ಸ್ವಂತ ಸೂರು, ಆಧಾರ್ ಚೀಟಿ, ಪಡಿತರ ಚೀಟಿ, ಏನೂ ಇಲ್ಲದ ರಂಗಯ್ಯ ಊಟ ಸಿಕ್ಕಲ್ಲಿ ಉಂಡು, ತಾವು ಸಿಕ್ಕಲ್ಲಿ ಮಲಗುತ್ತಿದ್ದರು. ಹಲವು ವರ್ಷಗಳಿಂದ ಯಾವುದೇ ಪಗಾರ ಸಿಗದಿದ್ದರೂ ಬೀದಿ ಗುಡಿಸುವ, ನಾಯಿ ಸತ್ತರೆ ಎಳೆದು ಹಾಕುವ, ಚರಂಡಿ ಕಟ್ಟಿಕೊಂಡರೆ ಕೆಸರು ಬಳಿಯುವ, ಮದುವೆ, ಬೀಗರ ಊಟದಲ್ಲಿ ಎಂಜಲೆಲೆ ಎತ್ತುವ ಕೆಲಸವನ್ನು ನಿಷ್ಠೆ ಯಿಂದ ಮಾಡುತ್ತಿದ್ದರು. ದುರಭ್ಯಾಸಗಳಿಲ್ಲದ, ಮಗು ಮನಸ್ಸಿನ ರಂಗಯ್ಯ ಇನ್ನೆಲ್ಲಿ? ಎಂದು ಗ್ರಾಮಸ್ಥರು ಮರುಗಿದರು.