ಮಂಡ್ಯ: ತಾಲ್ಲೂಕಿನ ಬೇವಿನಹಳ್ಳಿ ಗ್ರಾಮದ ಬಳಿ ಮಂಗಳವಾರ ನಡೆದ ಕಾಂಗ್ರೆಸ್ ಪ್ರಜಾಧ್ವನಿ ಯಾತ್ರೆಯ ವೇಳೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಜನರತ್ತ ಹಣ ಎಸೆದ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಡಿ.ಕೆ.ಶಿವಕುಮಾರ್ ಪ್ರಜಾಧ್ವನಿ ಯಾತ್ರೆ ನಡೆಸಿದರು. ತಾಲ್ಲೂಕಿನ ಕ್ಯಾತುಂಗೆರೆಯಿಂದ ರೋಡ್ ಶೋ ಆರಂಭವಾಯಿತು. ಯಾತ್ರೆ ಬೇವಿನಹಳ್ಳಿ ಗ್ರಾಮ ತಲುಪಿದಾಗ ತಾವು ಬರುತ್ತಿದ್ದ ವಾಹನದ ಬಳಿ ಬಂದ ಕೆಲವು ವಾದ್ಯ ಕಲಾವಿದರು ಹಣ ನೀಡುವಂತೆ ಒತ್ತಾಯಿಸಿದರು.
ಆಗ ಡಿಕೆಶಿ ತಮ್ಮ ಜೇಬಿನಿಂದ ₹ 500 ನೋಟುಗಳನ್ನು ತೆಗೆದು ನೀಡಲು ಯತ್ನಿಸಿದರು, ಆದರೆ ಅವರು ವಾಹನದ ಮೇಲಿದ್ದ ಕಾರಣ ಕಲಾವಿದರು ಎಟುಕಲಿಲ್ಲ. ಆಗ ಡಿಕೆಶಿ ನೋಟಗಳನ್ನುಕಲಾವಿದರೂ ಇದ್ದ ಜನರತ್ತ ಎಸೆದರು.
ಈ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಚುನಾವಣಾಧಿಕಾರಿಗಳು ಡಿಕೆಶಿ ವಿರುದ್ಧ ಪ್ರಕರಣ ದಾಖಲು ಮಾಡಬೇಕು ಎಂದು ಕೆಲವರು ಒತ್ತಾಯಿಸಿದ್ದಾರೆ. ಬುಧವಾರ ಚುನಾವಣಾ ನೀತಿ ಸಂಹಿತೆ ಜಾರಿಯಾಗಿರುವ ಹಿನ್ನೆಲೆಯಲ್ಲಿ ಈ ವಿಡಿಯೊ ಹೆಚ್ಚು ವೈರಲ್ ಆಗುತ್ತಿದೆ.
#WATCH | Karnataka Congress Chief DK Shivakumar was seen throwing Rs 500 currency notes on the artists near Bevinahalli in Mandya district during the ‘Praja Dhwani Yatra’ organized by Congress in Srirangapatna. (28.03) pic.twitter.com/aF2Lf0pksi