<p><strong>ಮದ್ದೂರು</strong>: ಮುಂದಿನ ದಿನಗಳಲ್ಲಿ ನೂರಾರು ಕೋಟಿ ರೂಪಾಯಿ ಅನುದಾನ ತಂದು ಮದ್ದೂರು ನಗರವನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಲಾಗುವುದು ಎಂದು ಶಾಸಕ ಕೆ.ಎಂ. ಉದಯ್ ತಿಳಿಸಿದರು.</p>.<p>ಪಟ್ಟಣದ ನಗರಸಭೆಯ ಎಸ್.ಎಂ.ಕೃಷ್ಣ ಸಭಾಂಗಣದಲ್ಲಿ ಮಂಗಳವಾರ ಅಧಕ್ಷೆ ಕೋಕಿಲಾ ಅರುಣ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿದರು.</p>.<p>ಸದಸ್ಯ ಎಂ.ಐ. ಪ್ರವೀಣ್, ಪುರಸಭೆಯನ್ನು ನಗರಸಭೆ ಮಾಡಿದ್ದೀರಿ. ನಗರಸಭೆಯೆಂದು ನಾಮಫಲಕ ಹಾಕುವುದಕ್ಕೂ ಮೊದಲು ಈ ಬಗ್ಗೆ ಪೂರ್ವಭಾವಿ ಸಭೆ ಕರೆದು ಏಕೆ ಸದಸ್ಯರ ಅನುಮತಿ ಪಡೆಯಲಿಲ್ಲ? ನಗರಸಭೆಗೆ ಸೇರ್ಪಡೆಯಾದರೆ ಗ್ರಾಮ ಪಂಚಾಯಿತಿಯವರು ನ್ಯಾಯಾಲಯಕ್ಕೆ ಹೋಗುವ ತೀರ್ಮಾನ ಮಾಡಿರುವುದಾಗಿ ಅಂದೇ ತಿಳಿಸಿದ್ದರು. ಇದೆಲ್ಲ ಗೊತ್ತಿದ್ದೂ ಏಕಾಏಕಿ ನಾಮಫಲಕ ಅನಾವರಣ ಮಾಡಿದ್ದೀರಿ ಎಂದು ಅಧ್ಯಕ್ಷೆ ಕೋಕಿಲಾ ಅರುಣ್ ಅವರನ್ನು ಪ್ರಶ್ನಿಸಿದರು.</p>.<p>ಪಟ್ಟಣದಲ್ಲಿ ರಸ್ತೆಗಳು ಗುಂಡಿ ಬಿದ್ದಿವೆ. ಗುಂಡಿ ಮುಚ್ಚಿಸಿಲ್ಲ. ಕಚೇರಿಯಲ್ಲಿ ಹೊರಗುತ್ತಿಗೆಯಲ್ಲಿ ಕೆಲಸ ಮಾಡುತ್ತಿರುವವರಿಗೆ ಹಲವು ತಿಂಗಳಿನಿಂದ ಸಂಬಳ ನೀಡಿಲ್ಲ. ಪರಿಸ್ಥಿತಿ ಹೀಗಿರುವಾಗ ಪುರಸಭೆಯನ್ನು ನಗರಸಭೆಯನ್ನಾಗಿ ಯಾಕಾಗಿ ಮೇಲ್ದರ್ಜೆಗೇರಿಸಿದ್ದೀರಿ ಎಂದು ಪ್ರಶ್ನಿಸಿದರು.</p>.<p>ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ ಕೆ.ಎಂ. ಉದಯ್ ಅವರು, ಪಟ್ಟಣವಾಗಿರುವ ಮದ್ದೂರನ್ನು ನಗರವಾಗಿಸುವ ಉದ್ದೇಶದಿಂದಲೇ ಪುರಸಭೆಯನ್ನು ನಗರಸಭೆಯನ್ನಾಗಿಸಲಾಗಿದೆ. ಮುಂದಿನ ದಿನಗಳಲ್ಲಿ ಎಲ್ಲ ರಸ್ತೆಗಳನ್ನು ಹೊಸದಾಗಿ ಅಭಿವೃದ್ಧಿಪಡಿಸಲಾಗುವುದು. ಗೊರವನಹಳ್ಳಿ ರಸ್ತೆಯನ್ನೂ ನವೀಕರಿಸಿ ಅಭಿವೃದ್ಧಿ ಮಾಡಲಾಗುವುದು ಎಂದರು.