<p><strong>ನಾಗಮಂಗಲ (ಮಂಡ್ಯ ಜಿಲ್ಲೆ):</strong> ತಾಲ್ಲೂಕಿನ ಆದಿಚುಂಚನಗಿರಿ ಸುಕ್ಷೇತ್ರದಲ್ಲಿ ಗಂಗಾಧರೇಶ್ವರ ಸ್ವಾಮಿಯ ‘ಮಹಾರಥೋತ್ಸವ’ ಹಾಗೂ ನಿರ್ಮಲಾನಂದನಾಥ ಸ್ವಾಮಿಜೀಯವರ ‘ಅಡ್ಡಪಲ್ಲಕ್ಕಿ ಉತ್ಸವ’ವು ಮಂಗಳವಾರ ಮುಂಜಾನೆ ವಿಜೃಂಭಣೆಯಿಂದ ನಡೆಯಿತು. </p><p>ಸರ್ವಾಲಂಕೃತವಾದ ರಥದಲ್ಲಿ ಗಂಗಾಧರೇಶ್ವರ ಸ್ವಾಮಿಯ ಮೂರ್ತಿ ಸ್ಥಾಪಿತವಾಗುತ್ತಿದ್ದಂತೆ ನಾಡಿನ ವಿವಿಧ ಭಾಗಗಳಿಂದ ಆಗಮಿಸಿದ್ದ ಭಕ್ತರು</p><p>ಕಾಲಭೈರವೇಶ್ವರ ಸ್ವಾಮಿ, ಬಾಲಗಂಗಾಧರನಾಥ ಸ್ವಾಮಿ ಹಾಗೂ ನಿರ್ಮಲಾನಂದನಾಥ ಸ್ವಾಮೀಜಿಯವರನ್ನು ಕುರಿತು ಜಯಘೋಷ ಮೊಳಗಿಸಿದರು.</p><p>ಭಕ್ತರು ರಥವನ್ನು ಎಳೆದು ಭಕ್ತಿಭಾವ ಮೆರೆದರು. ಕೆಲವರು ತಮ್ಮ ಇಷ್ಟಾರ್ಥ ಸಿದ್ಧಿಸಲಿ ಎಂಬ ಇಂಗಿತದೊಂದಿಗೆ ಹಣ್ಣು ಜವನವನ್ನು ರಥಕ್ಕೆ ಎಸೆಯುವ ಮೂಲಕ ತಮ್ಮ ಭಕ್ತಿ ಪ್ರದರ್ಶಿಸಿದರು.</p><p>ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ಭಕ್ತರು ಸೋಮವಾರ ರಾತ್ರಿ ಕಾಲಭೈರವೇಶ್ವರಸ್ವಾಮಿಯ ತಿರುಗಣಿ ಉತ್ಸವ ಹಾಗೂ ನಿರ್ಮಲಾನಂದನಾಥ ಸ್ವಾಮೀಜಿಯವರ ತೆಪ್ಪೋತ್ಸವ ವೀಕ್ಷಿಸಿದ್ದರು. ಬಳಿಕ ಶ್ರೀಕ್ಷೇತ್ರದಲ್ಲಿ ಹಲವು ಕಡೆ ಆಯೋಜಿಸಿದ್ದ ಪೌರಾಣಿಕ ನಾಟಕ ಪ್ರದರ್ಶನ ಮತ್ತು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸಡಗರದಿಂದ ಪಾಲ್ಗೊಂಡರು. </p><p>ಹಲವು ಭಕ್ತರು ಮುಡಿ ಸಮರ್ಪಣೆಯ ಧಾರ್ಮಿಕ ವಿಧಿ ವಿಧಾನ ಪೂರೈಸಿ ಕ್ಷೇತ್ರ ಪಾಲಕ ಕಾಲಭೈರವೇಶ್ವರಸ್ವಾಮಿ ದರ್ಶನ ಪಡೆದು ನಂತರ ಬ್ರಾಹ್ಮೀ ಮೂಹೂರ್ತದ ಸಮಯಕ್ಕೆ ಸರಿಯಾಗಿ ರಥ ಬೀದಿಯಲ್ಲಿ ಜಮಾವಣೆಗೊಂಡರು.