<p><strong>ಹಲಗೂರು</strong>: ಸಮೀಪದ ಮುತ್ತತ್ತಿ ಕಾವೇರಿ ವನ್ಯಜೀವಿ ವಲಯದ ಅರಣ್ಯ ಪ್ರದೇಶದಲ್ಲಿ ಚಿರತೆಗಳ ಕಾದಾಟದಲ್ಲಿ ಸುಮಾರು 18 ತಿಂಗಳ ವಯೋಮಾನದ ಹೆಣ್ಣು ಚಿರತೆ ಸಾವನ್ನಪಿರುವ ಘಟನೆ ಬುಧವಾರ ಮಧ್ಯಾಹ್ನ ನಡೆದಿದೆ.</p>.<p>ಹೊನ್ನೇಮರದ ಹಳ್ಳದ ಬಳಿ ಎರಡು ಚಿರತೆಗಳು ಕಾದಾಟದಲ್ಲಿ ತೊಡಗಿದ್ದು, ಹೆಣ್ಣು ಚಿರತೆಯ ಹೊಟ್ಟೆಯ ಭಾಗವನ್ನು ಮತ್ತೊಂದು ಚಿರತೆ ತಿನ್ನುತ್ತಿರುವ ದೃಶ್ಯ ವನ್ಯಜೀವಿ ವಲಯದಲ್ಲಿ ಅಳವಡಿಸಿರುವ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿದೆ. </p>.<p>ಸ್ಥಳಕ್ಕೆ ಕಾವೇರಿ ವನ್ಯಜೀವಿ ವಲಯ ಮುಖ್ಯ ಅರಣ್ಯ ಸಂರಕ್ಷಣಾ ಅಧಿಕಾರಿ ಡಿ.ಹೀರಾಲಾಲ್, ಡಿ.ಸಿ.ಎಫ್ ರಾಜು, ಸಹಾಯಕ ಅರಣ್ಯ ಸಂರಕ್ಷಣಾ ಅಧಿಕಾರಿ ನಾಗೇಂದ್ರ ಪ್ರಸಾದ್, ವಲಯ ಅರಣ್ಯ ಅಧಿಕಾರಿ ಪ್ರಮೋದ್ ಕುಮಾರ್ ದೇವ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.</p>.<p>ಬನ್ನೇರುಘಟ್ಟ ಪ್ರಾದೇಶಿಕ ಸಂಶೋಧನಾ ಕೇಂದ್ರದ ಅಧಿಕಾರಿ ಡಾ. ಮಂಜುನಾಥ್ ಮತ್ತು ಸ್ಥಳೀಯ ವೈದ್ಯರ ತಂಡ ಸೇರಿ ರಾಷ್ಟ್ರೀಯ ಹುಲಿ ಸುರಕ್ಷತಾ ಪ್ರಾಧಿಕಾರ (ಎನ್.ಟಿ.ಸಿ.ಎ) ನಿಯಮಾವಳಿಗಳ ಮಾರ್ಗಸೂಚಿ ಅನ್ವಯ ಮರಣೋತ್ತರ ಪರೀಕ್ಷೆ ನಡೆಸಿ ಅಂತ್ಯಕ್ರಿಯೆ ನಡೆಸಲಾಯಿತು.</p>.<p>ಈ ಸಂದರ್ಭದಲ್ಲಿ ವನ್ಯಜೀವಿ ಮಂಡಳಿ ಮಾಜಿ ಸದಸ್ಯ ಜಿ.ಮಲ್ಲೇಶಪ್ಪ, ಎನ್.ಟಿ.ಸಿ.ಎ ನಾಮನಿರ್ದೇಶಿತ ಸದಸ್ಯ ಜಿ.