</p>.<p>ಸದ್ಯದಲ್ಲೇ ಪಟ್ಟಣದ ಪ್ರಮುಖ ರಸ್ತೆ ಪೇಟೆ ಬೀದಿಯನ್ನು ವಿಸ್ತರಿಸಿ, ₹ 175 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಾಗುವುದು. 2.5 ಕಿ. ಮೀ ಉದ್ದದ ಈ ರಸ್ತೆಯಲ್ಲಿ ಸುಮಾರು 5 ವೃತ್ತಗಳನ್ನು ನಿರ್ಮಿಸಿ, ಮಹನೀಯರ ಹೆಸರನ್ನು ವೃತ್ತಗಳಿಗೆ ಇಟ್ಟು, ಅವರ ಪ್ರತಿಮೆಗಳನ್ನು ಸ್ಥಾಪಿಸಲಾಗುವುದು ಎಂದರು.</p>.<p>ಅದಕ್ಕೂ ಮೊದಲು ಸುಸಜ್ಜಿತವಾದ ಹೂವು, ತರಕಾರಿ ಮಾರುಕಟ್ಟೆಯನ್ನು ಹಳೇ ಬಸ್ ನಿಲ್ದಾಣದ ಬಳಿ ನಿರ್ಮಿಸಿ, ಅಲ್ಲಿಗೆ ಬೀದಿ ಬದಿಯ ವ್ಯಾಪಾರಿಗಳನ್ನೂ ಸ್ಥಳಾಂತರ ಮಾಡಲಾಗುವುದು. ಶಿವಪುರದ ಬಳಿ ಪ್ರತ್ಯೇಕವಾಗಿ ಮಾಂಸದ ಮಾರುಕಟ್ಟೆ ನಿರ್ಮಿಸಲಾಗುವುದು ಎಂದರು.</p>.<p>ಕೊಪ್ಪ ವೃತ್ತ, ಕೊಲ್ಲಿ ಸರ್ಕಲ್, ಐ.ಬಿ. ಸರ್ಕಲ್ಗಳಲ್ಲಿ ಹೈಮಾಸ್ಟ್ ವಿದ್ಯುತ್ ದೀಪವು ಕೆಟ್ಟುಹೋಗಿ ವರ್ಷವೇ ಕಳೆದಿದ್ದರೂ ದುರಸ್ತಿಯಾಗಿಲ್ಲ. ಕೂಡಲೇ ಕ್ರಮವಹಿಸಬೇಕು ಎಂದು ಸದಸ್ಯೆ ಸರ್ವಮಂಗಳ ಆಗ್ರಹಿಸಿದರು.</p>.<p>ಶವ ಸಾಗಿಸುವ ನಗರಸಭೆಯ ವಾಹನವನ್ನು ಶವ ಸಂಸ್ಕಾರಕ್ಕೆ ಕಳಿಸುವ ವೇಳೆ ಡೀಸೆಲ್ಗೆ ₹ 500 ಪಡೆಯುತ್ತಿರುವುದು ಗಮನಕ್ಕೆ ಬಂದಿದೆ. ಡೀಸೆಲ್ ಶುಲ್ಕ ಪಡೆಯದೇ ಸಾರ್ವಜನಿಕರಿಗೆ ಉಚಿತವಾಗಿ ಅನುಕೂಲ ಕಲ್ಪಿಸಬೇಕು ಎಂದು ಸದಸ್ಯ ಸಚಿನ್ ಆಗ್ರಿಹಿಸಿದರು. ಇದಕ್ಕೆ ಎಲ್ಲ ಸದಸ್ಯರೂ ಧ್ವನಿಗೂಡಿಸಿದರು. </p>.