‘1999ರಲ್ಲಿ ದೇವೇಗೌಡನ ಕತೆ ಮುಗಿಯಿತ. ಇನ್ನೇನಿದ್ದರೂ ಮನೆ ಕಡೆ ಹೋಗಬೇಕು ಎಂದು ನನ್ನ ಸಂಬಂಧಿಕರೇ ಮಾತನಾಡಿದ್ದರು. ಆದರೆ, ರೈತರ ಪರವಾದ ಹೋರಾಟ ನನ್ನಲ್ಲಿ ಕೆಚ್ಚು ತುಂಬಿದೆ. ಇನ್ನೂ ಶಕ್ತಿಯಿದ್ದು, ಹೋರಾಟ ಮುಂದುವರಿಸುತ್ತೇನೆ. ನಮ್ಮ ಅಭ್ಯರ್ಥಿಗೆ ಕೊಡುವ ಒಂದೊಂದು ಮತವೂ ದೇವೇಗೌಡನಿಗೆ ಕೊಡುವ ಮತವಾಗಿದೆ’ ಎಂದರು.