<p><strong>ಮದ್ದೂರು:</strong> ಪಟ್ಟಣದ ಗ್ರಾಮದೇವತೆ ಮದ್ದೂರಮ್ಮನ ಜಾತ್ರಾ ಮಹೋತ್ಸವದ ಅಂಗವಾಗಿ ನಡೆಯುವ ಭಾರಿ ದನಗಳ ಜಾತ್ರೆಯು ಕಳೆಗಟ್ಟುತ್ತಿದೆ. ಜಿಲ್ಲೆ, ಹೊರಜಿಲ್ಲೆಗಳಿಂದ ಪಟ್ಟಣದತ್ತ ಬರುತ್ತಿರುವ ರಾಸುಗಳು ಕಲರವ ಸೃಷ್ಟಿಸುತ್ತಿವೆ.</p>.<p>ಮದ್ದೂರು ಜಾನುವಾರುಗಳ ಜಾತ್ರೆ ಈ ಮೊದಲೇ ನಡೆಯಬೇಕಾಗಿತ್ತು. ಆದರೆ, ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಜಾತ್ರೆಗೆ ಅನುಮತಿ ಕೊಡಲು ಜಿಲ್ಲಾಡಳಿತ ನಿರಾಕರಿಸಿತ್ತು. ಹೀಗಾಗಿ ಚುನಾವಣೆ ಮುಗಿದ ಮರುದಿನವೇ ದನಗಳ ಜಾತ್ರೆ ಆರಂಭಗೊಂಡಿದ್ದು ರಾಸುಗಳು ಪಟ್ಟಣದತ್ತ ದಾಂಗುಡಿ ಇಡುತ್ತಿವೆ</p>.<p>ಪಟ್ಟಣದ ಪೇಟೆಬೀದಿ, ಸಂಜಯ ಚಿತ್ರಮಂದಿರದ ಬಳಿ, ತಾಲ್ಲೂಕು ಕಚೇರಿಯ ಹಿಂಭಾಗ, ತಾಲ್ಲೂಕು ಕ್ರೀಡಾಂಗಣದ ಬಳಿ ಸೇರಿದಂತೆ ಹಲವು ಕಡೆಗಳಲ್ಲಿ ಹಾಗೂ ರಸ್ತೆಗಳ ಇಕ್ಕೆಲಗಳಲ್ಲಿ ರೈತರು ತಮ್ಮ ರಾಸುಗಳನ್ನು ತಂದು ಕಟ್ಟುತ್ತಿದ್ದಾರೆ.</p>.<p>ತಾಲ್ಲೂಕು, ಜಿಲ್ಲೆಯ ವಿವಿಧ ಹಳ್ಳಿಗಳ ರೈತರು ತಮ್ಮ ರಾಸುಗಳೊಂದಿಗೆ ಜಾತ್ರೆಗೆ ಬರುತ್ತಿದ್ದಾರೆ. ಅಲ್ಲದೇ ರಾಮನಗರ, ತುಮಕೂರು, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ ಸೇರಿದಂತೆ ತಮಿಳುನಾಡಿನ ಹಲವು ಭಾಗಗಳಿಂದ ರೈತರು ತಮ್ಮ ರಾಸುಗಳೊಂದಿಗೆ ಬಂದು ವ್ಯಾಪಾರ, ವಹಿವಾಟು ನಡೆಸುತ್ತಿದ್ದಾರೆ.</p>.<p>ಹಳ್ಳಿಕಾರ್ ಸೇರಿದಂತೆ ಹಲವು ಬಗೆಯ ರಾಸುಗಳು ಜಾತ್ರೆಗೆ ಬರುತ್ತಿವೆ. ಮದ್ದೂರಮ್ಮನ ದನಗಳ ಜಾತ್ರೆಗೆ ಐತಿಹಾಸಿಕ ಮಹತ್ವವಿದ್ದು ದನಗಳ ಜಾತ್ರೆಯಲ್ಲಿ ಕೋಟ್ಯಂತರ ರೂಪಾಯಿ ವಹಿವಾಟು ನಡೆಯುತ್ತದೆ. ರೈತರು ತಾವು ಜತನದಿಂದ ಸಾಕಿ, ಸಲುಹಿರುವ ರಾಸುಗಳನ್ನು ಪೆಂಡಾಲ್ ಹಾಕಿ, ಅಲಂಕಾರ ಮಾಡಿ ಕಟ್ಟುತ್ತಿದ್ದಾರೆ.</p>.