<p>ಸಭೆಯಲ್ಲಿ ಪ್ರಭಾರ ಪೌರಾಯುಕ್ತರಾದ ತಹಶೀಲ್ದಾರ್ ಪರಶುರಾಮ ಸತ್ತಿಗೇರಿ, ಅಧ್ಯಕ್ಷೆ ಕೋಕಿಲಾ ಅರುಣ್, ಉಪಾಧ್ಯಕ್ಷೆ ಪ್ರಸನ್ನ, ಸ್ಥಾಯಿ ಸಮಿತಿ ಅಧ್ಯಕ್ಷೆ ವನಿತಾ ಸೇರಿ ಸದಸ್ಯರು ಹಾಗೂ ಆಧಿಕಾರಿಗಳು ಹಾಜರಿದ್ದರು.</p>.<p> ₹175 ಕೋಟಿ ವೆಚ್ಚದಲ್ಲಿ ಪ್ರಮುಖ ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗುವುದು ಐದು ವೃತ್ತಗಳನ್ನು ನಿರ್ಮಿಸಿ, ಅವುಗಳಿಗೆ ಮಹನೀಯರ ಹೆಸರಿಡಲಾಗುವುದು ಹಳೇ ಬಸ್ ನಿಲ್ದಾಣದ ಬಳಿ ಸುಸಜ್ಜಿತ ಮಾರುಕಟ್ಟೆ ನಿರ್ಮಾಣ ಯೋಜನೆ</p>.<p><strong>‘ಯುಜಿಡಿ ಕಾಮಗಾರಿ ಅಪೂರ್ಣ: ಬಿಲ್ ಪಾವತಿಸಿದ್ದೇಕೆ’ </strong></p><p>ಈ ಹಿಂದೆ ಡಿ.ಸಿ. ತಮ್ಮಣ್ಣ ಅವರು ಶಾಸಕರಾಗಿದ್ದಾಗ 2 ನೇ ಹಂತದ ಒಳಚರಂಡಿ ಹಾಗೂ ಕುಡಿಯುವ ನೀರಿನ ಸರಬರಾಜು ಮಾಡುವ ಕಾಮಗಾರಿ ಸುಮಾರು ₹100 ಕೋಟಿಗೂ ಹೆಚ್ಚು ವೆಚ್ಚದಲ್ಲಿ ನಡೆದಿತ್ತು. ಆದರೆ ಅರ್ಧದಷ್ಟು ಕೆಲಸವೂ ನಡೆದಿಲ್ಲ. ಈ ಬಗ್ಗೆ ಎಷ್ಟೋ ಸಾರಿ ಸಾಮಾನ್ಯ ಸಭೆಗಳಲ್ಲಿ ಸಂಬಂಧಪಟ್ಟ ಅಧಿಕಾರಿಯನ್ನು ಕರೆಸಿ ಮಾಹಿತಿ ಕೇಳಲಾಗಿತ್ತು. ಹೀಗಿದ್ದರೂ ಆ ಬಗ್ಗೆ ಸರಿಯಾದ ಕ್ರಮ ವಹಿಸದೇ ಕಾಮಗಾರಿಯ ಬಿಲ್ ಮೊತ್ತವನ್ನು ಸಂಬಂಧಪಟ್ಟ ಗುತ್ತಿಗೆದಾರನಿಗೆ ನೀಡಿರುವುದು ಎಷ್ಟು ಸರಿ ಎಂದು ಸದಸ್ಯರಾದ ಪ್ರವೀಣ್ ಸಚಿನ್ ಸೇರಿ ಹಲವು ಸದಸ್ಯರು ಅಧ್ಯಕ್ಷರನ್ನು ತರಾಟೆಗೆ ತೆಗೆದುಕೊಂಡರು. ಈ ವೇಳೆ ಶಾಸಕ ಕೆ. ಎಂ ಉದಯ್ ಮಧ್ಯೆ ಪ್ರವೇಶಿಸಿ ಕೂಡಲೇ ಸಂಬಂಧಪಟ್ಟ ಅಧಿಕಾರಿಗೆ ಸ್ಪಷ್ಟನೆ ಕೇಳಿ ನೋಟಿಸ್ ನೀಡಿ. ಆಗ ಆ ಅಧಿಕಾರಿಯು ಕಾಮಗಾರಿ ನಡೆಸಿದ ಗುತ್ತಿಗೆದಾರನಿಗೆ ನೋಟೀಸ್ ನೀಡುತ್ತಾರೆ ಎಂದು ಅಧಿಕಾರಿಗಳಿಗೆ ಹಾಗೂ ಅಧ್ಯಕ್ಷರಿಗೆ ಸೂಚನೆ ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮದ್ದೂರು</strong>: ಮುಂದಿನ ದಿನಗಳಲ್ಲಿ ನೂರಾರು ಕೋಟಿ ರೂಪಾಯಿ ಅನುದಾನ ತಂದು ಮದ್ದೂರು ನಗರವನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಲಾಗುವುದು ಎಂದು ಶಾಸಕ ಕೆ.