‘ಅತೀ ಹೆಚ್ಚು ಭತ್ತ ಬೆಳೆದಾಗ ಸರ್ಕಾರ ಭತ್ತ ಖರೀದಿ ಕೇಂದ್ರ ಆರಂಭಿಸುತ್ತದೆ. ಅದೇ ಮಾದರಿಯಲ್ಲಿ ಕಬ್ಬಿಗೂ ನ್ಯಾಯಯುತ ಬೆಲೆ ನಿಗದಿ ಮಾಡಿ ಖರೀದಿ ಮಾಡಬೇಕು. ಮೈಷುಗರ್, ಪಾಂಡವಪುರ ಸಹಕಾರ ಸಕ್ಕರೆ ಕಾರ್ಖಾನೆ ಆರಂಭವಾಗದ ಕಾರಣ ಕಷ್ಟಪಟ್ಟು ಬೆಳೆದ ಕಬ್ಬು 15 ತಿಂಗಳು ಮೀರುತ್ತಿದೆ. ರೈತರು ನಷ್ಟಹೊಂದಿ ಆತ್ಮಹತ್ಯೆಗೆ ಶರಣಾಗುವ ಮೊದಲು ಸರ್ಕಾರವೇ ಕಬ್ಬು ಖರೀದಿ ಮಾಡಬೇಕು’ ಎಂದು ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದರು.