ ಅಧಿಕಾರಿ, ಸಿಬ್ಬಂದಿ ವಿರುದ್ಧ ಶಿಸ್ತುಕ್ರಮ ಜರುಗಿಸಲಾಗಿದೆ. </p>.<p>‘597 ಕೈದಿಗಳ ಸಾವನ್ನು ‘ಸ್ವಾಭಾವಿಕ’ ಎಂದು ಗುರುತಿಸಿದ್ದು, ಕೈದಿಗಳೊಂದಿಗೆ ಘರ್ಷಣೆಯಿಂದ ಮೂವರು ಮೃತಪಟ್ಟಿದ್ದಾರೆ’ ಎನ್ನುತ್ತವೆ ಕಾರಾಗೃಹ ಇಲಾಖೆಯ ದಾಖಲೆಗಳು. </p>.<p>ಬೆಂಗಳೂರು ಕೇಂದ್ರ ಕಾರಾಗೃಹದಲ್ಲಿ ಹೆಚ್ಚು (325) ಕೈದಿಗಳು ಸತ್ತಿದ್ದಾರೆ. ಬೆಳಗಾವಿ– 61, ಮೈಸೂರು– 56, ಧಾರವಾಡ– 49, ಕಲಬುರಗಿ,–47, ಬಳ್ಳಾರಿ ಕಾರಾಗೃಹದಲ್ಲಿ 40 ಕೈದಿಗಳು ಅಸುನೀಗಿದ್ದಾರೆ. </p>.<p><strong>ಶಿಸ್ತು ಕ್ರಮ:</strong></p>.<p>‘ಕರ್ತವ್ಯಲೋಪ ಪ್ರಕರಣದಲ್ಲಿ ವಾರ್ಷಿಕ ವೇತನ ಬಡ್ತಿ ಮುಂದೂಡಿಕೆ, ಸೇವೆಯಿಂದ ಅಮಾನತು, ಶೇ 25ರಷ್ಟು ಪಿಂಚಣಿಗೆ ತಡೆ, ಕಡ್ಡಾಯ ನಿವೃತ್ತಿ ಮೊದಲಾದ ಕ್ರಮಗಳನ್ನು ಅಧಿಕಾರಿ, ಸಿಬ್ಬಂದಿ ವಿರುದ್ಧ ಕೈಗೊಳ್ಳಲಾಗಿದೆ’ ಎನ್ನುತ್ತಾರೆ ಇಲಾಖೆಯ ಹಿರಿಯ ಅಧಿಕಾರಿಗಳು. </p>.<p>ಬೆಂಗಳೂರಿನ ಜೀವನ್ಬಿಮಾ ನಗರ ಠಾಣೆಯಲ್ಲಿ 2016ರಲ್ಲಿ ವಿಚಾರಣೆಗೆ ಕರೆತಂದಿದ್ದ ವ್ಯಕ್ತಿಗೆ ಸಾವಿನ ಪ್ರಕರಣದಲ್ಲಿ ನಾಲ್ವರು ಪೊಲೀಸರಿಗೆ ಕೋರ್ಟ್ 7 ವರ್ಷ ಶಿಕ್ಷೆ ವಿಧಿಸಿದೆ. ಕೆಲ ಪ್ರಕರಣಗಳಲ್ಲಿ ಶಿಸ್ತುಕ್ರಮಕ್ಕೆ ಶಿಫಾರಸು ಮಾಡಲಾಗಿದೆ. ಕೆಲ ಪ್ರಕರಣಗಳು ವಿಚಾರಣೆ ಹಂತದಲ್ಲಿವೆ. </p>.<p><strong>₹4.34 ಕೋಟಿ ಪರಿಹಾರ:</strong> </p>.<p>‘ದಶಕದ ಅವಧಿಯಲ್ಲಿ ಅಸಹಜವಾಗಿ ಸಾವಿಗೀಡಾದ ಕೈದಿ ಅಥವಾ ವಿಚಾರಣಾಧೀನ ಕೈದಿಗಳ ಅವಲಂಬಿತರಿಗೆ ಗೃಹ ಇಲಾಖೆಯಿಂದ ಒಟ್ಟು ₹1.40 ಕೋಟಿ ಹಾಗೂ ಕಾರಾಗೃಹ ಇಲಾಖೆಯಿಂದ ₹2.94 ಕೋಟಿ ಪರಿಹಾರ ನೀಡಲಾಗಿದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ. </p>.<div><blockquote>ಕೈದಿಗಳಲ್ಲಿ ಖಿನ್ನತೆ ನಿವಾರಿಸಲು ಯೋಗ ಧ್ಯಾನ ಸಾಕ್ಷರತೆ ಕೌಶಲ ತರಬೇತಿ ನೀಡುತ್ತಿದ್ದೇವೆ. ಆಪ್ತ ಸಮಾಲೋಚನೆಯನ್ನೂ ನಡೆಸಲಾಗುತ್ತಿದೆ </blockquote><span class="attribution">ಟಿ.ಕೆ. ಲೋಕೇಶ್ ಜಿಲ್ಲಾ ಕಾರಾಗೃಹ ಅಧೀಕ್ಷಕ ಮಂಡ್ಯ</span></div>.<div><blockquote>ವಿಚಾರಣಾಧೀನ ಬಂದಿಗಳನ್ನು ನಡೆಸಿಕೊಳ್ಳುವ ಬಗ್ಗೆ ಸರ್ಕಾರ ನಿಯಮ ರೂಪಿಸಬೇಕು. ಕೈದಿಗಳ ದೈಹಿಕ ಮತ್ತು ಮಾನಸಿಕ ಆರೋಗ್ಯ ಸುಧಾರಣೆಗೆ ಕಾರ್ಯಕ್ರಮ ರೂಪಿಸಬೇಕು </blockquote><span class="attribution">– ಎಚ್.ಸಿ. ಮಂಜುನಾಥ್ ಜಿಲ್ಲಾ ಘಟಕದ ಅಧ್ಯಕ್ಷ ಕನ್ನಡ ಸೇನೆ ಮಂಡ್ಯ</span></div>.<p><strong>ಪೊಲೀಸ್ ವಶದಲ್ಲಿದ್ದ 367 ಆರೋಪಿಗಳ ಸಾವು</strong> </p><p>10 ವರ್ಷಗಳಲ್ಲಿ ಪೊಲೀಸ್ ವಶದಲ್ಲಿದ್ದಾಗ 367 ಆರೋಪಿಗಳು ಮೃತಪಟ್ಟಿದ್ದಾರೆ. ಹುಬ್ಬಳ್ಳಿ–ಧಾರವಾಡ ನಗರದಲ್ಲಿ 59 ಬೆಳಗಾವಿ ನಗರದಲ್ಲಿ 53 ಮೈಸೂರು ನಗರದಲ್ಲಿ 50 ಕಲಬುರಗಿ ನಗರದಲ್ಲಿ 45 ಮಂಗಳೂರು ನಗರದಲ್ಲಿ 24 ಆರೋಪಿಗಳು ಸಾವಿಗೀಡಾಗಿದ್ದಾರೆ ಎಂದು ಇಲಾಖೆ ಅಂಕಿಅಂಶಗಳು ತಿಳಿಸಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>