ನಿರ್ದೇಶಕ ಸಿದ್ದೇಗೌಡ ಮಾತನಾಡಿ, ‘ಮೇ 6ರಂದು ಬ್ಯಾಂಕ್ನ ಆಡಳಿತ ಮಂಡಳಿ ಸಭೆಯಲ್ಲಿ ಭಾಗವಹಿಸಿ ವಿಷಯ 1, ಮತ್ತು 2ಕ್ಕೆ ಒಪ್ಪಿಗೆ ನೀಡಿ, ನಂತರ ವಿಷಯ 3 ರಿಂದ 11ವರೆಗಿನ ವಿಷಯಗಳನ್ನು ತಿರಸ್ಕರಿಸಿದ್ದು ಈ ಬಗ್ಗೆ ಆಡಳಿತ ಮಂಡಳಿ ಸಭೆಯಲ್ಲಿ ಅಧ್ಯಕ್ಷರಿಗೆ ನೀಡಿದ್ದು, ಅದಕ್ಕೆ ಅಧ್ಯಕ್ಷರು ನಮ್ಮ ಪತ್ರಕ್ಕೆ ಸಹಿ ಹಾಕಿ ಸಭೆಯನ್ನು ಮುಂದೂಡುತ್ತೇನೆಂದು ಹೇಳಿದ ಮೇಲೆ ನಾವುಗಳು ಸಭೆಯಿಂದ ಹೊರ ಬಂದೆವು ಆದರೆ, ನಂತರ ಅಧ್ಯಕ್ಷ ಮತ್ತು ವ್ಯವಸ್ಥಾಪಕರು ನಡಾವಳಿಯನ್ನು ಬರೆದುಕೊಂಡು ತೀರ್ಮಾನ ಕೈಗೊಂಡಿದ್ದು, ಆಡಳಿತ ಮಂಡಳಿ ನಿರ್ದೇಶಕರಿಗೆ ಅವಮಾನ ಮಾಡಿದ್ದರೆ’ ಎಂದು ಆಕ್ರೋಶ ಹೊರ ಹಾಕಿದರು.