‘ನಮ್ಮೂರಿಗೆ ಪ್ರಯಾಣಿಸಲು ಟಿಕೆಟ್ ತೆಗೆದುಕೊಂಡಿದ್ದೇವೆ. ನ್ಯಾಯಾಲಯದ ವ್ಯಾಜ್ಯ ಇರುವವರಿಗೆ ಹಾಗೂ ಕಾನೂನಿಡಿ ಇತ್ಯರ್ಥ ಪಡಿಸಿಕೊಳ್ಳುವ ಪ್ರಕರಣಗಳನ್ನು ರಾಜಿ ಮಾಡಿಕೊಳ್ಳಲು ಸಾರಿಗೆ ಸಂಸ್ಥೆಯವರು ವಿಭಿನ್ನ ಹಾಗೂ ವಿನೂತನ ಕೆಲಸ ಮಾಡಿದ್ದು, ನೆರವಾಗುತ್ತಿದೆ. ಟಿಕೆಟ್ ಕೊಂಡವರು ಇದರಲ್ಲಿನ ಮಾಹಿತಿ ಓದಿ ಸುಮ್ಮನಾಗದೆ ಈ ಮಾಹಿತಿಯನ್ನು ಇತರರಿಗೂ ತಿಳಿಸಿದರೆ ಹೆಚ್ಚು ಅನುಕೂಲವಾಗುತ್ತದೆ’ ಎಂದು ನಂಜುಂಡಸ್ವಾಮಿ, ಸತೀಶ್ ಮದ್ದೂರು, ರೇಖಾ, ಸುಷ್ಮಿತಾ ಅಭಿಪ್ರಾಯಪಟ್ಟರು.