ಮಕರಸಂಕ್ರಾಂತಿ ಮರು ದಿನ ಮೇಲುಕೋಟೆಯಲ್ಲಿ ಜರುಗುವ ಅಂಗಮಣಿ ಉತ್ಸವಕ್ಕೆ ಸಕಲ ಸಿದ್ಧತೆ ಕೈಗೊಳ್ಳಲಾಗಿದೆ. ಭಕ್ತರಿಗೆ ಯಾವುದೇ ತೊಂದರೆ ಆಗದಂತೆ ವ್ಯವಸ್ಥೆ ಕಲ್ಪಿಸಲಾಗುವುದು.
ದರ್ಶನ್ ಪುಟ್ಟಣ್ಣಯ್ಯ ಶಾಸಕ
ಅಂಗಮಣಿ ಉತ್ಸವಕ್ಕೆ ದೇಶ ವಿದೇಶದಿಂದ ಭಕ್ತರು ಬಂದು ಮಡಿಲು ತುಂಬುವ ಶಾಸ್ತ್ರದಲ್ಲಿ ಭಾಗಿಯಾಗುತ್ತಾರೆ. ಸ್ವಾಮಿ ಪ್ರೇಮ ಪ್ರಸಂಗದ ಉತ್ಸವ ದರ್ಶನ ಪಡೆದರೆ ಭಕ್ತರ ಇಷ್ಟಾರ್ಥ ಈಡೇರಲಿದೆ ಎಂಬುದು ನಂಬಿಕೆ.