‘ನನ್ನ ರಾಜೀನಾಮೆಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಸಚಿವ ಎಚ್.ಡಿ.ರೇವಣ್ಣ ಕಾರಣರಲ್ಲ. ಆಡಳಿತದಲ್ಲಿ ದೊಡ್ಡಗೌಡರ ಪುತ್ರಿಯೊಬ್ಬರ ಹಸ್ತಕ್ಷೇಪ ವಿಪರೀತವಾಗಿತ್ತು. ನನಗೆ ಕಿರುಕುಳ ನೀಡಿದ ಜಿಲ್ಲಾ ಪಂಚಾಯಿತಿ ಸದಸ್ಯರನ್ನು ತಮ್ಮ ಮನೆಗೆ ಕರೆಸಿಕೊಂಡು ಡೈನಿಂಗ್ ಟೇಬಲ್ನಲ್ಲಿ ಕೂರಿಸಿಕೊಳ್ಳುತ್ತಿದ್ದರು. ನನ್ನನ್ನು ಚಪ್ಪಲಿ ಬಿಡುವ ಜಾಗದಲ್ಲಿ ಕೂರಲು ಹೇಳುತ್ತಿದ್ದರು. ಯಾವುದೇ ಅನುದಾನ ಬಂದರೆ ನನ್ನ ಗಮನಕ್ಕೆ ತಾರದೇ ನಿರ್ಧಾರ ಕೈಗೊಳ್ಳುತ್ತಿದ್ದರು. ಕ್ಷೇತ್ರದ ಜನರಿಗೆ ಉತ್ತರ ಕೊಡಲಾಗದ ಸ್ಥಿತಿ ನನ್ನದಾಗಿತ್ತು. ಇದೇ ಕಾರಣಕ್ಕೆ ರಾಜೀನಾಮೆ ನೀಡಿದ್ದೇನೆ’ ಎಂದು ಹೇಳಿಕೊಂಡಿದ್ದಾರೆ.