</p><p>ಉತ್ಸವಮೂರ್ತಿಗಳ ಗಿರಿಪ್ರದಕ್ಷಿಣೆ:</p><p>ಕ್ಷೇತ್ರದಲ್ಲಿ ಜಾತ್ರಾ ಮಹೋತ್ಸವದ ಅಂಗವಾಗಿ ಮಂಗಳವಾರ ರಾತ್ರಿ ಸುತ್ತಮುತ್ತಲಿನ ಗ್ರಾಮಗಳು ಹಾಗೂ ತಾಲ್ಲೂಕಿನ ವಿವಿಧ ಗ್ರಾಮಗಳಿಂದ ಆಗಮಿಸಿದ್ದ 250ಕ್ಕೂ ಹೆಚ್ಚು ಗ್ರಾಮ ದೇವತೆಗಳ ಉತ್ಸವ ಮೂರ್ತಿಗಳೊಂದಿಗೆ ‘ಗಿರಿ ಪ್ರದಕ್ಷಿಣೆ’ ವೈಭವದಿಂದ ನಡೆಯಿತು. </p><p>ಗ್ರಾಮ ದೇವತೆಗಳ ಉತ್ಸವ ಮೂರ್ತಿಗಳಿಗೆ ಮಠದ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ ಅವರು ವಿಶೇಷ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿದರು.</p><p>ಕಾಲಭೈರವೇಶ್ವರ ಸ್ವಾಮಿ ದೇಗುಲದಿಂದ ಪ್ರಾರಂಭಗೊಂಡು ಚುಂಚನಗಿರಿಯ ಸುತ್ತಲೂ ಇರುವ ಕಣಿವೆ ಆಂಜನೇಯಸ್ವಾಮಿ, ಕೂಗುಬಂಡೆ ಮಾರ್ಗ ಸೇರಿದಂತೆ ನಾಗರಕಲ್ಲು (ನಾಗದೇವತೆ) ಬಳಸಿಕೊಂಡು ರಥಬೀದಿ ಮೂಲಕ ಸನ್ನಿಧಿಯನ್ನು ತಲುಪಿತು. ನಂತರ ಸೋಮೇಶ್ವರ ಉತ್ಸವ ವೈಭವದಿಂದ ನಡೆಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನಾಗಮಂಗಲ (ಮಂಡ್ಯ ಜಿಲ್ಲೆ):</strong> ತಾಲ್ಲೂಕಿನ ಆದಿಚುಂಚನಗಿರಿ ಸುಕ್ಷೇತ್ರದಲ್ಲಿ ಗಂಗಾಧರೇಶ್ವರ ಸ್ವಾಮಿಯ ‘ಮಹಾರಥೋತ್ಸವ’ ಹಾಗೂ ನಿರ್ಮಲಾನಂದನಾಥ ಸ್ವಾಮಿಜೀಯವರ ‘ಅಡ್ಡಪಲ್ಲಕ್ಕಿ ಉತ್ಸವ’ವು ಮಂಗಳವಾರ ಮುಂಜಾನೆ ವಿಜೃಂಭಣೆಯಿಂದ ನಡೆಯಿತು. </p><p>ಸರ್ವಾಲಂಕೃತವಾದ ರಥದಲ್ಲಿ ಗಂಗಾಧರೇಶ್ವರ ಸ್ವಾಮಿಯ ಮೂರ್ತಿ ಸ್ಥಾಪಿತವಾಗುತ್ತಿದ್ದಂತೆ ನಾಡಿನ ವಿವಿಧ ಭಾಗಗಳಿಂದ ಆಗಮಿಸಿದ್ದ ಭಕ್ತರು</p><p>ಕಾಲಭೈರವೇಶ್ವರ ಸ್ವಾಮಿ, ಬಾಲಗಂಗಾಧರನಾಥ ಸ್ವಾಮಿ ಹಾಗೂ ನಿರ್ಮಲಾನಂದನಾಥ ಸ್ವಾಮೀಜಿಯವರನ್ನು ಕುರಿತು ಜಯಘೋಷ ಮೊಳಗಿಸಿದರು.</p><p>ಭಕ್ತರು ರಥವನ್ನು ಎಳೆದು ಭಕ್ತಿಭಾವ ಮೆರೆದರು. ಕೆಲವರು ತಮ್ಮ ಇಷ್ಟಾರ್ಥ ಸಿದ್ಧಿಸಲಿ ಎಂಬ ಇಂಗಿತದೊಂದಿಗೆ ಹಣ್ಣು ಜವನವನ್ನು ರಥಕ್ಕೆ ಎಸೆಯುವ ಮೂಲಕ ತಮ್ಮ ಭಕ್ತಿ ಪ್ರದರ್ಶಿಸಿದರು.