ಮದ್ದೂರು ಪಟ್ಟಣದ ಕೆಮ್ಮಣ್ಣನಾಲೆ ವೃತ್ತದ ಸಮೀಪ ವಾಸವಾಗಿರುವ ವೈದ್ಯ ವಿಷ್ಣು ಅವರ ಪುತ್ರ ಪ್ರಸಾದ್ ನಾಗರಹಾವಿನ ಕಡಿತದಿಂದ ತಪ್ಪಿಸಿಕೊಂಡ ಬಾಲಕ. ಪ್ರಸಾದ್ ತನ್ನ ತಾಯಿ ಪ್ರಿಯಾ ಜತೆ ಮನೆಯಿಂದ ಹೊರ ಬಂದು ಮೆಟ್ಟಿಲು ಇಳಿಯುವಾಗ ನಾಗರಹಾವನ್ನು ಗಮನಿಸದೆ ಕಾಲಿಟ್ಟಿದ್ದಾನೆ. ಕೂಡಲೇ ಹಾವು ಹೆಡೆ ಎತ್ತಿ ಬುಸುಗುಟ್ಟಿ ಕಚ್ಚಲು ಮುಂದಾಗಿದೆ. ಕೂಡಲೇ ಎಚ್ಚೆತ್ತುಕೊಂಡ ಪ್ರಿಯಾ ಅವರು ಮಗನನ್ನು ತನ್ನತ್ತ ಎಳೆದುಕೊಂಡಿದ್ದಾರೆ. ನಂತರ ಹಾವು ಪಕ್ಕಕ್ಕೆ ಸರಿದು ಹೋಗುವ ದೃಶ್ಯ ವಿಡಿಯೊದಲ್ಲಿ ಸೆರೆಯಾಗಿದೆ.