<p><strong>ಮದ್ದೂರು</strong>: ಮೈತ್ರಿ ಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ನಡೆಸುತ್ತಿರುವ ಪಾದಯಾತ್ರೆ ನನಗೆ ವರ ಕೊಟ್ಟಂತೆ ಆಗಿದೆ. ಅವರ ಅಕ್ರಮ, ಭ್ರಷ್ಟಾಚಾರಗಳನ್ನು ಜನರ ಮುಂದೆ ತೆರೆದಿಡುವುದಕ್ಕೆ ಅವಕಾಶ ಮಾಡಿಕೊಟ್ಟಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು. </p><p>ಪಟ್ಟಣದಲ್ಲಿ ಸೋಮವಾರ ‘ಜನಾಂದೋಲನ ಸಮಾವೇಶ’ ಮುಗಿದ ನಂತರ ಮಾಧ್ಯಮದವರೊಂದಿಗೆ ಅವರು ಮಾತನಾಡಿ, ನನ್ನ ವಿರುದ್ಧ ಸಿಬಿಐ, ಇಡಿ ಬಿಟ್ಟು ಏನಾದರೂ ಸಿಗುತ್ತದೆ ಅಂತ ಜಾಲಾಡಿದರು. ಇದರಿಂದ ನನಗೇನೂ ತೊಂದರೆ ಆಗಲಿಲ್ಲ. ನನ್ನದು ತೆರೆದ ಪುಸ್ತಕ ಎಂದರು. </p><p>ಎಚ್.ಡಿ.ಕುಮಾರಸ್ವಾಮಿ ಅವರು ನನ್ನ ಸವಾಲನ್ನು ಸ್ವೀಕರಿಸಿ, ಚರ್ಚೆ ಮಾಡಲು ದಿನಾಂಕ ನಿಗದಿಪಡಿಸಲಿ. ಅವರು ಅಸೆಂಬ್ಲಿಗೆ ಬರೋಕೆ ಆಗಲ್ಲ. ಹೀಗಾಗಿ ಅವರ ಸಹೋದರನನ್ನು ಚರ್ಚೆಗೆ ಕಳುಹಿಸಲಿ ಎಂದು ಆಹ್ವಾನ ನೀಡಿದರು. </p><p>ಪೌರಾಡಳಿತ ಇಲಾಖೆಯಲ್ಲಿ ಒಂದೇ ದಿನ 20 ಅಧಿಕಾರಿಗಳ ವರ್ಗಾವಣೆ ಕುರಿತ ಪತ್ರಕರ್ತರ ಪ್ರಶ್ನೆಗೆ, ‘ನನ್ನ ಇಲಾಖೆಗೆ ಸಂಬಂಧಪಟ್ಟಂತೆ 100 ನೌಕರರನ್ನು ವರ್ಗಾವಣೆ ಮಾಡಬಹುದು. ಇದರಲ್ಲಿ ಯಾವುದೇ ಲಂಚದ ಆರೋಪ ಬರಲ್ಲ. ಮಂತ್ರಿಗಳಿಗೆ ಅವಕಾಶ ಇರುತ್ತದೆ. ಇದು ಆಡಳಿತಾತ್ಮಕ ನಿರ್ಧಾರ’ ಎಂದು ಸಮರ್ಥಿಸಿಕೊಂಡರು. </p><p>‘ನಾನು ಯಾವುದೇ ದಲಿತ ಕುಟುಂಬವನ್ನು ಹಾಳು ಮಾಡಿಲ್ಲ. ಬೇಕಾದರೆ ಪಟ್ಟಿ ಕೊಡಲಿ’ ಎಂದು ಡಿ.ಕೆ.ಶಿವಕುಮಾರ್ ಅವರು ವಿರೋಧಪಕ್ಷದವರ ಟೀಕೆಗೆ ಉತ್ತರಿಸಿದರು.</p>.ಕುಮಾರಸ್ವಾಮಿ ಗಣಿ ಹಗರಣದ ಬಗ್ಗೆ ಲೋಕಾಯುಕ್ತಕ್ಕೆ ದೂರು: ಡಿ.ಕೆ.ಶಿವಕುಮಾರ್.ಜೆಡಿಎಸ್- ಬಿಜೆಪಿ ಪಾದಯಾತ್ರೆ: ಹೃದಯಾಘಾತದಿಂದ ಜೆಡಿಎಸ್ ಕಾರ್ಯಕರ್ತೆ ಸಾವು.