<p><strong>ಶ್ರೀರಂಗಪಟ್ಟಣ</strong>: ತಾಲ್ಲೂಕಿನ ಕೂಡಲಕುಪ್ಪೆ ಗ್ರಾಮದ ಎರಡು ಮನೆಗಳಿಗೆ ಗುರುವಾರ ಮುಂಜಾನೆ ನುಗ್ಗಿದ ದುಷ್ಕರ್ಮಿಗಳು ಚಿನ್ನಾಭರಣ ಮತ್ತು ನಗದು ದೋಚಿದ್ದಾರೆ.</p>.<p>ಗ್ರಾಮದ ಸುವರ್ಣ ಮತ್ತು ನಿಸರ್ಗ ಎಂಬವರ ಮನೆಗಳ ಬಾಗಿಲು ಮುರಿದು ಒಳ ನುಗ್ಗಿರುವ ದುಷ್ಕರ್ಮಿಗಳು 60 ಗ್ರಾಂ ಚಿನ್ನಾಭರಣ ಮತ್ತು ₹1.05ಲಕ್ಷ ಹಣ ಕದ್ದೊಯ್ದಿದ್ದಾರೆ. ಮೊದಲು ನಿಸರ್ಗ ಅವರ ಮನೆಗೆ ನುಗ್ಗಿದ್ದು, ನಿಸರ್ಗ ಮತ್ತು ಅವರ ತಾಯಿ ಮೀನಾಕ್ಷಿ ಅವರನ್ನು ಬೆದರಿಸಿ ಅವರ ಬಳಿ ಇದ್ದ 40 ಗ್ರಾಂ ಚಿನ್ನಾಭರಣ ಮತ್ತು ₹1 ಲಕ್ಷ ನಗದು ಹಾಗೂ ಈ ಮನೆಗೆ ಹೊಂದಿಕೊಂಡಿರುವ ಮೀನಾಕ್ಷಿ ಅವರ ನಾದಿನಿ ಸುವರ್ಣ ಅವರ ಮನೆಯ ಬಾಗಿಲು ಮುರಿದು 20 ಗ್ರಾಂ ಚಿನ್ನಾಭರಣ ಮತ್ತು ₹5 ಸಾವಿರ ಹಣ ದೋಚಿ ಪರಾರಿಯಾಗಿದ್ದಾರೆ.</p>.<p>ಗುರುವಾರ ಮುಂಜಾನೆ ಸುಮಾರು ಎರಡು ಗಂಟೆ ಸಮಯದಲ್ಲಿ ಈ ಕೃತ್ಯ ನಡೆದಿದೆ. ಮೂರು ಮಂದಿ ಮನೆಗೆ ನುಗ್ಗಿದ್ದರು. ಕೊಲೆ ಮಾಡುವುದಾಗಿ ಬೆದರಿಸಿ ಚಿನ್ನಾಭರಣ ಮತ್ತು ಹಣ ಕಸಿದುಕೊಂಡರು ಎಂದು ನಿಸರ್ಗ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ. ಸುವರ್ಣ ಅವರೂ ದೂರು ನೀಡಿದ್ದಾರೆ ಎಂದು ಗ್ರಾಮಾಂತರ ಠಾಣೆ ಸಿಪಿಐ ಆನಂದಕುಮಾರ್ ಎಚ್ ತಿಳಿಸಿದ್ದಾರೆ.</p>.<p>ಕೃತ್ಯ ನಡೆದ ಒಂದು ತಾಸಿನಲ್ಲಿ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಹೆಚ್ಚುವರಿ ಎಸ್ಪಿಗಳಾದ ತಿಮ್ಮಯ್ಯ, ಗಂಗಾಧರಸ್ವಾಮಿ, ಡಿವೈಎಸ್ಪಿ ಶಾಂತಮಲ್ಲಪ್ಪ, ಸಿಪಿಐ ಆನಂದಕುಮಾರ್ ಸ್ಥಳಕ್ಕೆ ಭೇಟಿ ನೀಡಿದ್ದರು. ಶ್ವಾನದಳ ಮತ್ತು ಬೆರಳಚ್ಚು ತಜ್ಞರನ್ನು ಕರೆಸಲಾಗಿತ್ತು. ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>
