<p>ಮಂಡ್ಯ: ಬೀದಿ ನಾಯಿಗಳನ್ನು ಹಿಡಿದು ಕಾಡಿಗೆ ಬಿಡಲು ಬುಧವಾರ ನಡೆದ ನಗರಸಭೆ ಸಾಮಾನ್ಯಸಭೆಯಲ್ಲಿ ಸರ್ವಾನುಮತದಿಂದ ತೀರ್ಮಾನಿ ಸಲಾಯಿತು.<br /> <br /> ಬೀದಿ ನಾಯಿ ಹಾವಳಿ ತಪ್ಪಿಸಲು ಶೀಘ್ರದಲ್ಲಿಯೇ ಕಾರ್ಯಾಚರಣೆ ಆರಂಭಿಸಲಾಗುವುದು. ತಪ್ಪು ಎಂದು ಜೈಲಿಗೆ ಹಾಕಿದರೂ ಸರಿ, ಅನರ್ಹ ಗೊಳಿಸಿದರೂ ಸರಿ. ಎದುರಿಸಲು ಸಿದ್ದರಿದ್ದೇವೆ ಎಂದು ನಗರಸಭೆ ಅಧ್ಯಕ್ಷ ಬಿ. ಸಿದ್ದರಾಜು ಹೇಳಿದರು.<br /> <br /> ಸದಸ್ಯ ಎಂ.ಜೆ. ಚಿಕ್ಕಣ್ಣ ಮಾತನಾಡಿ, ಬೀದಿ ನಾಯಿಗಳ ಹಾವಳಿ ಜಾಸ್ತಿ ಯಾಗಿದೆ. ನಿಯಂತ್ರಣಕ್ಕೆ ನಗರಸಭೆ ಏನು ಕ್ರಮಕೈಗೊಂಡಿದೆ ಎಂದು ಪ್ರಶ್ನಿಸಿದರು. ಇದಕ್ಕೆ ಸದಸ್ಯೆ ಸುಜಾತಾಮಣಿ ಧ್ವನಿಗೂಡಿಸಿದರು.<br /> <br /> ಸದಸ್ಯ ಕೆ.ಸಿ. ರವೀಂದ್ರ ಮಾತನಾಡಿ, ಜನರು ರೊಚ್ಚಿಗೆ ಏಳುವ ಮುನ್ನ ನಿಯಂತ್ರಣಕ್ಕೆ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.<br /> ಸದಸ್ಯ ಮಹೇಶ್ಕೃಷ್ಣ ಮಾತನಾಡಿ, ಸಂತಾನಶಕ್ತಿ ಹರಣ ಮಾಡಿದರೆ ಮುಂದೆ ಸಂತಾನ ಬೆಳೆಯದಂತೆ ತಡೆಯಬಹುದು. ಈಗಿರುವ ನಾಯಿಗಳ ಹಾವಳಿಯನ್ನು ಹೇಗೆ ತಪ್ಪಿಸುತ್ತೀರಿ ಎಂದು ಪ್ರಶ್ನಿಸಿದರು.<br /> <br /> ಅಧ್ಯಕ್ಷ ಬಿ. ಸಿದ್ದರಾಜು ಮಾತನಾಡಿ, ಎಬಿಸಿ ಮಾಡಲು ಟೆಂಡರ್್ ಕರೆದರೂ ಯಾವುದೇ ಗುತ್ತಿಗೆದಾರರು ಮುಂದೆ ಬಂದಿಲ್ಲ. ಎಬಿಸಿ ಬೇಕಾದಷ್ಟು ಹಣವೂ ನಗರಸಭೆಯಲ್ಲಿ ಇಲ್ಲ. ಪ್ರಾಣಿದಯಾ ಸಂಘದವರಿಗೆ ಹೇಳಿದ್ದೇನೆ. ಈ ಬಗ್ಗೆ ರಾಜ್ಯಮಟ್ಟದಲ್ಲಿ ಚರ್ಚೆ ಮಾಡಿ ಒಂದು ನಿರ್ಧಾರಕ್ಕೆ ಬರಲಾಗುವುದು ಎಂದರು.<br /> <br /> ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಸದಸ್ಯರು, ಅಷ್ಟರೊಳಗೆ ನಮ್ಮ ಅಧಿಕಾರವಧಿ ಮುಗಿದಿರುತ್ತದೆ. ಕೂಡಲೇ ಪರಿಹಾರ ಒದಗಿಸಬೇಕು ಎಂದರು.<br /> <br /> ಪೌರಾಯುಕ್ತ ಡಾ.ದಾಸೇಗೌಡ ಮಾತನಾಡಿ, 2012ರಲ್ಲಿ 2 ಸಾವಿರ ನಾಯಿಗಳ ಸಂತಾನಶಕ್ತಿ ಹರಣ ಮಾಡಲು ₨ 14.50 ಲಕ್ಷ ಖರ್ಚಾಗಿದೆ. 