</p><p>ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ಭಕ್ತರು ಸೋಮವಾರ ರಾತ್ರಿ ಕಾಲಭೈರವೇಶ್ವರಸ್ವಾಮಿಯ ತಿರುಗಣಿ ಉತ್ಸವ ಹಾಗೂ ನಿರ್ಮಲಾನಂದನಾಥ ಸ್ವಾಮೀಜಿಯವರ ತೆಪ್ಪೋತ್ಸವ ವೀಕ್ಷಿಸಿದ್ದರು. ಬಳಿಕ ಶ್ರೀಕ್ಷೇತ್ರದಲ್ಲಿ ಹಲವು ಕಡೆ ಆಯೋಜಿಸಿದ್ದ ಪೌರಾಣಿಕ ನಾಟಕ ಪ್ರದರ್ಶನ ಮತ್ತು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸಡಗರದಿಂದ ಪಾಲ್ಗೊಂಡರು. </p><p>ಹಲವು ಭಕ್ತರು ಮುಡಿ ಸಮರ್ಪಣೆಯ ಧಾರ್ಮಿಕ ವಿಧಿ ವಿಧಾನ ಪೂರೈಸಿ ಕ್ಷೇತ್ರ ಪಾಲಕ ಕಾಲಭೈರವೇಶ್ವರಸ್ವಾಮಿ ದರ್ಶನ ಪಡೆದು ನಂತರ ಬ್ರಾಹ್ಮೀ ಮೂಹೂರ್ತದ ಸಮಯಕ್ಕೆ ಸರಿಯಾಗಿ ರಥ ಬೀದಿಯಲ್ಲಿ ಜಮಾವಣೆಗೊಂಡರು.</p><p>ಉತ್ಸವಮೂರ್ತಿಗಳ ಗಿರಿಪ್ರದಕ್ಷಿಣೆ:</p><p>ಕ್ಷೇತ್ರದಲ್ಲಿ ಜಾತ್ರಾ ಮಹೋತ್ಸವದ ಅಂಗವಾಗಿ ಮಂಗಳವಾರ ರಾತ್ರಿ ಸುತ್ತಮುತ್ತಲಿನ ಗ್ರಾಮಗಳು ಹಾಗೂ ತಾಲ್ಲೂಕಿನ ವಿವಿಧ ಗ್ರಾಮಗಳಿಂದ ಆಗಮಿಸಿದ್ದ 250ಕ್ಕೂ ಹೆಚ್ಚು ಗ್ರಾಮ ದೇವತೆಗಳ ಉತ್ಸವ ಮೂರ್ತಿಗಳೊಂದಿಗೆ ‘ಗಿರಿ ಪ್ರದಕ್ಷಿಣೆ’ ವೈಭವದಿಂದ ನಡೆಯಿತು. </p><p>ಗ್ರಾಮ ದೇವತೆಗಳ ಉತ್ಸವ ಮೂರ್ತಿಗಳಿಗೆ ಮಠದ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ ಅವರು ವಿಶೇಷ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿದರು.</p><p>ಕಾಲಭೈರವೇಶ್ವರ ಸ್ವಾಮಿ ದೇಗುಲದಿಂದ ಪ್ರಾರಂಭಗೊಂಡು ಚುಂಚನಗಿರಿಯ ಸುತ್ತಲೂ ಇರುವ ಕಣಿವೆ ಆಂಜನೇಯಸ್ವಾಮಿ, ಕೂಗುಬಂಡೆ ಮಾರ್ಗ ಸೇರಿದಂತೆ ನಾಗರಕಲ್ಲು (ನಾಗದೇವತೆ) ಬಳಸಿಕೊಂಡು ರಥಬೀದಿ ಮೂಲಕ ಸನ್ನಿಧಿಯನ್ನು ತಲುಪಿತು. ನಂತರ ಸೋಮೇಶ್ವರ ಉತ್ಸವ ವೈಭವದಿಂದ ನಡೆಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>