ಶ್ರೀರಂಗಪಟ್ಟಣ: ತಾಲ್ಲೂಕಿನ ಪಾಲಹಳ್ಳಿ ಗ್ರಾಮದ ವಕೀಲ ನಾಗೇಂದ್ರ ಅವರ ಮಗ ಪ್ರಜ್ವಲ್ ಅಲಿಯಾಸ್ ಪಾಪು (29) ಅವರನ್ನು ಭಾನುವಾರ ಬರ್ಬರವಾಗಿ ಹತ್ಯೆ ಮಾಡಲಾಗಿದೆ.
ಕೇರಳ ನೋಂದಣಿ ಸಂಖ್ಯೆ ಇದ್ದ ಇನ್ನೋವಾ ಕಾರಿನಲ್ಲಿ ಬಂದ ದುಷ್ಕರ್ಮಿಗಳು ಹಾಡಹಗಲೇ ಕೊಚ್ಚಿ ಕೊಲೆ ಮಾಡಿದ್ದಾರೆ. ಗ್ರಾಮದ ಮುಖ್ಯ ಬೀದಿಯ ಹಾಲಿನ ಡೈರಿ ಸಮೀಪದ ನಿಂತಿದ್ದ ಪ್ರಜ್ವಲ್ ಅವರ ತಲೆಗೆ ಮಚ್ಚು ಮತ್ತು ಲಾಂಗ್ಗಳಿಂದ ಮನಸೋ ಇಚ್ಛೆ ಹೊಡೆದಿದ್ದು, ಮಿದುಳು ಹೊರ ಬಂದಿದೆ.
ಈಚೆಗೆ ಕೊಲೆಯಾಗಿದ್ದ ಅದೇ ಗ್ರಾಮದ ವಿನೋದ್ ಅಲಿಯಾಸ್ ಕುಂಟ ವಿನೋದನ ಹತ್ಯೆ ಪ್ರಕರಣದ ಹಿನ್ನೆಲೆಯಲ್ಲಿ ಈ ಕೊಲೆ ನಡೆದಿರಬಹುದು ಎಂದು ಶಂಕಿಸಲಾಗಿದೆ.
ಸ್ಥಳಕ್ಕೆ ದಕ್ಷಿಣ ವಲಯ ಐಜಿ ಅಮಿತ್ಸಿಂಗ್, ಎಸ್ಪಿ ಎನ್. ಯತೀಶ್, ಡಿವೈಎಸ್ಪಿ ಮುರಳಿ, ಸಿಪಿಐ ಬಿ.ಎಸ್. ಪ್ರಕಾಶ್ ಭೇಟಿ ನೀಡಿದ್ದರು. ಶ್ರೀರಂಗಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶ್ರೀರಂಗಪಟ್ಟಣ ತಾಲ್ಲೂಕಿನ ಪಾಲಹಳ್ಳಿಯಲ್ಲಿ ಭಾನುವಾರ ಪ್ರಜ್ವಲ್ ಹತ್ಯೆಯಾದ ಸ್ಥಳಕ್ಕೆ ದಕ್ಷಿಣ ವಲಯ ಐಜಿ ಅಮಿತ್ಸಿಂಗ್ ಎಸ್ಪಿ ಎನ್. ಯತೀಶ್ ಭೇಟಿ ನೀಡಿದ್ದರು