<p><strong>ಪಾಂಡವಪುರ:</strong> ತಾಲ್ಲೂಕಿನ ಹರವು ಗ್ರಾಮದಲ್ಲಿ ಡಿ.7 ಮತ್ತು 8ರಂದು ಒರಳುಕಲ್ಲು ದೇವಮ್ಮನ ಹಸಿಕರಗ ಮಹೋತ್ಸವ ನಡೆಯಲಿದೆ.</p>.<p>ಹಸಿ ಕರಗವನ್ನು ದೇವರ ಗುಡ್ಡಪ್ಪ ಮಂಜುನಾಥ ಹೊರಲಿದ್ದಾರೆ. ಹೂವಿನ ಕರಗ ಹೊರಲು ಈಗಾಗಲೇ 60ಮಂದಿ ಸಿದ್ಧತೆ ನಡೆಸಲಿದ್ದಾರೆ.</p>.<p>ಕರಗ ಹೊರುವವರು ಡಿ.7ರ ಬೆಳಿಗ್ಗಿನಿಂದ ಉಪವಾಸವಿದ್ದು, ಡಿ.8ರ ರಾತ್ರಿ ಹಸಿ ಕರಗ ಹೊತ್ತು ಮೆರವಣಿಗೆಯಲ್ಲಿ ಸಾಗುತ್ತಾರೆ. ಹಸಿ ಕರಗ ಹೊರುವ ಗುಡ್ಡಪ್ಪ ಗುರುವಾರ ಮುಂಜಾನೆ ಪೂಜಾ ವಿಧಿ–ವಿಧಾನಗಳನ್ನು ಪೂರೈಸಿ ನಿಯಮಗಳಂತೆ ಉಪವಾಸವಿದ್ದು, ಶುಕ್ರವಾರ ರಾತ್ರಿ ಹಸಿ ಕರಗ ಹೊತ್ತು ಮೆರವಣಿಗೆಯಲ್ಲಿ ಸಾಗುತ್ತಾರೆ.</p>.<p>ಗುರುವಾರ ಹೂವಿನ ಕರಗದ ಮೆರವಣಿಗೆ ಹೋಗುವಾಗ ಪಾಂಡವಪುರ ಟೌನ್ ಹಾರೋಹಳ್ಳಿಗೆ ತೆರಳಿ ಕುಂಬಾರನಿಗೆ ಹಸಿ ಕರಗ ಸಿದ್ದಪಡಿಸಲು ಹೇಳುತ್ತಾರೆ. ಶುಕ್ರವಾರ ಬೆಳಿಗ್ಗೆ ಮಣ್ಣಿನ 8 ಕೆ.ಜಿ.ತೂಕವಿರುವ ಕರಗ ಸಿದ್ದಪಡಿಸಲಾಗುತ್ತದೆ. ಅದನ್ನು ಕೆರೆತೊಣ್ಣೂರು ಕೆರೆಗೆ ತಂದು ಹೂವು ಹೊಂಬಾಳೆಯಿಂದ ಅಲಂಕರಿಸಿ ಪೂಜಾ ಕಾರ್ಯ ನೆರವೇರಿಸಿ ಗುಡ್ಡಪ್ಪ ಕರಗ ಹೊತ್ತು ಹರವು ದೇವಸ್ಥಾನಕ್ಕೆ ಬಂದು ಮೆರವಣಿಗೆ ಹೊರಡುತ್ತಾರೆ. ಈ ವೇಳೆ ಹರಕೆ ಹೊತ್ತ ಭಕ್ತರು ಬಾಯಿಗೆ ಬೀಗ ಹಾಕಿಸಿಕೊಂಡು ಭಕ್ತಿಭಾವ ತೋರುತ್ತಾರೆ.</p>.<p>‘ಎಂದಿನಂತೆ ಕರಗ ಮಹೋತ್ಸವದಲ್ಲಿ ಉಚಿತ ಸಾಮೂಹಿಕ ವಿವಾಹವನ್ನು ದೇವಸ್ಥಾನದಲ್ಲಿ ನಡೆಯುತ್ತದೆ. ಉಚಿತ ಊಟದ ವ್ಯವಸ್ಥೆ ಮಾಡಲಾಗಿದೆ’ ಎಂದು ಗುಡ್ಡಪ್ಪ ಮಂಜಣ್ಣ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಪಾಂಡವಪುರ:</strong> ತಾಲ್ಲೂಕಿನ ಹರವು ಗ್ರಾಮದಲ್ಲಿ ಡಿ.7 ಮತ್ತು 8ರಂದು ಒರಳುಕಲ್ಲು ದೇವಮ್ಮನ ಹಸಿಕರಗ ಮಹೋತ್ಸವ ನಡೆಯಲಿದೆ.