‘ಗಂಡು ಕರುಗಳಿಂದ ಉಪಯೋಗವಿಲ್ಲ, ಅವುಗಳ ಸಾಕಣೆಗೂ ಹೆಚ್ಚು ವೆಚ್ಚವಾಗುತ್ತದೆ’ ಎಂದು ರೈತರು ಗಂಡು ಕರು ಹುಟ್ಟಿದ ಮೂರು ದಿನಗಳಲ್ಲೇ ಈ ದೇವಾಲಯದ ಬಳಿ ಬಿಟ್ಟು ಹೋಗುತ್ತಿದ್ದಾರೆ. ಸರಿಯಾಗಿ ನಡೆದಾಡಲು ಆಗದ ಸ್ಥಿತಿಯಲ್ಲಿರುವ ಕರುಗಳನ್ನು ನಾಯಿಗಳು ಎಳೆದಾಡಿ ತಿಂದು ಹಾಕುತ್ತಿವೆ. ಹಾಲು, ನೀರು, ಮೇವು ಸಿಗದೆ ಕೆಲವು ಕರುಗಳು ಸಾಯುತ್ತಿವೆ.