ಪಟ್ಟಣದ ತಾಲ್ಲೂಕು ಕ್ರಿಡಾಂಗಣದ ಆಧುನೀಕರಣಕ್ಕೆ ಈಗಾಗಲೇ ₹2.5 ಕೋಟಿ ಬಿಡುಗಡೆಯಾಗಿದ್ದು, ಒಟ್ಟು ₹ 6.5 ಕೋಟಿ ವೆಚ್ಚದಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು. ಜಿಲ್ಲೆಯಲ್ಲಿ ಕೈಗಾರಿಕೆಯನ್ನು ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಚರ್ಚಿಸಲು ಕೈಗಾರಿಕಾ ಸಚಿವರಾದ ಜಗದೀಶ್ ಶೆಟ್ಟರ್ ಬಂದಿದ್ದರಿಂದ ಉದ್ಘಾಟನೆಗೆ ಬರಲಾಗಲಿಲ್ಲ ಎಂದು ಹೇಳಿದರು.