ಸ್ಥಳ ಪರಿಶೀಲಿಸಿದ ನಂತರ ತಿಂಗಳೊಳಗೆ ಸಮ್ಮೇಳನ ಎಲ್ಲಿ ಸಂಘಟಿಸಬೇಕು ಎನ್ನುವುದರ ಬಗ್ಗೆ ತೀರ್ಮಾನಕ್ಕೆ ಬರಲಾಗುವುದು ಎಂದು ಶನಿವಾರ ನಡೆದ ಪರಿಷತ್ತಿನ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಮಹೇಶ ಜೋಶಿ ಹೇಳಿದಾಗ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಒಂದು ಹಂತದಲ್ಲಿ ಸಭೆಯಲ್ಲಿ ಜಗಳ ಉಂಟಾಗಿ ಮುಂದೂಡಲಾಗಿತ್ತು. ಪರಿಷತ್ತಿನ ಸದಸ್ಯರಿಗೆ ಸೂಕ್ತ ವ್ಯವಸ್ಥೆ ಮಾಡದ ಕಾರಣ ಅವರನ್ನು ತರಾಟೆಗೆ ತೆಗೆದುಕೊಂಡಿದ್ದರು.