<p><strong>ಮದ್ದೂರು:</strong> ನಗರದ 3ನೇ ಹಂತದ ಒಳಚರಂಡಿ ಅಭಿವೃದ್ಧಿ ಹಾಗೂ ಅದರ ಅದರ ವ್ಯಾಪ್ತಿಯಲ್ಲಿಯ ರಸ್ತೆಗಳ ಅಭಿವೃದ್ಧಿಪಡಿಸುತ್ತಿರುವ ₹16.49 ಕೋಟಿ ವೆಚ್ಚದ ಕಾಮಗಾರಿಗೆ ಚಾಲನೆ ನೀಡಲಾಗಿದೆ ಎಂದು ಶಾಸಕ ಕೆ.ಎಂ. ಉದಯ್ ತಿಳಿಸಿದರು.</p>.<p>ನಗರದ ವಿಶ್ವೇಶ್ವರಯ್ಯ ನಗರದ ಬಳಿ ಶನಿವಾರ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.</p>.<p>‘ನಾನು ಶಾಸಕನಾಗುವ ಮೊದಲು ನಗರದ ಒಳಚರಂಡಿ ವ್ಯವಸ್ಥೆ ಹಳ್ಳ ಹಿಡಿದಿತ್ತು. ಎರಡನೇ ಹಂತದ ಕಾಮಗಾರಿಯು ಅಪೂರ್ಣವಾಗಿ ಜನರಿಗೆ ತೊಂದರೆಯಾಗುತ್ತಿತ್ತು. ಅಷ್ಟೇ ಅಲ್ಲದೇ ಈ ಹಿಂದೆ ಇದ್ದ ಒಳಚರಂಡಿ ವ್ಯವಸ್ಥೆಯನ್ನು ಸರಿಯಾಗಿ ಮಾಡದೇ ಇದ್ದದ್ದರಿಂದ ಒಳಚರಂಡಿಯ ಮಲಿನ ನೀರನ್ನು ಕೆಮ್ಮಣ್ಣು ನಾಲೆಗೆ ಬಿಡಲಾಗುತ್ತಿತ್ತು’ ಎಂದು ದೂರಿದರು.</p>.<p>ಇದರಿಂದ ನಿವಾಸಿಗಳು ಕೆಟ್ಟ ವಾಸನೆ ಸಹಿಸಿಕೊಳ್ಳಬೇಕಾಗಿತ್ತು. ನಾಲೆಯ ನೀರು ತುಂಬಾ ಕಲುಷಿತವಾಗುತ್ತಿದ್ದು, ಆ ನೀರನ್ನು ಅಕ್ಕ ಪಕ್ಕದ ಗ್ರಾಮಗಳ ರೈತರು ತಮ್ಮ ಜಮೀನಿನ ಬೆಳೆಗಳಿಗೆ ಹಾಯಿಸಿಕೊಂಡು, ಅವರೂ ಚರ್ಮ ರೋಗದ ಭೀತಿ ಎದುರಿಸುತ್ತಿದ್ದರು. ವರ್ಷದ ಹಿಂದೆಯೇ ಕೆಮ್ಮಣ್ಣು ನಾಲೆಯ ಆಧುನೀಕರಣಕ್ಕೆ ₹100 ಕೋಟಿಗೂ ಹೆಚ್ಚು ಅನುದಾನ ತಂದು ಶಾಶ್ವತ ಯೋಜನೆ ರೂಪಿಸಿದ ಫಲವಾಗಿ ಇಂದು ಉತ್ತಮ ಕೆಲಸವಾಗುತ್ತಿದೆ ಎಂದರು.</p>.<p>ಮೂರನೇ ಹಂತದ ಒಳಚರಂಡಿ ಕಾಮಗಾರಿಗಾಗಿ ಸಂಬಂಧಪಟ್ಟ ಇಲಾಖೆಯ ಮೂಲಕ ₹16 ಕೋಟಿಗೂ ಹೆಚ್ಚಿನ ಅನುದಾನ ತಂದು ಭೂಮಿ ಪೂಜೆ ನೆರವೇರಿಸಿದ್ದೇನೆ. ಇದರಿಂದ ಇತರ ಕಾಮಗಾರಿಗಳು ಸೇರಿ ಶಿoಷಾ ನದಿಯ ಪಕ್ಕದಲ್ಲಿ 3ನೇ ಹಂತದ ತ್ಯಾಜ್ಯ ನೀರು ಸಂಸ್ಕರಣ ಘಟಕ ನಿರ್ಮಿಸಲಾಗುವುದು ಎಂದರು.</p>.