ಆರೋಪಿ ಸುನಿಲ್ ಕುಮಾರ್ ಸಲಿಂಗಕಾಮಿಯಾಗಿದ್ದು, ಪ್ರತಿ ಶುಕ್ರವಾರ ಸಂತ್ರಸ್ತ ಬಾಲಕನ ಜತೆಯಲ್ಲಿ ದೇವಾಲಯಗಳ ಸಮೀಪ ಮಲಗುತ್ತಿದ್ದ. ತನಗೆ ದೇವರು ಬರುತ್ತದೆ ಎಂದು ವಿದ್ಯಾರ್ಥಿಯನ್ನು ನಂಬಿಸಿದ್ದ. ಮುಂದೆ ಮದುವೆ ಮಾಡಿಕೊಳ್ಳದೇ ತನ್ನ ಜತೆಯಲ್ಲೇ ಇರಬೇಕು ಎಂದು ಹೆದರಿಸಿದ್ದ. ಮರ್ಮಾಂಗ ಕೊಯ್ದುಕೊಳ್ಳುವಂತೆ ಚಾಕು ಕೊಟ್ಟು, ಜಾಗವನ್ನೂ ತೋರಿಸಿದ್ದ. ಬಾಲಕನೇ ಮರ್ಮಾಂಗವನ್ನು ಕತ್ತರಿಸಿಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.