‘ಸಕ್ಕರೆ ಕಾರ್ಖಾನೆಯಿಂದ ಬರುವ ದೂಳು ವಿವಿಧ ಸಮಸ್ಯೆಗಳನ್ನು ತಂದೊಡ್ಡುತ್ತಿದೆ. ವೃದ್ಧರು ಮತ್ತು ರೋಗಿಗಳು ಹೆಚ್ಚು ಸಮಸ್ಯೆ ಅನುಭವಿಸುತ್ತಿದ್ದಾರೆ. ದೂಳು ಹರಡುವುದನ್ನು ತಡೆಯುವಂತೆ ಕಾರ್ಖಾನೆಯ ಪ್ರಧಾನ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಿದ್ದರೂ ಪ್ರಯೋಜನ ಆಗಿಲ್ಲ’
-ಸಿ.ಎಂ. ಜ್ಞಾನೇಶ್, ಚಂದಗಿರಿಕೊಪ್ಪಲು
‘ಕಾರ್ಖಾನೆಯಿಂದ ಬರುವ ಕಪ್ಪು ದೂಳು ಮನೆಗಳ ಒಳಕ್ಕೂ ಬರುತ್ತಿದೆ. ಆಹಾರ ಮತ್ತು ನೀರಿಗೂ ಬೀಳುತ್ತಿದೆ. ಸಿಹಿ ಕೊಡುವ ಕಾರ್ಖಾನೆ ಕಹಿಯ ವಾತಾವರಣ ಉಂಟುಮಾಡುತ್ತಿದೆ. ದೂಳು ಹರಡುವುದನ್ನು ತಡೆಯಲು ಮಾಲಿನ್ಯ ನಿಯಂತ್ರಣ ಮಂಡಳಿ ತಕ್ಷಣ ಕ್ರಮ ವಹಿಸಬೇಕು’
-ನೆಲಮನೆ ಬಿ. ಚಲುವೇಗೌಡ, ಅಧ್ಯಕ್ಷರು, ಪಿಕಾರ್ಡ್ ಬ್ಯಾಂಕ್
‘ಕಾರ್ಖಾನೆಯಿಂದ ಬರುವ ದೂಳಿನಿಂದ ಸಮಸ್ಯೆ ಉಂಟಾಗುತ್ತಿರುವ ವಿಷಯವನ್ನು ಆಸುಪಾಸಿನ ಗ್ರಾಮಗಳ ಜನರು ಗಮನಕ್ಕೆ ತಂದಿದ್ದಾರೆ. ಅದನ್ನು ತಡೆಯಲು ಕಾಲಾವಕಾಶ ಬೇಕಾಗುತ್ತದೆ. ಈ ಬಗ್ಗೆ ಕಾರ್ಖಾನೆಯ ಮಾಲೀಕರ ಜತೆ ಚರ್ಚಿಸಲಾಗುವುದು’
-ರವಿ, ಪ್ರಧಾನ ವ್ಯವಸ್ಥಾಪಕ, ನಿರಾಣಿ ಶುಗರ್ಸ್ ಪ್ರೈ. ಲಿಮಿಟೆಡ್