ಎಂ. ಉದಯ್ ತಿಳಿಸಿದರು.</p>.<p>ಪಟ್ಟಣದ ನಗರಸಭೆಯ ಎಸ್.ಎಂ.ಕೃಷ್ಣ ಸಭಾಂಗಣದಲ್ಲಿ ಮಂಗಳವಾರ ಅಧಕ್ಷೆ ಕೋಕಿಲಾ ಅರುಣ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿದರು.</p>.<p>ಸದಸ್ಯ ಎಂ.ಐ. ಪ್ರವೀಣ್, ಪುರಸಭೆಯನ್ನು ನಗರಸಭೆ ಮಾಡಿದ್ದೀರಿ. ನಗರಸಭೆಯೆಂದು ನಾಮಫಲಕ ಹಾಕುವುದಕ್ಕೂ ಮೊದಲು ಈ ಬಗ್ಗೆ ಪೂರ್ವಭಾವಿ ಸಭೆ ಕರೆದು ಏಕೆ ಸದಸ್ಯರ ಅನುಮತಿ ಪಡೆಯಲಿಲ್ಲ? ನಗರಸಭೆಗೆ ಸೇರ್ಪಡೆಯಾದರೆ ಗ್ರಾಮ ಪಂಚಾಯಿತಿಯವರು ನ್ಯಾಯಾಲಯಕ್ಕೆ ಹೋಗುವ ತೀರ್ಮಾನ ಮಾಡಿರುವುದಾಗಿ ಅಂದೇ ತಿಳಿಸಿದ್ದರು. ಇದೆಲ್ಲ ಗೊತ್ತಿದ್ದೂ ಏಕಾಏಕಿ ನಾಮಫಲಕ ಅನಾವರಣ ಮಾಡಿದ್ದೀರಿ ಎಂದು ಅಧ್ಯಕ್ಷೆ ಕೋಕಿಲಾ ಅರುಣ್ ಅವರನ್ನು ಪ್ರಶ್ನಿಸಿದರು.</p>.<p>ಪಟ್ಟಣದಲ್ಲಿ ರಸ್ತೆಗಳು ಗುಂಡಿ ಬಿದ್ದಿವೆ. ಗುಂಡಿ ಮುಚ್ಚಿಸಿಲ್ಲ. ಕಚೇರಿಯಲ್ಲಿ ಹೊರಗುತ್ತಿಗೆಯಲ್ಲಿ ಕೆಲಸ ಮಾಡುತ್ತಿರುವವರಿಗೆ ಹಲವು ತಿಂಗಳಿನಿಂದ ಸಂಬಳ ನೀಡಿಲ್ಲ. ಪರಿಸ್ಥಿತಿ ಹೀಗಿರುವಾಗ ಪುರಸಭೆಯನ್ನು ನಗರಸಭೆಯನ್ನಾಗಿ ಯಾಕಾಗಿ ಮೇಲ್ದರ್ಜೆಗೇರಿಸಿದ್ದೀರಿ ಎಂದು ಪ್ರಶ್ನಿಸಿದರು.</p>.<p>ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ ಕೆ.ಎಂ. ಉದಯ್ ಅವರು, ಪಟ್ಟಣವಾಗಿರುವ ಮದ್ದೂರನ್ನು ನಗರವಾಗಿಸುವ ಉದ್ದೇಶದಿಂದಲೇ ಪುರಸಭೆಯನ್ನು ನಗರಸಭೆಯನ್ನಾಗಿಸಲಾಗಿದೆ. ಮುಂದಿನ ದಿನಗಳಲ್ಲಿ ಎಲ್ಲ ರಸ್ತೆಗಳನ್ನು ಹೊಸದಾಗಿ ಅಭಿವೃದ್ಧಿಪಡಿಸಲಾಗುವುದು. ಗೊರವನಹಳ್ಳಿ ರಸ್ತೆಯನ್ನೂ ನವೀಕರಿಸಿ ಅಭಿವೃದ್ಧಿ ಮಾಡಲಾಗುವುದು ಎಂದರು.