<p><strong>ಕಿಕ್ಕೇರಿ:</strong> ಅನಾಥ ವ್ಯಕ್ತಿ ಎಂದು ಇಲ್ಲಿನ ಸ್ಮಶಾನದಲ್ಲಿ ಪೊಲೀಸರು ಹೂತಿದ್ದ ಶವವನ್ನು ಡಿಎನ್ಎ ಪರೀಕ್ಷೆಗಾಗಿ ಸೋಮವಾರ ಹೊರತೆಗೆಯಲಾಯಿತು.</p>.<p>ಕಳೆದ ವರ್ಷ ಹೋಬಳಿಯ ಗಡಿಭಾಗದ ಭಾರತೀಪುರ ಹೇಮಾವತಿ ನಾಲೆಯಲ್ಲಿ ಪುರುಷನ ಶವ ಕೊಳೆತ ಸ್ಥಿತಿಯಲ್ಲಿ ತೇಲಿ ಬಂದಿತ್ತು. ಈ ಸ್ಥಳದಲ್ಲಿದ್ದ ನಾಗರಿಕರು ನೀಡಿದ ಮಾಹಿತಿ ಮೇರೆಗೆ ಕಿಕ್ಕೇರಿ ಪೊಲೀಸರು ನಾಲೆಯಿಂದ ಶವ ಹೊರ ತೆಗೆದು ಪಂಚಾನಾಮೆ ನಡೆಸಿ ‘ಅನಾಥ ಶವ’ ಎಂದು ಹೂತು ಹಾಕಿದ್ದರು.</p>.<p>ಇದೇ ವೇಳೆ ಚನ್ನರಾಯಪಟ್ಟಣ ತಾಲ್ಲೂಕಿನ ನಾಗಯ್ಯಕೊಪ್ಪಲು ಗ್ರಾಮದ ಶೀಲಾ ಎನ್ನುವವರು ತನ್ನ ಮಗ ಪ್ರಜ್ವಲ್ (24) ಕಾಣೆಯಾಗಿರುವ ಸಂಬಂಧ ಶ್ರವಣಬೆಳಗೊಳ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಸಾಲಗಾರರ ಭಯಕ್ಕೆ ಬೆದರಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕೆ ವ್ಯಕ್ತಪಡಿಸಿದ್ದರು. </p>.<p>ಹೂತಿರುವ ಶವ ಹೊರತೆಗೆದು ಡಿಎನ್ಎ ಪರೀಕ್ಷೆ ಮಾಡಿ, ಮೂಲ ವಾರಸುದಾರರಿಗೆ ನ್ಯಾಯ ದೊರಕಿಸಿಕೊಡಲು ಚನ್ನರಾಯಪಟ್ಟಣದ ಹಿರಿಯ ಸಿವಿಲ್ ಜೆಎಂಎಫ್ಸಿ ನ್ಯಾಯಾಲಯ ಈಚೆಗೆ ಆದೇಶ ನೀಡಿತ್ತು.</p>.<p>ಮೃತ ವ್ಯಕ್ತಿಯ ವಾರಸುದಾರರು ಎನ್ನಲಾದ ಶೀಲಾ, ಕಿಕ್ಕೇರಿ ಎಎಸ್ಐ ಶಿವಲಿಂಗಯ್ಯ, ಶ್ರವಣಬೆಳಗೊಳ ಎಸ್ಐ ನವೀನ್ಕುಮಾರ್, ತಹಶೀಲ್ದಾರ್ ಅಶೋಕ್, ಆರೋಗ್ಯ ಇಲಾಖೆಯ ವಿಧಿವಿಜ್ಞಾನ ವೈದ್ಯರ ತಂಡದ ಸಮ್ಮುಖದಲ್ಲಿ ಶವವನ್ನು ಗುಂಡಿಯಿಂದ ಹೊರತೆಗೆಯಲಾಯಿತು.</p>.<p>ಶವದ ಕೈ, ಮೂಳೆ, ಹಲ್ಲು ಮತ್ತಿತರ ಅಂಗಾಂಗಗಳನ್ನು ಡಿಎನ್ಎ ಪರೀಕ್ಷೆಗಾಗಿ ಸಂಗ್ರಹಿಸಿ, ವಿಧಿವಿಜ್ಞಾನ ಪರೀಕ್ಷೆಗೆ ಬೆಂಗಳೂರಿನ ಲ್ಯಾಬ್ಗೆ ಕಳಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಿಕ್ಕೇರಿ:</strong> ಅನಾಥ ವ್ಯಕ್ತಿ ಎಂದು ಇಲ್ಲಿನ ಸ್ಮಶಾನದಲ್ಲಿ ಪೊಲೀಸರು ಹೂತಿದ್ದ ಶವವನ್ನು ಡಿಎನ್ಎ ಪರೀಕ್ಷೆಗಾಗಿ ಸೋಮವಾರ ಹೊರತೆಗೆಯಲಾಯಿತು.