ಮಲ್ಲೇಶಪ್ಪ, ಹೊಳೆಮತ್ತಿ ಕನ್ಸರ್ವೇಷನ್ ಫೌಂಡೇಷನ್ ಡೇವಿಡ್ ಕುಮಾರ್, ವನೋದಯ ಫೌಂಡೇಶನ್ ಮಹೇಶ್ ಕುಮಾರ್, ಸ್ಥಳೀಯರಾದ ಕುಮಾರ್, ತಿಮ್ಮೇಗೌಡ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹಲಗೂರು</strong>: ಸಮೀಪದ ಮುತ್ತತ್ತಿ ಕಾವೇರಿ ವನ್ಯಜೀವಿ ವಲಯದ ಅರಣ್ಯ ಪ್ರದೇಶದಲ್ಲಿ ಚಿರತೆಗಳ ಕಾದಾಟದಲ್ಲಿ ಸುಮಾರು 18 ತಿಂಗಳ ವಯೋಮಾನದ ಹೆಣ್ಣು ಚಿರತೆ ಸಾವನ್ನಪಿರುವ ಘಟನೆ ಬುಧವಾರ ಮಧ್ಯಾಹ್ನ ನಡೆದಿದೆ.</p>.<p>ಹೊನ್ನೇಮರದ ಹಳ್ಳದ ಬಳಿ ಎರಡು ಚಿರತೆಗಳು ಕಾದಾಟದಲ್ಲಿ ತೊಡಗಿದ್ದು, ಹೆಣ್ಣು ಚಿರತೆಯ ಹೊಟ್ಟೆಯ ಭಾಗವನ್ನು ಮತ್ತೊಂದು ಚಿರತೆ ತಿನ್ನುತ್ತಿರುವ ದೃಶ್ಯ ವನ್ಯಜೀವಿ ವಲಯದಲ್ಲಿ ಅಳವಡಿಸಿರುವ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿದೆ. </p>.<p>ಸ್ಥಳಕ್ಕೆ ಕಾವೇರಿ ವನ್ಯಜೀವಿ ವಲಯ ಮುಖ್ಯ ಅರಣ್ಯ ಸಂರಕ್ಷಣಾ ಅಧಿಕಾರಿ ಡಿ.ಹೀರಾಲಾಲ್, ಡಿ.ಸಿ.ಎಫ್ ರಾಜು, ಸಹಾಯಕ ಅರಣ್ಯ ಸಂರಕ್ಷಣಾ ಅಧಿಕಾರಿ ನಾಗೇಂದ್ರ ಪ್ರಸಾದ್, ವಲಯ ಅರಣ್ಯ ಅಧಿಕಾರಿ ಪ್ರಮೋದ್ ಕುಮಾರ್ ದೇವ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.</p>.<p>ಬನ್ನೇರುಘಟ್ಟ ಪ್ರಾದೇಶಿಕ ಸಂಶೋಧನಾ ಕೇಂದ್ರದ ಅಧಿಕಾರಿ ಡಾ. ಮಂಜುನಾಥ್ ಮತ್ತು ಸ್ಥಳೀಯ ವೈದ್ಯರ ತಂಡ ಸೇರಿ ರಾಷ್ಟ್ರೀಯ ಹುಲಿ ಸುರಕ್ಷತಾ ಪ್ರಾಧಿಕಾರ (ಎನ್.ಟಿ.ಸಿ.ಎ) ನಿಯಮಾವಳಿಗಳ ಮಾರ್ಗಸೂಚಿ ಅನ್ವಯ ಮರಣೋತ್ತರ ಪರೀಕ್ಷೆ ನಡೆಸಿ ಅಂತ್ಯಕ್ರಿಯೆ ನಡೆಸಲಾಯಿತು.</p>.<p>ಈ ಸಂದರ್ಭದಲ್ಲಿ ವನ್ಯಜೀವಿ ಮಂಡಳಿ ಮಾಜಿ ಸದಸ್ಯ ಜಿ.ಮಲ್ಲೇಶಪ್ಪ, ಎನ್.ಟಿ.ಸಿ.ಎ ನಾಮನಿರ್ದೇಶಿತ ಸದಸ್ಯ ಜಿ.ಮಲ್ಲೇಶಪ್ಪ, ಹೊಳೆಮತ್ತಿ ಕನ್ಸರ್ವೇಷನ್ ಫೌಂಡೇಷನ್ ಡೇವಿಡ್ ಕುಮಾರ್, ವನೋದಯ ಫೌಂಡೇಶನ್ ಮಹೇಶ್ ಕುಮಾರ್, ಸ್ಥಳೀಯರಾದ ಕುಮಾರ್, ತಿಮ್ಮೇಗೌಡ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>