ತಾಲ್ಲೂಕಿನ ಬೆಳ್ಳೂರು ಟೌನ್ ವ್ಯಾಪ್ತಿಯ ಭೈರವೇಶ್ವರ ಬಡಾವಣೆಯ ತೋಟದ ಮಾಲೀಕ ಎಂಎಲ್ಎ ಮೂಡ್ಲಿ ಎಂಬುವರ ತೋಟದಲ್ಲಿ ಬುಧವಾರ ಬೆಳಿಗ್ಗೆ 9.30ರ ಸುಮಾರಿನಲ್ಲಿ ಕೆಲಸ ಮಾಡುವಾಗ ಆಕಸ್ಮಿಕವಾಗಿ ವಿದ್ಯುತ್ ತಗುಲಿ ತುರುವೇಕೆರೆ ತಾಲ್ಲೂಕಿನ ಸೂಳೆಕೆರೆ ಗ್ರಾಮದ ನಿವಾಸಿಯಾಗಿದ್ದ ಶಂಕರಪ್ಪ ಎಂಬುವರ ಮಗ ಅಭಿಷೇಕ್ (28) ವಿದ್ಯುತ್ ತಗುಲಿ ಸಾವನ್ನಪ್ಪಿದ ಲೈನ್ ಮ್ಯಾನ್. ಮೃತ ಅಭಿಷೇಕ್ ತಾಲ್ಲೂಕಿನ ಬೆಳ್ಳೂರು ಟೌನ್ ನ ಉಮರ್ ನಗರದ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದಲ್ಲಿ ಕೆಲಸ ಮಾಡುತ್ತಿದ್ದು, ಮಂಗಳವಾರ ರಾತ್ರಿ ಸುರಿದ ಮಳೆಗೆ ವಿದ್ಯುತ್ ಸ್ಥಗಿತವಾಗಿದ್ದ ಹಿನ್ನೆಲೆಯಲ್ಲಿ ಸರಿಪಡಿಸಲು ಹೋಗಿದ್ದಾಗ ಘಟನೆ ಸಂಭವಿಸಿದೆ.