‘ಪರಕೀಯ ವ್ಯಕ್ತಿಯಿಂದ ಪರ್ಶಿಯನ್ ಭಾಷೆಯಲ್ಲಿ ಆಳ್ವಿಕೆ ಮಾಡಿಸಿಕೊಳ್ಳುವ ಗುಲಾಮಿ ಮಾನಸಿಕತೆ ಒಕ್ಕಲಿಗರದಾಗಿರಲಿಲ್ಲ. ಹೀಗಾಗಿ, ಹೋರಾಟಕ್ಕೆ ಸನ್ನದ್ಧರಾದರು. ಹೋಬಳಿಗಳ ಗೌಡರಾಗಿದ್ದ ಪಾಂಡವಪುರ ತಾಲ್ಲೂಕಿನ ಉರಿಗೌಡ, ಅಂಕನಹಳ್ಳಿಯ ದೊಡ್ಡನಂಜೇಗೌಡ, ಕೆ.ಆರ್ ಪೇಟೆ ತಾಲ್ಲೂಕಿನ ಜಗನಕೆರೆ ಬೆಟ್ಟೇಗೌಡ, ಕೆ.ಆರ್.ಪೇಟೆ ತಾಲ್ಲೂಕಿನ ಕಾಗೆಪುರದ ಸುಬ್ಬೇಗೌಡ ಹಾಗೂ ಕೇಶವನಕಟ್ಟೆ ರಾಜೇಗೌಡ ಧರ್ಮನಿಷ್ಠರಾಗಿದ್ದರು. ಮಹಾರಾಣಿ ಲಕ್ಷ್ಮಮ್ಮಣ್ಣಿಗೆ ನಿಷ್ಠರಾಗಿದ್ದರು’ ಎಂದು ವಿವರಿಸಿದರು.