</p>.<p>ಸದ್ಯದಲ್ಲೇ ಪಟ್ಟಣದ ಪ್ರಮುಖ ರಸ್ತೆ ಪೇಟೆ ಬೀದಿಯನ್ನು ವಿಸ್ತರಿಸಿ, ₹ 175 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಾಗುವುದು. 2.5 ಕಿ. ಮೀ ಉದ್ದದ ಈ ರಸ್ತೆಯಲ್ಲಿ ಸುಮಾರು 5 ವೃತ್ತಗಳನ್ನು ನಿರ್ಮಿಸಿ, ಮಹನೀಯರ ಹೆಸರನ್ನು ವೃತ್ತಗಳಿಗೆ ಇಟ್ಟು, ಅವರ ಪ್ರತಿಮೆಗಳನ್ನು ಸ್ಥಾಪಿಸಲಾಗುವುದು ಎಂದರು.</p>.<p>ಅದಕ್ಕೂ ಮೊದಲು ಸುಸಜ್ಜಿತವಾದ ಹೂವು, ತರಕಾರಿ ಮಾರುಕಟ್ಟೆಯನ್ನು ಹಳೇ ಬಸ್ ನಿಲ್ದಾಣದ ಬಳಿ ನಿರ್ಮಿಸಿ, ಅಲ್ಲಿಗೆ ಬೀದಿ ಬದಿಯ ವ್ಯಾಪಾರಿಗಳನ್ನೂ ಸ್ಥಳಾಂತರ ಮಾಡಲಾಗುವುದು. ಶಿವಪುರದ ಬಳಿ ಪ್ರತ್ಯೇಕವಾಗಿ ಮಾಂಸದ ಮಾರುಕಟ್ಟೆ ನಿರ್ಮಿಸಲಾಗುವುದು ಎಂದರು.</p>.<p>ಕೊಪ್ಪ ವೃತ್ತ, ಕೊಲ್ಲಿ ಸರ್ಕಲ್, ಐ.ಬಿ. ಸರ್ಕಲ್ಗಳಲ್ಲಿ ಹೈಮಾಸ್ಟ್ ವಿದ್ಯುತ್ ದೀಪವು ಕೆಟ್ಟುಹೋಗಿ ವರ್ಷವೇ ಕಳೆದಿದ್ದರೂ ದುರಸ್ತಿಯಾಗಿಲ್ಲ. ಕೂಡಲೇ ಕ್ರಮವಹಿಸಬೇಕು ಎಂದು ಸದಸ್ಯೆ ಸರ್ವಮಂಗಳ ಆಗ್ರಹಿಸಿದರು.</p>.<p>ಶವ ಸಾಗಿಸುವ ನಗರಸಭೆಯ ವಾಹನವನ್ನು ಶವ ಸಂಸ್ಕಾರಕ್ಕೆ ಕಳಿಸುವ ವೇಳೆ ಡೀಸೆಲ್ಗೆ ₹ 500 ಪಡೆಯುತ್ತಿರುವುದು ಗಮನಕ್ಕೆ ಬಂದಿದೆ. ಡೀಸೆಲ್ ಶುಲ್ಕ ಪಡೆಯದೇ ಸಾರ್ವಜನಿಕರಿಗೆ ಉಚಿತವಾಗಿ ಅನುಕೂಲ ಕಲ್ಪಿಸಬೇಕು ಎಂದು ಸದಸ್ಯ ಸಚಿನ್ ಆಗ್ರಿಹಿಸಿದರು. ಇದಕ್ಕೆ ಎಲ್ಲ ಸದಸ್ಯರೂ ಧ್ವನಿಗೂಡಿಸಿದರು. </p>.