<p>₹ 100 ಕೋಟಿ ವೆಚ್ಚದ ಕೆಮ್ಮಣ್ಣು ನಾಲಾ ಅಭಿವೃದ್ಧಿ ಕಾಮಗಾರಿಯು ಮುಂದಿನ 2 ತಿಂಗಳಿನಲ್ಲಿ ಪೂರ್ಣಗೊಳ್ಳಲಿದ್ದು, ನಂತರ ರೈತರ ಜಮೀನಿಗಳಿಗೆ ನೀರು ಹರಿಸಲಾಗುವುದು ಎಂದು ಅವರು ತಿಳಿಸಿದರು.</p>.<p>ಇದೇ ವೇಳೆ, ನಗರಸಭೆಗೆ ಗೆಜ್ಜಲಗೆರೆ ಗ್ರಾಮ ಸೇರ್ಪಡೆ ವಿರೋಧಿಸಿ ಗೆಜ್ಜಲಗೆರೆಯ ಗ್ರಾ.ಪಂ ಮುಂದೆ ಕೆಲವರು ನಡೆಸುತ್ತಿರುವ ಪ್ರತಿಭಟನೆ ಬಗ್ಗೆ ನಾನು ಹೆಚ್ಚು ಮಾತನಾಡುವುದಿಲ್ಲ. ಅಭಿವೃದ್ಧಿ ದೃಷ್ಟಿಯಿಂದ ನಗರಸಭೆಗೆ ಸೇರಿಸಲಾಗಿದೆ. ಈ ಬಗ್ಗೆ ಮೊದಲೇ ಸಭೆಗೆ ಆಹ್ವಾನಿಸಿದ್ದೆ. ಆದರೆ ಅಲ್ಲಿನ ಕೆಲವು ಮುಖಂಡರು ಬರಲಿಲ್ಲ ಎಂದು ಶಾಸಕ ಉದಯ್ ಹೇಳಿದರು.</p>.<p>ಪುರಸಭೆ ಮಾಜಿ ಅಧ್ಯಕ್ಷೆ ಕೋಕಿಲಾ ಅರುಣ್, ಸದಸ್ಯರಾದ ಸಿದ್ದರಾಜು, ಪ್ರಸನ್ನ, ಕಮಲ್ ನಾಥ್, ಬಸವರಾಜು, ಸಚ್ಚಿನ್, ಮುಖಂಡರಾದ ಮಹಾಲಿಂಗಯ್ಯ, ಮಹದೇವಪ್ಪ, ನೀರಾವರಿ ಇಲಾಖೆಯ ಅಧಿಕಾರಿಗಳಾದ ನಾಗರಾಜು ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮದ್ದೂರು:</strong> ನಗರದ 3ನೇ ಹಂತದ ಒಳಚರಂಡಿ ಅಭಿವೃದ್ಧಿ ಹಾಗೂ ಅದರ ಅದರ ವ್ಯಾಪ್ತಿಯಲ್ಲಿಯ ರಸ್ತೆಗಳ ಅಭಿವೃದ್ಧಿಪಡಿಸುತ್ತಿರುವ ₹16.49 ಕೋಟಿ ವೆಚ್ಚದ ಕಾಮಗಾರಿಗೆ ಚಾಲನೆ ನೀಡಲಾಗಿದೆ ಎಂದು ಶಾಸಕ ಕೆ.ಎಂ. ಉದಯ್ ತಿಳಿಸಿದರು.</p>.<p>ನಗರದ ವಿಶ್ವೇಶ್ವರಯ್ಯ ನಗರದ ಬಳಿ ಶನಿವಾರ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.</p>.<p>‘ನಾನು ಶಾಸಕನಾಗುವ ಮೊದಲು ನಗರದ ಒಳಚರಂಡಿ ವ್ಯವಸ್ಥೆ ಹಳ್ಳ ಹಿಡಿದಿತ್ತು. ಎರಡನೇ ಹಂತದ ಕಾಮಗಾರಿಯು ಅಪೂರ್ಣವಾಗಿ ಜನರಿಗೆ ತೊಂದರೆಯಾಗುತ್ತಿತ್ತು. ಅಷ್ಟೇ ಅಲ್ಲದೇ ಈ ಹಿಂದೆ ಇದ್ದ ಒಳಚರಂಡಿ ವ್ಯವಸ್ಥೆಯನ್ನು ಸರಿಯಾಗಿ ಮಾಡದೇ ಇದ್ದದ್ದರಿಂದ ಒಳಚರಂಡಿಯ ಮಲಿನ ನೀರನ್ನು ಕೆಮ್ಮಣ್ಣು ನಾಲೆಗೆ ಬಿಡಲಾಗುತ್ತಿತ್ತು’ ಎಂದು ದೂರಿದರು.</p>.