<p>ಇಲ್ಲಿಗೆ ಬರುವ ರೈತರು ತಮ್ಮ ರಾಸುಗಳನ್ನು ವಿವಿಧ ರೀತಿಯ ಬಣ್ಣ, ಬ್ಯಾಂಡ್ಗಳಿಂದ ಸಿಂಗರಿಸಿದ್ದಾರೆ. ನೆರಳಿಗಾಗಿ ಶಾಮಿಯಾನ ಹಾಕಿ, ದೀಪಾಲಂಕಾರ ಮಾಡಿದ್ದಾರೆ. ಜೊತೆಗೆ ಧ್ವನಿ ವರ್ಧಕವನ್ನೂ ಹಾಕಿ ವಿಶೇಷ ಆಕರ್ಷಣೆ ತಂದಿದ್ದಾರೆ.</p>.<p>ನೀರಿನ ಕೊರತೆ: ಈ ಬಾರಿ ಎಲ್ಲೆಡೆ ಬರ ಪರಿಸ್ಥಿತಿ ಇರುವುದರಿಂದ ಜಾತ್ರೆಗೆ ಬರುವ ಸಾವಿರಾರು ರಾಸುಗಳಿಗೆ ಕುಡಿಯುವ ನೀರಿನ ಕೊರತೆ ಉಂಟಾಗುವ ಸಾಧ್ಯತೆ ಇದೆ. ಬಿಸಿಲು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಸಮರ್ಪಕವಾದ ನೆರಳಿನ ವ್ಯವಸ್ಥೆಯನ್ನು ತಾಲ್ಲೂಕು ಮಾಡಬೇಕು ಎಂದು ರೈತರು ಒತ್ತಾಯಿಸುತ್ತಾರೆ.</p>.<p>‘ಮುಂಗಾರು ಆರಂಭದಲ್ಲಿ ನಡೆಯುವ ಈ ಜಾತ್ರೆ ಕೃಷಿಕರ ಪಾಲಿಗೆ ಮಹತ್ವದ್ದಾಗಿದೆ. ತಾಲ್ಲೂಕು ಆಡಳಿತವು ರಾಸುಗಳಿಗೆ ಸೂಕ್ತ ಸ್ಥಳಾವಕಾಶ, ನೀರಿನ, ನೆರಳಿನ ವ್ಯವಸ್ಥೆ ಹಾಗೂ ತಾತ್ಕಾಲಿಕ ಪಶು ಆಸ್ಪತ್ರೆ ವ್ಯವಸ್ಥೆ ಮಾಡಬೇಕು’ ಎಂದು ರೈತ ಮುಖಂಡ ನ.ಲಿ.ಕೃಷ್ಣ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮದ್ದೂರು:</strong> ಪಟ್ಟಣದ ಗ್ರಾಮದೇವತೆ ಮದ್ದೂರಮ್ಮನ ಜಾತ್ರಾ ಮಹೋತ್ಸವದ ಅಂಗವಾಗಿ ನಡೆಯುವ ಭಾರಿ ದನಗಳ ಜಾತ್ರೆಯು ಕಳೆಗಟ್ಟುತ್ತಿದೆ. ಜಿಲ್ಲೆ, ಹೊರಜಿಲ್ಲೆಗಳಿಂದ ಪಟ್ಟಣದತ್ತ ಬರುತ್ತಿರುವ ರಾಸುಗಳು ಕಲರವ ಸೃಷ್ಟಿಸುತ್ತಿವೆ.</p>.<p>ಮದ್ದೂರು ಜಾನುವಾರುಗಳ ಜಾತ್ರೆ ಈ ಮೊದಲೇ ನಡೆಯಬೇಕಾಗಿತ್ತು. ಆದರೆ, ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಜಾತ್ರೆಗೆ ಅನುಮತಿ ಕೊಡಲು ಜಿಲ್ಲಾಡಳಿತ ನಿರಾಕರಿಸಿತ್ತು. ಹೀಗಾಗಿ ಚುನಾವಣೆ ಮುಗಿದ ಮರುದಿನವೇ ದನಗಳ ಜಾತ್ರೆ ಆರಂಭಗೊಂಡಿದ್ದು ರಾಸುಗಳು ಪಟ್ಟಣದತ್ತ ದಾಂಗುಡಿ ಇಡುತ್ತಿವೆ</p>.<p>ಪಟ್ಟಣದ ಪೇಟೆಬೀದಿ, ಸಂಜಯ ಚಿತ್ರಮಂದಿರದ ಬಳಿ, ತಾಲ್ಲೂಕು ಕಚೇರಿಯ ಹಿಂಭಾಗ, ತಾಲ್ಲೂಕು ಕ್ರೀಡಾಂಗಣದ ಬಳಿ ಸೇರಿದಂತೆ ಹಲವು ಕಡೆಗಳಲ್ಲಿ ಹಾಗೂ ರಸ್ತೆಗಳ ಇಕ್ಕೆಲಗಳಲ್ಲಿ ರೈತರು ತಮ್ಮ ರಾಸುಗಳನ್ನು ತಂದು ಕಟ್ಟುತ್ತಿದ್ದಾರೆ.