ಕಳೆದ ಮೂರು ವರ್ಷಗಳಿಂದ ಜನರು ದೂಳಿನ ರಸ್ತೆಯಲ್ಲೇ ಓಡಾಡಿದ್ದಾರೆ. ಹಲವರು ಟಿ.ಬಿ, ಅಸ್ತಮಾ ಮುಂತಾದ ಕಾಯಿಲೆಗಳಿಂದ ನರಳಿದ್ದಾರೆ. ಕಾಮಗಾರಿಗೆ ಚಾಲನೆ ನೀಡಿರುವುದರಿಂದ ಒಂದಲ್ಲಾ ಒಂದು ದಿನ ಕಾಮಗಾರಿ ಪೂರ್ಣವಾಗುತ್ತದೆ, ಡಾಂಬರ್ ರಸ್ತೆ ಬರುತ್ತದೆ ಎಂದು ಕಾಯುತ್ತಿದ್ದೆವು. ಆದರೆ ಈಗ ಗುತ್ತಿಗೆದಾರ ಜಲ್ಲಿ ಹಾಕದೇ, ಹಾಳಾಗಿರುವ ಟಾರ್ ಸುರಿದು ಹೋಗಿದ್ದಾರೆ. ರಸ್ತೆ ಮೇಲೆ ಜಲ್ಲಿ ಪುಡಿ ಸುರಿದು ಕೈತೊಳೆದುಕೊಂಡಿದ್ದಾರೆ. ಕಾಮಗಾರಿ ಮುಗಿಸಿ ಮೂರನೇ ದಿನಕ್ಕೆ ಡಾಂಬರ್ ಕಿತ್ತು ಹೋಗಿದೆ. ವಾರದೊಳಗೆ ರಸ್ತೆ ಮೊದಲಿನಂತೆ ಗುಂಡಿಮಯವಾಗಲಿದೆ ಎಂದು ಆರೋಪಿಸಿದರು.