ಮಂಡ್ಯ:ರಾಜ್ಯ ಹಾಗೂ ರಾಷ್ಟ್ರ ರಾಜಕಾರಣದ ಗಮನ ಸೆಳೆದಿದ್ದ ಮಂಡ್ಯ ಲೋಕ ಸಭಾ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್ ಅವರು ಮಂಡ್ಯದ ಜನರ ಸ್ವಾಭಿಮಾನದ ಗೆಲುವಿಗೆ ಸಾಕ್ಷಿಯಾಗಿದರು. ಐತಿಹಾಸಿಕ ದಾಖಲೆಯನ್ನೂ ಬರೆದರು.
ಮುಖ್ಯಮಂತ್ರಿ ಪುತ್ರ, ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರ್ಗೆ 1,25,876 ಮತಗಳ ಅಂತರದಲ್ಲಿ ಹೀನಾಯ ಸೋಲುಣಿಸುವ ಮೂಲಕ ಮತದಾರರು ಸುಮಲತಾ ಅವರಿಗೆ ‘ಸ್ವಾಭಿಮಾನ’ಕ್ಕೆ ಗೆಲುವು ತಂದುಕೊಟ್ಟಿದ್ದಾರೆ.
ಮಡಿಲು ತುಂಬಿದ ಮತ...
ಪ್ರಚಾರ ವೇಳೆ ಸುಮಲತಾ ಸೆರಗೊಡ್ಡಿ ಮತ ಭಿಕ್ಷೆ ಕೇಳಿದ್ದರೆ. ಅವರ, ಕರೆಗೆ ಓಗೊಟ್ಟ ಮತದಾರರು, ಅಂಬರೀಷ್ ಅಭಿಮಾನಿಗಳು ಸುಮಲತಾ ಅವರ ಮಡಿಲಿಗೆ ಮತಗಳನ್ನು ಹಾಕಿ ಕೊಡುಗೆ ಕೊಟ್ಟಿದ್ದಾರೆ.