ರಾಜ್ಯದಲ್ಲಿ ಸುಮಾರು ಒಂದು ಕೋಟಿ ಒಕ್ಕಲಿಗರು ಇದ್ದಾರೆ. ಸದ್ಯ ಪ್ರವರ್ಗ 3ಎಗೆ ಶೇ 4 ಮೀಸಲಾತಿ ಸೌಲಭ್ಯ ಇದೆ. ಆದರೆ ಶೇ 4ರಷ್ಟು ಮೀಸಲಾತಿ ಸೌಲಭ್ಯವನ್ನು ಒಕ್ಕಲಿಗರ ಜತೆಗೆ ರೆಡ್ಡಿ, ಬಲಿಜ, ಭಂಟ, ಕೊಡವ ಸೇರಿ 12 ಜಾತಿಗಳ ಜನರು ಹಂಚಿಕೊಳ್ಳುತ್ತಾರೆ. ಒಕ್ಕಲಿಗರ ಜನಸಂಖ್ಯೆಗೆ ಅನುಗುಣವಾಗಿ ಶೇ 10 ಮೀಸಲಾತಿ ಸೌಲಭ್ಯ ನೀಡಬೇಕು ಎಂದು ಮುಖಂಡರಾದ ಕಿಶೋರ್, ಗೌತಮ್ ಮರೀಗೌಡ ಇತರರು ಆಗ್ರಹಿಸಿದರು.