</p>.<p>ತಾಲ್ಲೂಕು, ಜಿಲ್ಲೆಯ ವಿವಿಧ ಹಳ್ಳಿಗಳ ರೈತರು ತಮ್ಮ ರಾಸುಗಳೊಂದಿಗೆ ಜಾತ್ರೆಗೆ ಬರುತ್ತಿದ್ದಾರೆ. ಅಲ್ಲದೇ ರಾಮನಗರ, ತುಮಕೂರು, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ ಸೇರಿದಂತೆ ತಮಿಳುನಾಡಿನ ಹಲವು ಭಾಗಗಳಿಂದ ರೈತರು ತಮ್ಮ ರಾಸುಗಳೊಂದಿಗೆ ಬಂದು ವ್ಯಾಪಾರ, ವಹಿವಾಟು ನಡೆಸುತ್ತಿದ್ದಾರೆ.</p>.<p>ಹಳ್ಳಿಕಾರ್ ಸೇರಿದಂತೆ ಹಲವು ಬಗೆಯ ರಾಸುಗಳು ಜಾತ್ರೆಗೆ ಬರುತ್ತಿವೆ. ಮದ್ದೂರಮ್ಮನ ದನಗಳ ಜಾತ್ರೆಗೆ ಐತಿಹಾಸಿಕ ಮಹತ್ವವಿದ್ದು ದನಗಳ ಜಾತ್ರೆಯಲ್ಲಿ ಕೋಟ್ಯಂತರ ರೂಪಾಯಿ ವಹಿವಾಟು ನಡೆಯುತ್ತದೆ. ರೈತರು ತಾವು ಜತನದಿಂದ ಸಾಕಿ, ಸಲುಹಿರುವ ರಾಸುಗಳನ್ನು ಪೆಂಡಾಲ್ ಹಾಕಿ, ಅಲಂಕಾರ ಮಾಡಿ ಕಟ್ಟುತ್ತಿದ್ದಾರೆ.</p>.<p>ಇಲ್ಲಿಗೆ ಬರುವ ರೈತರು ತಮ್ಮ ರಾಸುಗಳನ್ನು ವಿವಿಧ ರೀತಿಯ ಬಣ್ಣ, ಬ್ಯಾಂಡ್ಗಳಿಂದ ಸಿಂಗರಿಸಿದ್ದಾರೆ. ನೆರಳಿಗಾಗಿ ಶಾಮಿಯಾನ ಹಾಕಿ, ದೀಪಾಲಂಕಾರ ಮಾಡಿದ್ದಾರೆ. ಜೊತೆಗೆ ಧ್ವನಿ ವರ್ಧಕವನ್ನೂ ಹಾಕಿ ವಿಶೇಷ ಆಕರ್ಷಣೆ ತಂದಿದ್ದಾರೆ.</p>.<p>ನೀರಿನ ಕೊರತೆ: ಈ ಬಾರಿ ಎಲ್ಲೆಡೆ ಬರ ಪರಿಸ್ಥಿತಿ ಇರುವುದರಿಂದ ಜಾತ್ರೆಗೆ ಬರುವ ಸಾವಿರಾರು ರಾಸುಗಳಿಗೆ ಕುಡಿಯುವ ನೀರಿನ ಕೊರತೆ ಉಂಟಾಗುವ ಸಾಧ್ಯತೆ ಇದೆ. ಬಿಸಿಲು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಸಮರ್ಪಕವಾದ ನೆರಳಿನ ವ್ಯವಸ್ಥೆಯನ್ನು ತಾಲ್ಲೂಕು ಮಾಡಬೇಕು ಎಂದು ರೈತರು ಒತ್ತಾಯಿಸುತ್ತಾರೆ.</p>.<p>‘ಮುಂಗಾರು ಆರಂಭದಲ್ಲಿ ನಡೆಯುವ ಈ ಜಾತ್ರೆ ಕೃಷಿಕರ ಪಾಲಿಗೆ ಮಹತ್ವದ್ದಾಗಿದೆ. ತಾಲ್ಲೂಕು ಆಡಳಿತವು ರಾಸುಗಳಿಗೆ ಸೂಕ್ತ ಸ್ಥಳಾವಕಾಶ, ನೀರಿನ, ನೆರಳಿನ ವ್ಯವಸ್ಥೆ ಹಾಗೂ ತಾತ್ಕಾಲಿಕ ಪಶು ಆಸ್ಪತ್ರೆ ವ್ಯವಸ್ಥೆ ಮಾಡಬೇಕು’ ಎಂದು ರೈತ ಮುಖಂಡ ನ.ಲಿ.ಕೃಷ್ಣ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>