1058 ನಾಯಿಗೆ ₨ 1.30 ಲಕ್ಷ ಖರ್ಚಾಗಿದೆ. ಬೇರೆ ನಗರಸಭೆಗಳಲ್ಲಿ ಮಾಹಿತಿ ತೆಗೆದುಕೊಂಡೇ ಜಾರಿಗೊಳಿಸಲಾಗಿತ್ತು ಎಂದು ತಿಳಿಸಿದರು.<br /> <br /> ಈ ಹಿಂದೆ ಎಬಿಸಿ ಮಾಡಿದ್ದ ತಂಡವೇ ಪ್ರಾಣಿದಯಾ ಸಂಘದ ಹೆಸರಿನಲ್ಲಿ ಪ್ರತಿಭಟನೆ ಮಾಡಿದ್ದರು. ಟೆಂಡರ್ ಹಾಕಲೂ ಉತ್ಸುಕರಾಗಿದ್ದರು. ನಂತರ ಬೆಳವಣಿಗೆಗಳಿಂದಾಗಿ ಹಿಂದೆ ಸರಿದಿದ್ದಾರೆ ಎಂಬುದನ್ನು ಬಹಿರಂಗಪಡಿಸಿದರು.<br /> <br /> ರಸ್ತೆ ಬದಿ ವ್ಯಾಪಾರಿಗಳ ಎತ್ತಂಗಡಿ ಮಾಡಲಾಗಿತ್ತು. ಮತ್ತೆ ಅದೇ ಸ್ಥಳದಲ್ಲಿ ವ್ಯಾಪಾರ ಮಾಡುತ್ತಿದ್ದಾರೆ. ಕಾರ್ಯಾಚರಣೆ ಏನಾಗಿದೆ ಎಂದು ಸದಸ್ಯ ಚಿಕ್ಕಣ್ಣ, ಚಂದ್ರಕುಮಾರ್್, ಸೋಮಶೇಖರ್ ಕೆರಗೋಡು ಮತ್ತಿತರರು ಪ್ರಶ್ನಿಸಿದರು.<br /> <br /> ಅಧ್ಯಯನ ಪ್ರವಾಸಕ್ಕೆ ಒಪ್ಪಿಗೆ: ಎಲ್ಲ ಸದಸ್ಯರು ಅಧ್ಯಯನ ಪ್ರವಾಸ ಕೈಗೊಳ್ಳಲು ಸಭೆ ಸರ್ವಾನುಮತದಿಂದ ತೀರ್ಮಾನಿಸಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಮಂಡ್ಯ: ಬೀದಿ ನಾಯಿಗಳನ್ನು ಹಿಡಿದು ಕಾಡಿಗೆ ಬಿಡಲು ಬುಧವಾರ ನಡೆದ ನಗರಸಭೆ ಸಾಮಾನ್ಯಸಭೆಯಲ್ಲಿ ಸರ್ವಾನುಮತದಿಂದ ತೀರ್ಮಾನಿ ಸಲಾಯಿತು.<br /> <br /> ಬೀದಿ ನಾಯಿ ಹಾವಳಿ ತಪ್ಪಿಸಲು ಶೀಘ್ರದಲ್ಲಿಯೇ ಕಾರ್ಯಾಚರಣೆ ಆರಂಭಿಸಲಾಗುವುದು. ತಪ್ಪು ಎಂದು ಜೈಲಿಗೆ ಹಾಕಿದರೂ ಸರಿ, ಅನರ್ಹ ಗೊಳಿಸಿದರೂ ಸರಿ. ಎದುರಿಸಲು ಸಿದ್ದರಿದ್ದೇವೆ ಎಂದು ನಗರಸಭೆ ಅಧ್ಯಕ್ಷ ಬಿ. ಸಿದ್ದರಾಜು ಹೇಳಿದರು.<br /> <br /> ಸದಸ್ಯ ಎಂ.ಜೆ. ಚಿಕ್ಕಣ್ಣ ಮಾತನಾಡಿ, ಬೀದಿ ನಾಯಿಗಳ ಹಾವಳಿ ಜಾಸ್ತಿ ಯಾಗಿದೆ. ನಿಯಂತ್ರಣಕ್ಕೆ ನಗರಸಭೆ ಏನು ಕ್ರಮಕೈಗೊಂಡಿದೆ ಎಂದು ಪ್ರಶ್ನಿಸಿದರು. ಇದಕ್ಕೆ ಸದಸ್ಯೆ ಸುಜಾತಾಮಣಿ ಧ್ವನಿಗೂಡಿಸಿದರು.<br /> <br /> ಸದಸ್ಯ ಕೆ.ಸಿ. ರವೀಂದ್ರ ಮಾತನಾಡಿ, ಜನರು ರೊಚ್ಚಿಗೆ ಏಳುವ ಮುನ್ನ ನಿಯಂತ್ರಣಕ್ಕೆ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.