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮದ್ದೂರು</strong>: ಮೈತ್ರಿ ಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ನಡೆಸುತ್ತಿರುವ ಪಾದಯಾತ್ರೆ ನನಗೆ ವರ ಕೊಟ್ಟಂತೆ ಆಗಿದೆ. ಅವರ ಅಕ್ರಮ, ಭ್ರಷ್ಟಾಚಾರಗಳನ್ನು ಜನರ ಮುಂದೆ ತೆರೆದಿಡುವುದಕ್ಕೆ ಅವಕಾಶ ಮಾಡಿಕೊಟ್ಟಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು. </p><p>ಪಟ್ಟಣದಲ್ಲಿ ಸೋಮವಾರ ‘ಜನಾಂದೋಲನ ಸಮಾವೇಶ’ ಮುಗಿದ ನಂತರ ಮಾಧ್ಯಮದವರೊಂದಿಗೆ ಅವರು ಮಾತನಾಡಿ, ನನ್ನ ವಿರುದ್ಧ ಸಿಬಿಐ, ಇಡಿ ಬಿಟ್ಟು ಏನಾದರೂ ಸಿಗುತ್ತದೆ ಅಂತ ಜಾಲಾಡಿದರು. ಇದರಿಂದ ನನಗೇನೂ ತೊಂದರೆ ಆಗಲಿಲ್ಲ. ನನ್ನದು ತೆರೆದ ಪುಸ್ತಕ ಎಂದರು. </p><p>ಎಚ್.ಡಿ.ಕುಮಾರಸ್ವಾಮಿ ಅವರು ನನ್ನ ಸವಾಲನ್ನು ಸ್ವೀಕರಿಸಿ, ಚರ್ಚೆ ಮಾಡಲು ದಿನಾಂಕ ನಿಗದಿಪಡಿಸಲಿ. ಅವರು ಅಸೆಂಬ್ಲಿಗೆ ಬರೋಕೆ ಆಗಲ್ಲ. ಹೀಗಾಗಿ ಅವರ ಸಹೋದರನನ್ನು ಚರ್ಚೆಗೆ ಕಳುಹಿಸಲಿ ಎಂದು ಆಹ್ವಾನ ನೀಡಿದರು. </p><p>ಪೌರಾಡಳಿತ ಇಲಾಖೆಯಲ್ಲಿ ಒಂದೇ ದಿನ 20 ಅಧಿಕಾರಿಗಳ ವರ್ಗಾವಣೆ ಕುರಿತ ಪತ್ರಕರ್ತರ ಪ್ರಶ್ನೆಗೆ, ‘ನನ್ನ ಇಲಾಖೆಗೆ ಸಂಬಂಧಪಟ್ಟಂತೆ 100 ನೌಕರರನ್ನು ವರ್ಗಾವಣೆ ಮಾಡಬಹುದು. ಇದರಲ್ಲಿ ಯಾವುದೇ ಲಂಚದ ಆರೋಪ ಬರಲ್ಲ. ಮಂತ್ರಿಗಳಿಗೆ ಅವಕಾಶ ಇರುತ್ತದೆ. ಇದು ಆಡಳಿತಾತ್ಮಕ ನಿರ್ಧಾರ’ ಎಂದು ಸಮರ್ಥಿಸಿಕೊಂಡರು. </p><p>‘ನಾನು ಯಾವುದೇ ದಲಿತ ಕುಟುಂಬವನ್ನು ಹಾಳು ಮಾಡಿಲ್ಲ. ಬೇಕಾದರೆ ಪಟ್ಟಿ ಕೊಡಲಿ’ ಎಂದು ಡಿ.ಕೆ.ಶಿವಕುಮಾರ್ ಅವರು ವಿರೋಧಪಕ್ಷದವರ ಟೀಕೆಗೆ ಉತ್ತರಿಸಿದರು.</p>.ಕುಮಾರಸ್ವಾಮಿ ಗಣಿ ಹಗರಣದ ಬಗ್ಗೆ ಲೋಕಾಯುಕ್ತಕ್ಕೆ ದೂರು: ಡಿ.ಕೆ.ಶಿವಕುಮಾರ್.ಜೆಡಿಎಸ್- ಬಿಜೆಪಿ ಪಾದಯಾತ್ರೆ: ಹೃದಯಾಘಾತದಿಂದ ಜೆಡಿಎಸ್ ಕಾರ್ಯಕರ್ತೆ ಸಾವು.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>