<p><strong>ಶ್ರೀರಂಗಪಟ್ಟಣ</strong>: ತಾಲ್ಲೂಕಿನ ಕೂಡಲಕುಪ್ಪೆ ಗ್ರಾಮದ ಎರಡು ಮನೆಗಳಿಗೆ ಗುರುವಾರ ಮುಂಜಾನೆ ನುಗ್ಗಿದ ದುಷ್ಕರ್ಮಿಗಳು ಚಿನ್ನಾಭರಣ ಮತ್ತು ನಗದು ದೋಚಿದ್ದಾರೆ.</p>.<p>ಗ್ರಾಮದ ಸುವರ್ಣ ಮತ್ತು ನಿಸರ್ಗ ಎಂಬವರ ಮನೆಗಳ ಬಾಗಿಲು ಮುರಿದು ಒಳ ನುಗ್ಗಿರುವ ದುಷ್ಕರ್ಮಿಗಳು 60 ಗ್ರಾಂ ಚಿನ್ನಾಭರಣ ಮತ್ತು ₹1.05ಲಕ್ಷ ಹಣ ಕದ್ದೊಯ್ದಿದ್ದಾರೆ. ಮೊದಲು ನಿಸರ್ಗ ಅವರ ಮನೆಗೆ ನುಗ್ಗಿದ್ದು, ನಿಸರ್ಗ ಮತ್ತು ಅವರ ತಾಯಿ ಮೀನಾಕ್ಷಿ ಅವರನ್ನು ಬೆದರಿಸಿ ಅವರ ಬಳಿ ಇದ್ದ 40 ಗ್ರಾಂ ಚಿನ್ನಾಭರಣ ಮತ್ತು ₹1 ಲಕ್ಷ ನಗದು ಹಾಗೂ ಈ ಮನೆಗೆ ಹೊಂದಿಕೊಂಡಿರುವ ಮೀನಾಕ್ಷಿ ಅವರ ನಾದಿನಿ ಸುವರ್ಣ ಅವರ ಮನೆಯ ಬಾಗಿಲು ಮುರಿದು 20 ಗ್ರಾಂ ಚಿನ್ನಾಭರಣ ಮತ್ತು ₹5 ಸಾವಿರ ಹಣ ದೋಚಿ ಪರಾರಿಯಾಗಿದ್ದಾರೆ.</p>.<p>ಗುರುವಾರ ಮುಂಜಾನೆ ಸುಮಾರು ಎರಡು ಗಂಟೆ ಸಮಯದಲ್ಲಿ ಈ ಕೃತ್ಯ ನಡೆದಿದೆ. ಮೂರು ಮಂದಿ ಮನೆಗೆ ನುಗ್ಗಿದ್ದರು. ಕೊಲೆ ಮಾಡುವುದಾಗಿ ಬೆದರಿಸಿ ಚಿನ್ನಾಭರಣ ಮತ್ತು ಹಣ ಕಸಿದುಕೊಂಡರು ಎಂದು ನಿಸರ್ಗ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ. ಸುವರ್ಣ ಅವರೂ ದೂರು ನೀಡಿದ್ದಾರೆ ಎಂದು ಗ್ರಾಮಾಂತರ ಠಾಣೆ ಸಿಪಿಐ ಆನಂದಕುಮಾರ್ ಎಚ್ ತಿಳಿಸಿದ್ದಾರೆ.</p>.<p>ಕೃತ್ಯ ನಡೆದ ಒಂದು ತಾಸಿನಲ್ಲಿ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಹೆಚ್ಚುವರಿ ಎಸ್ಪಿಗಳಾದ ತಿಮ್ಮಯ್ಯ, ಗಂಗಾಧರಸ್ವಾಮಿ, ಡಿವೈಎಸ್ಪಿ ಶಾಂತಮಲ್ಲಪ್ಪ, ಸಿಪಿಐ ಆನಂದಕುಮಾರ್ ಸ್ಥಳಕ್ಕೆ ಭೇಟಿ ನೀಡಿದ್ದರು. ಶ್ವಾನದಳ ಮತ್ತು ಬೆರಳಚ್ಚು ತಜ್ಞರನ್ನು ಕರೆಸಲಾಗಿತ್ತು. ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>