ಗಾಯಗೊಂಡವರನ್ನು ಬೆಂಗಳೂರಿನ ಕೃಷ್ಣ ಎಂಬವರ ಪುತ್ರಿ ಶ್ರೀದಿವ್ಯಾ (14) ಎಂದು ಗುರುತಿಸಲಾಗಿದೆ. ಆಕೆಯ ತಲೆ ಕೂದಲು ಚರ್ಮ ಸಹಿತ ಕಿತ್ತು ಬಂದು, ತೀವ್ರ ರಕ್ತಸ್ರಾವವಾಗಿದೆ. ಯಂತ್ರದ ಕೊಂಡಿಗೆ ಸಿಕ್ಕಿದ ಬಾಲಕಿ ಐದಾರು ಸುತ್ತು ಗಿರಕಿ ಹೊಡೆದು ಬಳಿಕ ಕೆಳಕ್ಕೆ ಬಿದ್ದಳು. ಕೂದಲು ಮಾತ್ರ ಯಂತ್ರದ ಕೊಂಡಿಯಲ್ಲೇ ಸಿಕ್ಕಿಕೊಂಡಿತ್ತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.