</p>.<p>ಹಸಿ ಕರಗವನ್ನು ದೇವರ ಗುಡ್ಡಪ್ಪ ಮಂಜುನಾಥ ಹೊರಲಿದ್ದಾರೆ. ಹೂವಿನ ಕರಗ ಹೊರಲು ಈಗಾಗಲೇ 60ಮಂದಿ ಸಿದ್ಧತೆ ನಡೆಸಲಿದ್ದಾರೆ.</p>.<p>ಕರಗ ಹೊರುವವರು ಡಿ.7ರ ಬೆಳಿಗ್ಗಿನಿಂದ ಉಪವಾಸವಿದ್ದು, ಡಿ.8ರ ರಾತ್ರಿ ಹಸಿ ಕರಗ ಹೊತ್ತು ಮೆರವಣಿಗೆಯಲ್ಲಿ ಸಾಗುತ್ತಾರೆ. ಹಸಿ ಕರಗ ಹೊರುವ ಗುಡ್ಡಪ್ಪ ಗುರುವಾರ ಮುಂಜಾನೆ ಪೂಜಾ ವಿಧಿ–ವಿಧಾನಗಳನ್ನು ಪೂರೈಸಿ ನಿಯಮಗಳಂತೆ ಉಪವಾಸವಿದ್ದು, ಶುಕ್ರವಾರ ರಾತ್ರಿ ಹಸಿ ಕರಗ ಹೊತ್ತು ಮೆರವಣಿಗೆಯಲ್ಲಿ ಸಾಗುತ್ತಾರೆ.</p>.<p>ಗುರುವಾರ ಹೂವಿನ ಕರಗದ ಮೆರವಣಿಗೆ ಹೋಗುವಾಗ ಪಾಂಡವಪುರ ಟೌನ್ ಹಾರೋಹಳ್ಳಿಗೆ ತೆರಳಿ ಕುಂಬಾರನಿಗೆ ಹಸಿ ಕರಗ ಸಿದ್ದಪಡಿಸಲು ಹೇಳುತ್ತಾರೆ. ಶುಕ್ರವಾರ ಬೆಳಿಗ್ಗೆ ಮಣ್ಣಿನ 8 ಕೆ.ಜಿ.ತೂಕವಿರುವ ಕರಗ ಸಿದ್ದಪಡಿಸಲಾಗುತ್ತದೆ. ಅದನ್ನು ಕೆರೆತೊಣ್ಣೂರು ಕೆರೆಗೆ ತಂದು ಹೂವು ಹೊಂಬಾಳೆಯಿಂದ ಅಲಂಕರಿಸಿ ಪೂಜಾ ಕಾರ್ಯ ನೆರವೇರಿಸಿ ಗುಡ್ಡಪ್ಪ ಕರಗ ಹೊತ್ತು ಹರವು ದೇವಸ್ಥಾನಕ್ಕೆ ಬಂದು ಮೆರವಣಿಗೆ ಹೊರಡುತ್ತಾರೆ. ಈ ವೇಳೆ ಹರಕೆ ಹೊತ್ತ ಭಕ್ತರು ಬಾಯಿಗೆ ಬೀಗ ಹಾಕಿಸಿಕೊಂಡು ಭಕ್ತಿಭಾವ ತೋರುತ್ತಾರೆ.</p>.<p>‘ಎಂದಿನಂತೆ ಕರಗ ಮಹೋತ್ಸವದಲ್ಲಿ ಉಚಿತ ಸಾಮೂಹಿಕ ವಿವಾಹವನ್ನು ದೇವಸ್ಥಾನದಲ್ಲಿ ನಡೆಯುತ್ತದೆ. ಉಚಿತ ಊಟದ ವ್ಯವಸ್ಥೆ ಮಾಡಲಾಗಿದೆ’ ಎಂದು ಗುಡ್ಡಪ್ಪ ಮಂಜಣ್ಣ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>