ಕೋವಿಡ್ನಿಂದ ಗುಣಮುಖರಾದ 166 ಮಂದಿಯನ್ನು ವಿವಿಧ ಕೋವಿಡ್ ಕೇಂದ್ರಗಳಿಂದ ಬಿಡುಗಡೆ ಮಾಡಲಾಯಿತು. ಮಂಡ್ಯ ತಾಲ್ಲೂಕಿನ 139 ಮಂದಿ, ಶ್ರೀರಂಗಪಟ್ಟಣ 7, ಮದ್ದೂರು, ಪಾಂಡವಪುರ ತಲಾ 6, ಮಳವಳ್ಳಿ, ಕೆ.ಆರ್.ಪೇಟೆ ತಲಾ 3, ನಾಗಮಂಗಲ ತಾಲ್ಲೂಕಿನ ಇಬ್ಬರನ್ನು ಬಿಡುಗಡೆ ಮಾಡಲಾಯಿತು. ಒಟ್ಟು ಸೋಂಕಿತರಲ್ಲಿ ಇಲ್ಲಿಯವರೆಗೆ 4,655 ಮಂದಿ ಗುಣಮುಖರಾಗಿದ್ದಾರೆ. 2,133 ಪ್ರಕರಣಗಳು ಸಕ್ರಿಯವಾಗಿವೆ.