ತಾಲ್ಲೂಕಿನ ಹುಳ್ಳೇನಹಳ್ಳಿ ಗ್ರಾಮದ ಜ್ಯೋತಿ (33) ತಾಯಿ, ನಿಸರ್ಗ (7), ಪವನ್ (4) ಮೃತ ಮಕ್ಕಳು. ಶುಕ್ರವಾರ ಮಧ್ಯಾಹ್ನ ನಾಲೆಗೆ ಬಿದ್ದು ಕೊಚ್ಚಿ ಹೋಗುತ್ತಿದ್ದ ಜ್ಯೋತಿಯನ್ನು ಅಕ್ಕಪಕ್ಕದ ಹೊಲಗಳಲ್ಲಿ ಕೆಲಸ ಮಾಡುತ್ತಿದ್ದ ರೈತರು ಮೇಲೆತ್ತಿ ರಕ್ಷಣೆ ಮಾಡಲು ಯತ್ನಿಸಿದರು. ಆದರೆ ಸಾಕಷ್ಟು ನೀರು ಕುಡಿದಿದ್ದ ಕಾರಣ ಅವರು ಮೃತಪಟ್ಟರು. ಇಬ್ಬರೂ ಮಕ್ಕಳು ಕೊಚ್ಚಿ ಹೋಗಿದ್ದು ಪೊಲೀಸರು ಮೃತದೇಹಕ್ಕಾಗಿ ಹುಡುಕುತ್ತಿದ್ದಾರೆ. ಶಿವಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.