<br /> ಸದಸ್ಯ ಮಹೇಶ್ಕೃಷ್ಣ ಮಾತನಾಡಿ, ಸಂತಾನಶಕ್ತಿ ಹರಣ ಮಾಡಿದರೆ ಮುಂದೆ ಸಂತಾನ ಬೆಳೆಯದಂತೆ ತಡೆಯಬಹುದು. ಈಗಿರುವ ನಾಯಿಗಳ ಹಾವಳಿಯನ್ನು ಹೇಗೆ ತಪ್ಪಿಸುತ್ತೀರಿ ಎಂದು ಪ್ರಶ್ನಿಸಿದರು.<br /> <br /> ಅಧ್ಯಕ್ಷ ಬಿ. ಸಿದ್ದರಾಜು ಮಾತನಾಡಿ, ಎಬಿಸಿ ಮಾಡಲು ಟೆಂಡರ್್ ಕರೆದರೂ ಯಾವುದೇ ಗುತ್ತಿಗೆದಾರರು ಮುಂದೆ ಬಂದಿಲ್ಲ. ಎಬಿಸಿ ಬೇಕಾದಷ್ಟು ಹಣವೂ ನಗರಸಭೆಯಲ್ಲಿ ಇಲ್ಲ. ಪ್ರಾಣಿದಯಾ ಸಂಘದವರಿಗೆ ಹೇಳಿದ್ದೇನೆ. ಈ ಬಗ್ಗೆ ರಾಜ್ಯಮಟ್ಟದಲ್ಲಿ ಚರ್ಚೆ ಮಾಡಿ ಒಂದು ನಿರ್ಧಾರಕ್ಕೆ ಬರಲಾಗುವುದು ಎಂದರು.<br /> <br /> ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಸದಸ್ಯರು, ಅಷ್ಟರೊಳಗೆ ನಮ್ಮ ಅಧಿಕಾರವಧಿ ಮುಗಿದಿರುತ್ತದೆ. ಕೂಡಲೇ ಪರಿಹಾರ ಒದಗಿಸಬೇಕು ಎಂದರು.<br /> <br /> ಪೌರಾಯುಕ್ತ ಡಾ.ದಾಸೇಗೌಡ ಮಾತನಾಡಿ, 2012ರಲ್ಲಿ 2 ಸಾವಿರ ನಾಯಿಗಳ ಸಂತಾನಶಕ್ತಿ ಹರಣ ಮಾಡಲು ₨ 14.50 ಲಕ್ಷ ಖರ್ಚಾಗಿದೆ. 1058 ನಾಯಿಗೆ ₨ 1.30 ಲಕ್ಷ ಖರ್ಚಾಗಿದೆ. ಬೇರೆ ನಗರಸಭೆಗಳಲ್ಲಿ ಮಾಹಿತಿ ತೆಗೆದುಕೊಂಡೇ ಜಾರಿಗೊಳಿಸಲಾಗಿತ್ತು ಎಂದು ತಿಳಿಸಿದರು.<br /> <br /> ಈ ಹಿಂದೆ ಎಬಿಸಿ ಮಾಡಿದ್ದ ತಂಡವೇ ಪ್ರಾಣಿದಯಾ ಸಂಘದ ಹೆಸರಿನಲ್ಲಿ ಪ್ರತಿಭಟನೆ ಮಾಡಿದ್ದರು. ಟೆಂಡರ್ ಹಾಕಲೂ ಉತ್ಸುಕರಾಗಿದ್ದರು. ನಂತರ ಬೆಳವಣಿಗೆಗಳಿಂದಾಗಿ ಹಿಂದೆ ಸರಿದಿದ್ದಾರೆ ಎಂಬುದನ್ನು ಬಹಿರಂಗಪಡಿಸಿದರು.<br /> <br /> ರಸ್ತೆ ಬದಿ ವ್ಯಾಪಾರಿಗಳ ಎತ್ತಂಗಡಿ ಮಾಡಲಾಗಿತ್ತು. ಮತ್ತೆ ಅದೇ ಸ್ಥಳದಲ್ಲಿ ವ್ಯಾಪಾರ ಮಾಡುತ್ತಿದ್ದಾರೆ. ಕಾರ್ಯಾಚರಣೆ ಏನಾಗಿದೆ ಎಂದು ಸದಸ್ಯ ಚಿಕ್ಕಣ್ಣ, ಚಂದ್ರಕುಮಾರ್್, ಸೋಮಶೇಖರ್ ಕೆರಗೋಡು ಮತ್ತಿತರರು ಪ್ರಶ್ನಿಸಿದರು.<br /> <br /> ಅಧ್ಯಯನ ಪ್ರವಾಸಕ್ಕೆ ಒಪ್ಪಿಗೆ: ಎಲ್ಲ ಸದಸ್ಯರು ಅಧ್ಯಯನ ಪ್ರವಾಸ ಕೈಗೊಳ್ಳಲು ಸಭೆ ಸರ್ವಾನುಮತದಿಂದ ತೀರ್ಮಾನಿಸಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>