‘ಕಳೆದ ಏಳೆಂಟು ವರ್ಷಗಳಿಂದ, ವಾರದಲ್ಲಿ ಮೂರು ದಿನ ಡಯಾಲಿಸಿಸ್ ಮಾಡಿಸಿಕೊಳ್ಳುತ್ತಿದ್ದೇನೆ. ಪಟ್ಟಣದಲ್ಲಿ ಸರಿಯಾಗಿ ಸೇವೆ ಸಿಗದ ಕಾರಣ ಹಣ ಸಾಲ ಪಡೆದು ಖಾಸಗಿ ಆಸ್ಪತ್ರೆಯಲ್ಲಿ ಡಯಾಲಿಸಿಸ್ ಮಾಡಿಸಿಕೊಳ್ಳುತ್ತಿದ್ದೇನೆ. ಪಟ್ಟಣದ ಡಯಾಲಿಸಿಸ್ ಕೇಂದ್ರದಲ್ಲಿ ಕಳೆದ ಮೂರು ವರ್ಷಗಳಿಂದ ಸಮಸ್ಯೆ ಇದ್ದರೂ ಅಧಿಕಾರಿಗಳು ಗಮನ ಹರಿಸುತ್ತಿಲ್ಲ’ ಎಂದು ಬಾಬುರಾಯನಕೊಪ್ಪಲು ಗ್ರಾಮದ ಲಕ್ಷ್ಮಣರಾವ್ ಕದಂ ದೂರಿದ್ದಾರೆ.