‘ತಾಲ್ಲೂಕಿನ ವಿದ್ಯಾನಗರ ಬಳಿ ಇರುವ, ದಿವಾನ್ ಪೂರ್ಣಯ್ಯ ಕಾಲದ 40 ಅಡಿ ಎತ್ತರದ ಐತಿಹಾಸಿಕ ಜೋಸಯ್ಯ ವೆಬ್ ಸ್ಮಾರಕ ಸ್ತಂಭ ಮಳೆ, ಬಿಸಿಲು, ಗಾಳಿಗೆ ಶಿಥಿಲವಾಗುತ್ತಿದೆ. ಅದನ್ನು ಸಂರಕ್ಷಿಸಬೇಕು’ ಎಂದು ಕಡತನಾಳು ಜಯಶಂಕರ್ ಒತ್ತಾಯಿಸಿದರು. ‘ಸ್ಥಳ ಪರಿಶೀಲನೆ ನಡೆಸಿ ಜೋಸಯ್ಯ ವೆಬ್ ಸ್ಮಾರಕ ಸ್ತಂಭವನ್ನು ಸಂರಕ್ಷಿಸಲು ಅಗತ್ಯ ಕ್ರಮ ವಹಿಸಲಾಗುವುದು’ ಎಂದು ಎನ್.ಎನ್. ಗೌಡ ಭರವಸೆ ನೀಡಿದರು.