<p>ಇದರಿಂದ ನಿವಾಸಿಗಳು ಕೆಟ್ಟ ವಾಸನೆ ಸಹಿಸಿಕೊಳ್ಳಬೇಕಾಗಿತ್ತು. ನಾಲೆಯ ನೀರು ತುಂಬಾ ಕಲುಷಿತವಾಗುತ್ತಿದ್ದು, ಆ ನೀರನ್ನು ಅಕ್ಕ ಪಕ್ಕದ ಗ್ರಾಮಗಳ ರೈತರು ತಮ್ಮ ಜಮೀನಿನ ಬೆಳೆಗಳಿಗೆ ಹಾಯಿಸಿಕೊಂಡು, ಅವರೂ ಚರ್ಮ ರೋಗದ ಭೀತಿ ಎದುರಿಸುತ್ತಿದ್ದರು. ವರ್ಷದ ಹಿಂದೆಯೇ ಕೆಮ್ಮಣ್ಣು ನಾಲೆಯ ಆಧುನೀಕರಣಕ್ಕೆ ₹100 ಕೋಟಿಗೂ ಹೆಚ್ಚು ಅನುದಾನ ತಂದು ಶಾಶ್ವತ ಯೋಜನೆ ರೂಪಿಸಿದ ಫಲವಾಗಿ ಇಂದು ಉತ್ತಮ ಕೆಲಸವಾಗುತ್ತಿದೆ ಎಂದರು.</p>.<p>ಮೂರನೇ ಹಂತದ ಒಳಚರಂಡಿ ಕಾಮಗಾರಿಗಾಗಿ ಸಂಬಂಧಪಟ್ಟ ಇಲಾಖೆಯ ಮೂಲಕ ₹16 ಕೋಟಿಗೂ ಹೆಚ್ಚಿನ ಅನುದಾನ ತಂದು ಭೂಮಿ ಪೂಜೆ ನೆರವೇರಿಸಿದ್ದೇನೆ. ಇದರಿಂದ ಇತರ ಕಾಮಗಾರಿಗಳು ಸೇರಿ ಶಿoಷಾ ನದಿಯ ಪಕ್ಕದಲ್ಲಿ 3ನೇ ಹಂತದ ತ್ಯಾಜ್ಯ ನೀರು ಸಂಸ್ಕರಣ ಘಟಕ ನಿರ್ಮಿಸಲಾಗುವುದು ಎಂದರು.</p>.<p>₹ 100 ಕೋಟಿ ವೆಚ್ಚದ ಕೆಮ್ಮಣ್ಣು ನಾಲಾ ಅಭಿವೃದ್ಧಿ ಕಾಮಗಾರಿಯು ಮುಂದಿನ 2 ತಿಂಗಳಿನಲ್ಲಿ ಪೂರ್ಣಗೊಳ್ಳಲಿದ್ದು, ನಂತರ ರೈತರ ಜಮೀನಿಗಳಿಗೆ ನೀರು ಹರಿಸಲಾಗುವುದು ಎಂದು ಅವರು ತಿಳಿಸಿದರು.</p>.<p>ಇದೇ ವೇಳೆ, ನಗರಸಭೆಗೆ ಗೆಜ್ಜಲಗೆರೆ ಗ್ರಾಮ ಸೇರ್ಪಡೆ ವಿರೋಧಿಸಿ ಗೆಜ್ಜಲಗೆರೆಯ ಗ್ರಾ.ಪಂ ಮುಂದೆ ಕೆಲವರು ನಡೆಸುತ್ತಿರುವ ಪ್ರತಿಭಟನೆ ಬಗ್ಗೆ ನಾನು ಹೆಚ್ಚು ಮಾತನಾಡುವುದಿಲ್ಲ. ಅಭಿವೃದ್ಧಿ ದೃಷ್ಟಿಯಿಂದ ನಗರಸಭೆಗೆ ಸೇರಿಸಲಾಗಿದೆ. ಈ ಬಗ್ಗೆ ಮೊದಲೇ ಸಭೆಗೆ ಆಹ್ವಾನಿಸಿದ್ದೆ. ಆದರೆ ಅಲ್ಲಿನ ಕೆಲವು ಮುಖಂಡರು ಬರಲಿಲ್ಲ ಎಂದು ಶಾಸಕ ಉದಯ್ ಹೇಳಿದರು.</p>.<p>ಪುರಸಭೆ ಮಾಜಿ ಅಧ್ಯಕ್ಷೆ ಕೋಕಿಲಾ ಅರುಣ್, ಸದಸ್ಯರಾದ ಸಿದ್ದರಾಜು, ಪ್ರಸನ್ನ, ಕಮಲ್ ನಾಥ್, ಬಸವರಾಜು, ಸಚ್ಚಿನ್, ಮುಖಂಡರಾದ ಮಹಾಲಿಂಗಯ್ಯ, ಮಹದೇವಪ್ಪ, ನೀರಾವರಿ ಇಲಾಖೆಯ ಅಧಿಕಾರಿಗಳಾದ ನಾಗರಾಜು ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>