ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊಳಗಿತು ಮಂಡ್ಯ ಜನರ ‘ಸ್ವಾಭಿಮಾನ’ದ ಕಹಳೆ, ಅಂಬರೀಷ್‌ ಅಭಿಮಾನ

Last Updated 23 ಮೇ 2019, 16:46 IST
ಅಕ್ಷರ ಗಾತ್ರ

ಮಂಡ್ಯ:ರಾಜ್ಯ ಹಾಗೂ ರಾಷ್ಟ್ರ ರಾಜಕಾರಣದ ಗಮನ ಸೆಳೆದಿದ್ದ ಮಂಡ್ಯ ಲೋಕ ಸಭಾ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್‌ ಅವರು ಮಂಡ್ಯದ ಜನರ ಸ್ವಾಭಿಮಾನದ ಗೆಲುವಿಗೆ ಸಾಕ್ಷಿಯಾಗಿದರು. ಐತಿಹಾಸಿಕ ದಾಖಲೆಯನ್ನೂ ಬರೆದರು.

ಮುಖ್ಯಮಂತ್ರಿ ಪುತ್ರ, ಮೈತ್ರಿ ಅಭ್ಯರ್ಥಿ ನಿಖಿಲ್‌ ಕುಮಾರ್‌ಗೆ 1,25,876 ಮತಗಳ ಅಂತರದಲ್ಲಿ ಹೀನಾಯ ಸೋಲುಣಿಸುವ ಮೂಲಕ ಮತದಾರರು ಸುಮಲತಾ ಅವರಿಗೆ ‘ಸ್ವಾಭಿಮಾನ’ಕ್ಕೆ ಗೆಲುವು ತಂದುಕೊಟ್ಟಿದ್ದಾರೆ.

ಮಡಿಲು ತುಂಬಿದ ಮತ...

ಪ್ರಚಾರ ವೇಳೆ ಸುಮಲತಾ ಸೆರಗೊಡ್ಡಿ ಮತ ಭಿಕ್ಷೆ ಕೇಳಿದ್ದರೆ. ಅವರ, ಕರೆಗೆ ಓಗೊಟ್ಟ ಮತದಾರರು, ಅಂಬರೀಷ್ ಅಭಿಮಾನಿಗಳು ಸುಮಲತಾ ಅವರ ಮಡಿಲಿಗೆ ಮತಗಳನ್ನು ಹಾಕಿ ಕೊಡುಗೆ ಕೊಟ್ಟಿದ್ದಾರೆ.

ಸುಮಲತಾ ಪಡೆದ ಮತ: 7,03,660

ಗೆಲುವಿನ ಅಂತರ: 1,25,876

ಸೋತ ಮೈತ್ರಿ ಅಭ್ಯರ್ಥಿ: ಕೆ.ನಿಖಿಲ್ ಪಡೆದ ಮತ: 5,77,784

2014ರಲ್ಲಿ ಗೆದ್ದವರು– ಸಿ.ಎಸ್.ಪುಟ್ಟರಾಜು

2018ರ ಉಪಚುನಾವಣೆ: ಎಲ್.ಆರ್.ಶಿವರಾಮೇಗೌಡಗೆ ಗೆಲುವಾಗಿತ್ತು.

ಸ್ವಾಭಿಮಾನಿ ಸಮೇವೇಶದಲ್ಲಿ ರಾಕ್‌ಲೈನ್‌ ವೆಂಕಟೇಶ್‌, ಅಂಬರೀಷ್‌ ಪುತ್ರ ಅಭಿಷೇಕ್‌, ನಟ ಯಶ್‌, ಸುಮಲತಾ, ನಟ ದರ್ಶನ್‌, ಹಿರಿಯ ನಟ ದೊಡ್ಡಣ್ಣ ಒಗ್ಗಟ್ಟಿನ ಬಲ ಪ್ರದರ್ಶಿಸಿದ್ದರು.
ಸ್ವಾಭಿಮಾನಿ ಸಮೇವೇಶದಲ್ಲಿ ರಾಕ್‌ಲೈನ್‌ ವೆಂಕಟೇಶ್‌, ಅಂಬರೀಷ್‌ ಪುತ್ರ ಅಭಿಷೇಕ್‌, ನಟ ಯಶ್‌, ಸುಮಲತಾ, ನಟ ದರ್ಶನ್‌, ಹಿರಿಯ ನಟ ದೊಡ್ಡಣ್ಣ ಒಗ್ಗಟ್ಟಿನ ಬಲ ಪ್ರದರ್ಶಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT