<p><strong>ಮೇಲುಕೋಟೆ</strong>: ಸರ್ಕಾರವು ಹಿಂದೂ ದೇವಾಲಯಗಳ ಹಣವನ್ನು ಮಸೀದಿಗಳು ಮತ್ತು ಚರ್ಚ್ಗಳ ಅಭಿವೃದ್ಧಿಗೆ ನೀಡುವುದನ್ನು ನಿಲ್ಲಿಸಿ, ಆ ಹಣವನ್ನು ದೇವಾಲಯ ಅಭಿವೃದ್ಧಿಗೆ ಮಾತ್ರ ಬಳಸಬೇಕು ಎಂದು ಶಾಸಕ ಬಸನಗೌಡ ಪಾಟೀಲ ಹೇಳಿದರು.</p>.<p>ಶುಕ್ರವಾರ ಇಲ್ಲಿನ ಶ್ರೀಚಲುವನಾರಾಯಣ ಸ್ವಾಮಿ ಹಾಗೂ ಯಧುಗಿರಿ ನಾಯಕಿ ಅಮ್ಮನವರ ದೇವಾಲಯಕ್ಕೆ ಭೇಟಿ ನೀಡಿ ಮಾತನಾಡಿದರು. ದೇವಾಲಯಗಳ ಅಭಿವೃದ್ಧಿಗೆ ಮತ್ತಷ್ಟು ಅನುದಾನ ನೀಡಿ ಸನಾತನ ದೇವಾಲಯಗಳ ಜೀರ್ಣೋದ್ಧಾರಕ್ಕೆ ಮುಂದಾಗ ಬೇಕು ಎಂದರು.</p>.<p>ಜಿಲ್ಲೆಯ ಮದ್ದೂರಿನಲ್ಲಿ ನಡೆದ ಘಟನೆ ಇಡೀ ರಾಜ್ಯದ ಹಿಂದೂಗಳನ್ನು ಒಗ್ಗೂಡಿಸಿದೆ. ಯಾವ ರಾಜಕಾರಣಿಗಳು ಭಾಷೆಗಾಗಿ, ದೇಶಕ್ಕಾಗಿ, ಜನರ ಕಷ್ಟಕ್ಕೆ ಸ್ಪಂದಿಸುತ್ತಾರೋ ಆ ನಾಯಕನಿಗೆ ಈ ಜಿಲ್ಲೆಯ ಜನ ಇಷ್ಟೊಂದು ಪ್ರೀತಿ ವಿಶ್ವಾಸಕ್ಕೆ ನೀಡುತ್ತಾರೆ ಎಂದು ನಾನು ಎಂದು ಭಾವಿಸಿರಲಿಲ್ಲ, ನಾನು ನಿಜಕ್ಕೂ ಭಾವುಕನಾಗಿದ್ದೇನೆ ಎಂದರು. </p>.<p>ರಾಜ್ಯದಲ್ಲಿ ಕುಟುಂಬ ರಾಜಕಾರಣ ತಿರಸ್ಕರಿಸಿ ಪಕ್ಷ ಹಾಗೂ ಹಿಂದುತ್ವ ಉಳಿವಿಗೆ ದುಡಿಯುತ್ತಿದ್ದೇನೆ. ಕೇಂದ್ರ ಬಿಜೆಪಿ ತೆಗೆದುಕೊಂಡಿರುವ ನಿರ್ಧಾರವನ್ನು ಬದಲಾಯಿಸಿಕೊಂಡು 2028ರ ಚುನಾವಣೆ ವೇಳೆ ರಾಜ್ಯದ ಜವಾಬ್ದಾರಿ ನೀಡುತ್ತಾರೆ ಎಂಬ ನಂಬಿಕೆ ಇದೆ ಎಂದರು.</p>.<p>ಮೇಲಕೋಟೆಗೆ ಆಗಮಿಸಿದ ಯತ್ನಾಳ ಅವರಿಗೆ ಜಕ್ಕನಹಳ್ಳಿ ಸರ್ಕಲ್ ಹಾಗೂ ಬೆಳ್ಳಾಳೆ, ಮದೇಶ್ವರಪುರ, ಕದಲಗೆರೆ ಗ್ರಾಮಗಳ ಹೆದ್ದಾರಿಯಲ್ಲಿ ಅದ್ದೂರಿ ಸ್ವಾಗತ ಕೋರಿದ ಅಭಿಮಾನಿಗಳು, ನೂರಾರು ಬೈಕ್ಗಳ ಮೂಲಕ ಮೇಲುಕೋಟೆ ವರೆಗೆ ಜಾಥಾ ಮಾಡಿದರು.</p>.<p>ಈ ವೇಳೆ ಬಿಜೆಪಿ ಮುಖಂಡ ಎಸ್.ಎನ್.