<p>ಸಭೆಯಲ್ಲಿ ಪ್ರಭಾರ ಪೌರಾಯುಕ್ತರಾದ ತಹಶೀಲ್ದಾರ್ ಪರಶುರಾಮ ಸತ್ತಿಗೇರಿ, ಅಧ್ಯಕ್ಷೆ ಕೋಕಿಲಾ ಅರುಣ್, ಉಪಾಧ್ಯಕ್ಷೆ ಪ್ರಸನ್ನ, ಸ್ಥಾಯಿ ಸಮಿತಿ ಅಧ್ಯಕ್ಷೆ ವನಿತಾ ಸೇರಿ ಸದಸ್ಯರು ಹಾಗೂ ಆಧಿಕಾರಿಗಳು ಹಾಜರಿದ್ದರು.</p>.<p> ₹175 ಕೋಟಿ ವೆಚ್ಚದಲ್ಲಿ ಪ್ರಮುಖ ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗುವುದು ಐದು ವೃತ್ತಗಳನ್ನು ನಿರ್ಮಿಸಿ, ಅವುಗಳಿಗೆ ಮಹನೀಯರ ಹೆಸರಿಡಲಾಗುವುದು ಹಳೇ ಬಸ್ ನಿಲ್ದಾಣದ ಬಳಿ ಸುಸಜ್ಜಿತ ಮಾರುಕಟ್ಟೆ ನಿರ್ಮಾಣ ಯೋಜನೆ</p>.<p><strong>‘ಯುಜಿಡಿ ಕಾಮಗಾರಿ ಅಪೂರ್ಣ: ಬಿಲ್ ಪಾವತಿಸಿದ್ದೇಕೆ’ </strong></p><p>ಈ ಹಿಂದೆ ಡಿ.ಸಿ. ತಮ್ಮಣ್ಣ ಅವರು ಶಾಸಕರಾಗಿದ್ದಾಗ 2 ನೇ ಹಂತದ ಒಳಚರಂಡಿ ಹಾಗೂ ಕುಡಿಯುವ ನೀರಿನ ಸರಬರಾಜು ಮಾಡುವ ಕಾಮಗಾರಿ ಸುಮಾರು ₹100 ಕೋಟಿಗೂ ಹೆಚ್ಚು ವೆಚ್ಚದಲ್ಲಿ ನಡೆದಿತ್ತು. ಆದರೆ ಅರ್ಧದಷ್ಟು ಕೆಲಸವೂ ನಡೆದಿಲ್ಲ. ಈ ಬಗ್ಗೆ ಎಷ್ಟೋ ಸಾರಿ ಸಾಮಾನ್ಯ ಸಭೆಗಳಲ್ಲಿ ಸಂಬಂಧಪಟ್ಟ ಅಧಿಕಾರಿಯನ್ನು ಕರೆಸಿ ಮಾಹಿತಿ ಕೇಳಲಾಗಿತ್ತು. ಹೀಗಿದ್ದರೂ ಆ ಬಗ್ಗೆ ಸರಿಯಾದ ಕ್ರಮ ವಹಿಸದೇ ಕಾಮಗಾರಿಯ ಬಿಲ್ ಮೊತ್ತವನ್ನು ಸಂಬಂಧಪಟ್ಟ ಗುತ್ತಿಗೆದಾರನಿಗೆ ನೀಡಿರುವುದು ಎಷ್ಟು ಸರಿ ಎಂದು ಸದಸ್ಯರಾದ ಪ್ರವೀಣ್ ಸಚಿನ್ ಸೇರಿ ಹಲವು ಸದಸ್ಯರು ಅಧ್ಯಕ್ಷರನ್ನು ತರಾಟೆಗೆ ತೆಗೆದುಕೊಂಡರು. ಈ ವೇಳೆ ಶಾಸಕ ಕೆ. ಎಂ ಉದಯ್ ಮಧ್ಯೆ ಪ್ರವೇಶಿಸಿ ಕೂಡಲೇ ಸಂಬಂಧಪಟ್ಟ ಅಧಿಕಾರಿಗೆ ಸ್ಪಷ್ಟನೆ ಕೇಳಿ ನೋಟಿಸ್ ನೀಡಿ. ಆಗ ಆ ಅಧಿಕಾರಿಯು ಕಾಮಗಾರಿ ನಡೆಸಿದ ಗುತ್ತಿಗೆದಾರನಿಗೆ ನೋಟೀಸ್ ನೀಡುತ್ತಾರೆ ಎಂದು ಅಧಿಕಾರಿಗಳಿಗೆ ಹಾಗೂ ಅಧ್ಯಕ್ಷರಿಗೆ ಸೂಚನೆ ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>