ಜಂಗಮ ಹಾಗೂ ಸೋಮೇಶ್ವರನಿಗೆ ಭಕ್ತಿಯ ವಿಷಯದಲ್ಲಿ ಪಂಥವೇರ್ಪಟ್ಟು ಶಿವನಿಗೆ ಸೋಲಾಗಿ ಜಂಗಮನಿಗೆ ಜಯವಾದ ಸಲುವಾಗಿ ಈ ಹಬ್ಬವನ್ನು ವರ್ಷಕ್ಕೊಮ್ಮೆ ಆಚರಿಸುವುದು ರೂಢಿ. ಶಿವಭಕ್ತರಾದ ಜಂಗಮರಾಗಿ ಸಾಸಲುಕೊಪ್ಪಲುವಿನ ಹಾಲುಮತಸ್ಥ ಯುವಕರು, ಶಿವನ ಪರವಾಗಿ ಸಾಸಲು ಗ್ರಾಮದ ವೀರಶೈವ ಪಂಗಡದ ಯುವಕರು ಸಗಣಿ ಕಾಳಗದಲ್ಲಿ ಭಾಗವಹಿಸಿದ್ದರು.