</p>.<p>ಕಳೆದ ವರ್ಷ ಹೋಬಳಿಯ ಗಡಿಭಾಗದ ಭಾರತೀಪುರ ಹೇಮಾವತಿ ನಾಲೆಯಲ್ಲಿ ಪುರುಷನ ಶವ ಕೊಳೆತ ಸ್ಥಿತಿಯಲ್ಲಿ ತೇಲಿ ಬಂದಿತ್ತು. ಈ ಸ್ಥಳದಲ್ಲಿದ್ದ ನಾಗರಿಕರು ನೀಡಿದ ಮಾಹಿತಿ ಮೇರೆಗೆ ಕಿಕ್ಕೇರಿ ಪೊಲೀಸರು ನಾಲೆಯಿಂದ ಶವ ಹೊರ ತೆಗೆದು ಪಂಚಾನಾಮೆ ನಡೆಸಿ ‘ಅನಾಥ ಶವ’ ಎಂದು ಹೂತು ಹಾಕಿದ್ದರು.</p>.<p>ಇದೇ ವೇಳೆ ಚನ್ನರಾಯಪಟ್ಟಣ ತಾಲ್ಲೂಕಿನ ನಾಗಯ್ಯಕೊಪ್ಪಲು ಗ್ರಾಮದ ಶೀಲಾ ಎನ್ನುವವರು ತನ್ನ ಮಗ ಪ್ರಜ್ವಲ್ (24) ಕಾಣೆಯಾಗಿರುವ ಸಂಬಂಧ ಶ್ರವಣಬೆಳಗೊಳ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಸಾಲಗಾರರ ಭಯಕ್ಕೆ ಬೆದರಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕೆ ವ್ಯಕ್ತಪಡಿಸಿದ್ದರು. </p>.<p>ಹೂತಿರುವ ಶವ ಹೊರತೆಗೆದು ಡಿಎನ್ಎ ಪರೀಕ್ಷೆ ಮಾಡಿ, ಮೂಲ ವಾರಸುದಾರರಿಗೆ ನ್ಯಾಯ ದೊರಕಿಸಿಕೊಡಲು ಚನ್ನರಾಯಪಟ್ಟಣದ ಹಿರಿಯ ಸಿವಿಲ್ ಜೆಎಂಎಫ್ಸಿ ನ್ಯಾಯಾಲಯ ಈಚೆಗೆ ಆದೇಶ ನೀಡಿತ್ತು.</p>.<p>ಮೃತ ವ್ಯಕ್ತಿಯ ವಾರಸುದಾರರು ಎನ್ನಲಾದ ಶೀಲಾ, ಕಿಕ್ಕೇರಿ ಎಎಸ್ಐ ಶಿವಲಿಂಗಯ್ಯ, ಶ್ರವಣಬೆಳಗೊಳ ಎಸ್ಐ ನವೀನ್ಕುಮಾರ್, ತಹಶೀಲ್ದಾರ್ ಅಶೋಕ್, ಆರೋಗ್ಯ ಇಲಾಖೆಯ ವಿಧಿವಿಜ್ಞಾನ ವೈದ್ಯರ ತಂಡದ ಸಮ್ಮುಖದಲ್ಲಿ ಶವವನ್ನು ಗುಂಡಿಯಿಂದ ಹೊರತೆಗೆಯಲಾಯಿತು.</p>.<p>ಶವದ ಕೈ, ಮೂಳೆ, ಹಲ್ಲು ಮತ್ತಿತರ ಅಂಗಾಂಗಗಳನ್ನು ಡಿಎನ್ಎ ಪರೀಕ್ಷೆಗಾಗಿ ಸಂಗ್ರಹಿಸಿ, ವಿಧಿವಿಜ್ಞಾನ ಪರೀಕ್ಷೆಗೆ ಬೆಂಗಳೂರಿನ ಲ್ಯಾಬ್ಗೆ ಕಳಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>