‘2022ರಲ್ಲೂ ದೇವಾಲಯ ಗೋಚರಿಸಿತ್ತು, ಈಗ ಮತ್ತೆ ಕಾಣಿಸುತ್ತಿದ್ದು ಮೇ ತಿಂಗಳವರೆಗೂ ಕುಡಿಯುವ ನೀರು ಸಿಗುವುದು ಅನುಮಾನ. ಬೆಳೆದು ನಿಂತಿರುವ ಲಕ್ಷಾಂತರ ಎಕರೆ ಬೆಳೆ ನಾಶವಾಗುವುದು ನಿಶ್ಚಿತ. ಜನ, ಜಾನುವಾರುಗಳನ್ನು ಕಾಪಾಡುವವರು ಯಾರು’ ಎಂದು ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಮುಖಂಡ ಕೆ.ಬೋರಯ್ಯ ಪ್ರಶ್ನಿಸಿದರು.