ನದಿ ತಟದಲ್ಲೇ ಇರುವ ಜಮೀನಿಗೆ ಅವರು ಮಧ್ಯಾಹ್ನ ತೆರಳಿದ್ದರು. ಸೇತುವೆ ಸಮೀಪದಲ್ಲೇ ಅವರ ಪಲ್ಸರ್ ಬೈಕ್, ಚಪ್ಪಲಿ ಪತ್ತೆಯಾಗಿವೆ. ರವೀಂದ್ರ ಬಿಎಸ್ಪಿಯಿಂದ ಮದ್ದೂರು ವಿಧಾನಸಭಾ ಚುನಾವಣೆಗೆ ಒಮ್ಮೆ ಸ್ಪರ್ಧಿಸಿ ಸೋಲು ಕಂಡಿದ್ದರು. ‘ಸಂವಿಧಾನ’ದ ಬಗ್ಗೆ ಮಾತನಾಡುತ್ತಿದ್ದ ಅವರು ಕಾನೂನು ನೆರವು ಶಿಬಿರಗಳಲ್ಲಿ ಪಾಲ್ಗೊಳ್ಳುತ್ತಿದ್ದರು.