ಮಂಡ್ಯ: ‘ಮನುಸ್ಮೃತಿ ಪ್ರಕಾರ ಶೂದ್ರರು ಎಂದರೆ ಗುಲಾಮರು, ಸೂಳೆಯರ ಮಕ್ಕಳು. ದೇಶದಲ್ಲಿ ಬ್ರಾಹ್ಮಣರನ್ನು ಹೊರತುಪಡಿಸಿ ಉಳಿದೆಲ್ಲರೂ ಈ ವರ್ಗಕ್ಕೇ ಸೇರುತ್ತಾರೆ’ ಎಂದು ಪ್ರೊ. ಕೆ.ಎಸ್. ಭಗವಾನ್ ಹೇಳಿದರು.
ನಗರದಲ್ಲಿ ಸೋಮವಾರ ಕರ್ನಾಟಕ ದಲಿತ ಸಂಘರ್ಷ ಸಮಿತಿಯು ಹಮ್ಮಿಕೊಂಡಿದ್ದ, ‘ಸಾಮಾಜಿಕ ನ್ಯಾಯ ಜಾರಿಗಾಗಿ ಜನಾಗ್ರಹ ಸಮಾವೇಶ’ವನ್ನು ಉದ್ಘಾಟಿಸಿ ಮಾತನಾಡಿ, ‘ಮನುಸ್ಮೃತಿಯು ಸಮಾಜದಲ್ಲಿ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಮತ್ತು ಶೂದ್ರರೆಂಬ ನಾಲ್ಕು ವರ್ಣಗಳನ್ನು ಗುರುತಿಸಿತ್ತು. ಅದರಲ್ಲಿ ಇವತ್ತು ಬ್ರಾಹ್ಮಣರು ಮತ್ತು ಶೂದ್ರರಷ್ಟೇ ಉಳಿದಿದ್ದಾರೆ. ಯಾರೆಲ್ಲ ಜನಿವಾರ ಹಾಕಿಕೊಳ್ಳುವುದಿಲ್ಲವೋ ಅವರೆಲ್ಲರೂ ಶೂದ್ರರೇ. ಬ್ರಾಹ್ಮಣ ಹೆಂಗಸರು ಜನಿವಾರ ಧರಿಸುವುದಿಲ್ಲ. ಹೀಗಾಗಿ ಅವರೂ ಶೂದ್ರರೇ. ಇದನ್ನು ಹೇಳಲು ಹೋದರೆ ನನ್ನನ್ನು ಕೊಂದೇ ಹಾಕುತ್ತಾರೆ’ ಎಂದರು.