ಟಿ ಸೋಮಶೇಖರ್, ಪಾರ್ಥ, ರವಿ, ವೆಂಕಟೇಶ್ , ಶಂಕರ್ ಪಾಲ್ಗೊಂಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೇಲುಕೋಟೆ</strong>: ಸರ್ಕಾರವು ಹಿಂದೂ ದೇವಾಲಯಗಳ ಹಣವನ್ನು ಮಸೀದಿಗಳು ಮತ್ತು ಚರ್ಚ್ಗಳ ಅಭಿವೃದ್ಧಿಗೆ ನೀಡುವುದನ್ನು ನಿಲ್ಲಿಸಿ, ಆ ಹಣವನ್ನು ದೇವಾಲಯ ಅಭಿವೃದ್ಧಿಗೆ ಮಾತ್ರ ಬಳಸಬೇಕು ಎಂದು ಶಾಸಕ ಬಸನಗೌಡ ಪಾಟೀಲ ಹೇಳಿದರು.</p>.<p>ಶುಕ್ರವಾರ ಇಲ್ಲಿನ ಶ್ರೀಚಲುವನಾರಾಯಣ ಸ್ವಾಮಿ ಹಾಗೂ ಯಧುಗಿರಿ ನಾಯಕಿ ಅಮ್ಮನವರ ದೇವಾಲಯಕ್ಕೆ ಭೇಟಿ ನೀಡಿ ಮಾತನಾಡಿದರು. ದೇವಾಲಯಗಳ ಅಭಿವೃದ್ಧಿಗೆ ಮತ್ತಷ್ಟು ಅನುದಾನ ನೀಡಿ ಸನಾತನ ದೇವಾಲಯಗಳ ಜೀರ್ಣೋದ್ಧಾರಕ್ಕೆ ಮುಂದಾಗ ಬೇಕು ಎಂದರು.</p>.<p>ಜಿಲ್ಲೆಯ ಮದ್ದೂರಿನಲ್ಲಿ ನಡೆದ ಘಟನೆ ಇಡೀ ರಾಜ್ಯದ ಹಿಂದೂಗಳನ್ನು ಒಗ್ಗೂಡಿಸಿದೆ. ಯಾವ ರಾಜಕಾರಣಿಗಳು ಭಾಷೆಗಾಗಿ, ದೇಶಕ್ಕಾಗಿ, ಜನರ ಕಷ್ಟಕ್ಕೆ ಸ್ಪಂದಿಸುತ್ತಾರೋ ಆ ನಾಯಕನಿಗೆ ಈ ಜಿಲ್ಲೆಯ ಜನ ಇಷ್ಟೊಂದು ಪ್ರೀತಿ ವಿಶ್ವಾಸಕ್ಕೆ ನೀಡುತ್ತಾರೆ ಎಂದು ನಾನು ಎಂದು ಭಾವಿಸಿರಲಿಲ್ಲ, ನಾನು ನಿಜಕ್ಕೂ ಭಾವುಕನಾಗಿದ್ದೇನೆ ಎಂದರು. </p>.<p>ರಾಜ್ಯದಲ್ಲಿ ಕುಟುಂಬ ರಾಜಕಾರಣ ತಿರಸ್ಕರಿಸಿ ಪಕ್ಷ ಹಾಗೂ ಹಿಂದುತ್ವ ಉಳಿವಿಗೆ ದುಡಿಯುತ್ತಿದ್ದೇನೆ. ಕೇಂದ್ರ ಬಿಜೆಪಿ ತೆಗೆದುಕೊಂಡಿರುವ ನಿರ್ಧಾರವನ್ನು ಬದಲಾಯಿಸಿಕೊಂಡು 2028ರ ಚುನಾವಣೆ ವೇಳೆ ರಾಜ್ಯದ ಜವಾಬ್ದಾರಿ ನೀಡುತ್ತಾರೆ ಎಂಬ ನಂಬಿಕೆ ಇದೆ ಎಂದರು.</p>.<p>ಮೇಲಕೋಟೆಗೆ ಆಗಮಿಸಿದ ಯತ್ನಾಳ ಅವರಿಗೆ ಜಕ್ಕನಹಳ್ಳಿ ಸರ್ಕಲ್ ಹಾಗೂ ಬೆಳ್ಳಾಳೆ, ಮದೇಶ್ವರಪುರ, ಕದಲಗೆರೆ ಗ್ರಾಮಗಳ ಹೆದ್ದಾರಿಯಲ್ಲಿ ಅದ್ದೂರಿ ಸ್ವಾಗತ ಕೋರಿದ ಅಭಿಮಾನಿಗಳು, ನೂರಾರು ಬೈಕ್ಗಳ ಮೂಲಕ ಮೇಲುಕೋಟೆ ವರೆಗೆ ಜಾಥಾ ಮಾಡಿದರು.</p>.<p>ಈ ವೇಳೆ ಬಿಜೆಪಿ ಮುಖಂಡ ಎಸ್.ಎನ್.ಟಿ ಸೋಮಶೇಖರ್, ಪಾರ್ಥ, ರವಿ, ವೆಂಕಟೇಶ್ , ಶಂಕರ್ ಪಾಲ್ಗೊಂಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>