ಸುದ್ದಿಗಾರರ ಜೊತೆ ಮಾತನಾಡಿದ ಅವರು ‘ಕುಪ್ಪೇಂದ್ರ ರೆಡ್ಡಿ, ಅವರ ಮಗ ಹಾಗೂ ಕೆಲ ಮಾಜಿ ಶಾಸಕರು ಆಮಿಷವೊಡ್ಡುತ್ತಿದ್ದಾರೆ. ₹ 10 ಕೋಟಿ, ₹ 5 ಕೋಟಿ ಹಣದ ಆಸೆ ತೋರಿಸುತ್ತಿದ್ದಾರೆ. ವೋಟು ಹಾಕದಿದ್ದರೆ ಪರಿಣಾಮ ನೆಟ್ಟಗೆ ಇರುವುದಿಲ್ಲ ಎಂದು ಬೆದರಿಕೆ ಹಾಕುತ್ತಿದ್ದಾರೆ. ಈ ವಿಷಯವನ್ನು ನಾನು ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಗಮನಕ್ಕೆ ತಂದಿದ್ದೇನೆ’ ಎಂದರು.