‘ನಮ್ಮ ತಂದೆ ಬಸವರಾಜು ಕನ್ನಡ ಹೋರಾಟಗಾರರು. ಕರ್ನಾಟಕ ರಕ್ಷಣಾ ವೇದಿಕೆ ಸ್ಥಾಪನೆಯಾದಾಗ ಜಾಣಗೆರೆ ವೆಂಕಟರಾಮಯ್ಯ, ನಾರಾಯಣಗೌಡ ಅವರಿಗೆ ಹತ್ತಿರವಾಗಿದ್ದು, ಚಳವಳಿ ಮಾಡಿದ್ದರು. ಕನ್ನಡ ನಾಡು ಮತ್ತು ಭಾಷೆ ಬಗೆಗೆ ಅವರಿಗಿದ್ದ ಪ್ರೀತಿ, ಅಭಿಮಾನ ಸಹಜವಾಗಿ ನನಗೂ ಬಂದಿದೆ. ಕನ್ನಡ ಮತ್ತು ಕರ್ನಾಟಕದ ಗೌರವಕ್ಕೆ ಧಕ್ಕೆ ಬಂದರೆ ಸಿಟ್ಟು ಬರುತ್ತದೆ. ಮನೆ ಮಂದಿಯೆಲ್ಲ ಕನ್ನಡದಲ್ಲೇ ಮಾತನಾಡುತ್ತೇವೆ’ ಎಂದು ಶಂಕರಬಾಬು ಹೇಳುತ್ತಾರೆ.