ಪಟ್ಟಣದಲ್ಲಿ ಐತಿಹಾಸಿಕ ಕೋಟೆ, ಕಂದಕ, ಜೈಲುಗಳು, ಅರಮನೆ, ದೇಗುಲಗಳು, ಮಸೀದಿ, ಇಗರ್ಜಿಗಳಿವೆ. ಸ್ಮಾರಕ ಮತ್ತು ಶ್ರದ್ಧಾ ಕೇಂದ್ರಗಳನ್ನು ನೋಡಲೆಂದೇ ಪ್ರವಾಸಿಗರು ಸಹಸ್ರಾರು ಮೈಲುಗಳ ದೂರದ ಊರುಗಳಿಂದ ಇಲ್ಲಿಗೆ ಬರುತ್ತಾರೆ. ಇಲ್ಲಿಗೆ ಬರುವ ಪ್ರವಾಸಿಗರು ಮತ್ತು ಯಾತ್ರಾರ್ಥಿಗಳಿಂದ ಸರ್ಕಾರಕ್ಕೆ ಆದಾಯವೂ ಬರುತ್ತಿದೆ. ಆದರೆ, ಅವರಿಗೆತೃಪ್ತಿದಾಯಕ ಸೌಕರ್ಯಗಳನ್ನು ಕಲ್ಪಿಸಿಲ್ಲ. ಪ್ರವಾಸೋದ್ಯಮ, ಮುಜರಾಯಿ ಮತ್ತು ಪ್ರಾಚ್ಯವಸ್ತು ಇಲಾಖೆಗಳು ಇದುವರೆಗೆ ಇತ್ತ ಗಮನ ಹರಿಸಿಲ್ಲ. ಪ್ರವಾಸದ ಖುಷಿ ಅನುಭವಿಸಲು ಬರುವವರು ಸವಲತ್ತುಗಳ ಕೊರತೆಯಿಂದಾಗಿ ಫಜೀತಿ ಅನುಭವಿಸುತ್ತಿದ್ದಾರೆ.